|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Saturday, July 9, 2011

ಹೀಗೇಕೆ...?

* ಗಂಡನ ಸಂಬಳ ತಿಂಗಳಿಗೆ 1 ಲಕ್ಷ; ಆದರೆ ಹೆಂಡತಿಯೂ ದುಡಿಯಲೇಬೇಕು!

* Softfare ಗುದ್ದಾಟದಲ್ಲಿ ಮಕ್ಕಳಾಗಿದ್ದಾವೆ Toy-ware.

* ಮದುವೆ ಈಗ ಎರಡು 'ಮನ' ಗಳ ಸಮಾಗಮವಲ್ಲ; ಎರಡು 'money' ಗಳ ಸಂಗಮ.

* ಮಾನವ ಜನ್ಮ ದೊಡ್ಡದು; ಆದರೆ ಮಾನವನ ಬುದ್ಧಿ....?

* ನಕ್ಕರೆ ಅದೇ ಸ್ವರ್ಗ; ಬಿದ್ದರೆ ಬೇರೆಯವರಿಗೆ ಸ್ವರ್ಗ

* 'ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು' - ಕುಡಿದರಾಯಿತು ಬಿಡಿ        ಎನ್ನುವರೇ ಬಹು ಮಂದಿ.

* ಮೂರು ಬಿಟ್ಟವರು ನಾಯಕರು; ಮೂರೂ ಇದ್ದವರು ಅಮಾಯಕರು

* ನಾಲ್ಕಾಣೆ ಕಾಣೆ; ಆಣೆಗೆ ಮಂಜುನಾಥನೇ ಹೊಣೆ

* ಕ್ರಿಕೆಟ್ ಗಿದೆ ಎಲ್ಲಾ ಸವಲತ್ತು; ಬೇರೆ ಆಟಗಳಿಗಿಲ್ಲ ಕವಡೆ ಕಿಮ್ಮತ್ತು.

* 'ಎಲೆ ಮರೆಯ ಕಾಯಿ'ಗಳನ್ನು ಹುಡುಕಿ, ಹೆಕ್ಕಿ, ತೆಗೆದು ಬಳಸುವ ವ್ಯವಧಾನ ಯಾರಿಗೂ ಇಲ್ಲ.

* 'Job satisfaction' ಗಿಂತ 'ಜೋಬ್ satisfaction' ಮೇಲು

* ಕುರಿ ಕಟುಕನನ್ನು ಹಿಂಬಾಲಿಸುವಂತೆ ಹೆಚ್ಚು ಹಣ ಕೀಳುವ ವೈದ್ಯರನ್ನೇ ಜನ ನಂಬುತ್ತಾರೆ.

* ಅಲೋಪತಿಯ ಅಡ್ಡ ಪರಿಣಾಮಗಳ ಅರಿವಿದ್ದೂ ಜನ ಅದಕ್ಕೇ ಜೋತು ಬೀಳುತ್ತಾರೆ.

ರಾಜಕೀಯ ಅಗ್ನಿಹೋತ್ರ
ಊರಿನ ಕೆರೆ ಕಟ್ಟೆ           ..            ..       ಸ್ವಾಹಾ
ಊರಿನ ನಿವೇಶನಗಳು    ..            ..       ಸ್ವಾಹಾ
ಊರಿನ ಗೋಮಾಳ        ..            ..       ಸ್ವಾಹಾ
ಊರಿನ ಮಾನಮರ್ಯಾದೆ             ..       ಸ್ವಾಹಾ
ಊರಿನ ಬಡರೈತರ ಜಮೀನು         ..       ಸ್ವಾಹಾ
ಸರ್ವಂ                         ..            ..       ಸ್ವಾಹಾ

ಇದೆಲ್ಲಾ ನನ್ನದೇ             ..            ..       ಸ್ವಾಹಾ


1 comment: