|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Sunday, December 26, 2010

"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು..."


¢£À¤vÀåzÀ ªÀÈvÀÛ¥ÀwæPÉUÀ¼À£ÀÄß £ÉÆÃr; ««zsÀ n.«. ¸ÀÄ¢Ý bÁ£À¯ïUÀ¼À°è §gÀĪÀ §tÚ §tÚzÀ ¸ÀÄ¢Ý avÀæUÀ¼À£ÀÄß £ÉÆÃr. ¥Àæw ¢£À ¥Àæw PÉëÃvÀæzÀ®Æè ºÉƸÀ ºÉƸÀ ¸ÀÄ¢Ý, ºÉƸÀ ºÉƸÀ ªÉõÀ, ºÉƸÀ ºÉƸÀ ¤®ÄªÀÅ, ºÉƸÀ ºÉƸÀ «ZÁgÀUÀ¼ÀÄ; CµÉÖà KPÉ? FUÁrzÀ ªÀiÁvÀÄ ¸Àé®à ºÉÆwÛUÉà vÁ£ÀÄ ºÁUÉ ºÉüÀ°®è; vÀ£Àß ªÀiÁvÀÄUÀ¼À£ÀÄß wgÀÄZÀ¯ÁVzÉ JA§ £ÁlPÀUÀ¼ÀÄ. »ÃUÉ £ÉÆÃqÀÄvÁÛ ºÉÆÃzÀgÉ, ¥ÀæwAiÉÆAzÀÄ PÉëÃvÀæzÀ°èAiÀÄÆ £Á«AzÀÄ CzÀÄãvÀªÁzÀ ¥Àæw¨sɬÄgÀĪÀ £ÀlgÀ£ÀÄß £ÉÆÃqÀ§ºÀÄzÁVzÉ! gÀAUÀªÀÄA¢gÀzÀ CªÀ±ÀåPÀvÉAiÉÄà E°è®è. CªÀgÀªÀgÀ PÁAiÀÄðPÉëÃvÀæªÉà CªÀgÀªÀgÀ gÀAUÀªÀÄAZÀ. E°è ¤zÉÃð±ÀPÀ£ÀÆ E®è, ªÉÄÃPÀ¥ï ªÀiÁqÀĪÀªÀ£ÀÆ E®è, ªÀÄvÁåªÀÅzÉà ¹zÀÞvÉUÀ¼ÀÆ E®è. J®èªÀÇ ‘E£ÀìmÉAmï’! MAzÀÄ jÃw ©Ã¢ £ÁlPÀUÀ½zÀÝAvÉ. ªÀiÁ£ÀªÀ PÀÄ® MAzÉà DzÀgÀÆ, J®è ªÀiÁ£ÀªÀgÀÆ MAzÉà jÃw EzÀÝgÀÆ PÀÆqÀ CªÀgÀªÀgÀ £ÀqÉ-£ÀÄr, §Ä¢ÞªÀÄvÉÛ, P˱À®å ªÀÄvÉÛ¯Áè UÀÄtUÀ¼ÀÆ ¨ÉÃgÉ ¨ÉÃgÉAiÉÄÃ. M§âjAzÀÝAvÉ ªÀÄvÉÆÛ§âgÀ£ÀÄß Erà ¥Àæ¥ÀAZÀ ºÀÄqÀÄQzÀgÀÆ £ÉÆÃqÀ¯Ájj. EzÉà ¸Àȶ×AiÀÄ «avÀæ; gÀºÀ¸ÀåªÉAzÀgÀÆ ¸ÀjAiÉÄÃ. ¥ÀæwAiÉƧ⠪ÀåQÛUÀÆ vÀ£ÀßzÉà DzÀ «²µÀÖ ªÀåQÛvÀé EzÉ; ¨sÁªÀ£ÉUÀ½ªÉ; ¸ÀàAzÀ£ÉUÀ½ªÉ; DAiÉÄÌUÀ½ªÉ; avÀæ-«avÀæ ºÁªÀ-¨sÁªÀUÀ½ªÉ; gÀÄa-CgÀÄaUÀ½ªÉ. ¥ÀæwAiÉƧ⠪ÀåQÛAiÀÄÆ vÀ£ÀßzÉà DzÀ UÀÄt-«²µÀÖUÀ¼À£ÀÄß ºÉÆA¢gÀĪÀÅzÀjAzÀ¯Éà F ¥Àæ¥ÀAZÀzÀ vÀÄA¨Á £Á£Á vÀgÀºÀzÀ UÀÄt-«±ÉõÀUÀ¼ÀļÀî, £Á£Á vÀgÀºÀzÀ ºÁªÀ-¨sÁªÀUÀ¼ÀļÀî, £Á£Á vÀgÀºÀzÀ £ÀqÉ-£ÀÄrUÀ¼ÀļÀî, £Á£Á vÀgÀºÀzÀ ªÉõÀ-¨sÀƵÀtUÀ¼ÀļÀî, £Á£Á vÀgÀºÀzÀ DZÁgÀ-«ZÁgÀUÀ¼ÀļÀî ºÁUÀÆ £Á£Á vÀgÀºÀzÀ ‘£ÁlPÀ’(?) UÀ¼À£ÁßqÀ§®è d£ÀgÀ£ÀÄß £Á«AzÀÄ £ÉÆÃqÀ§ºÀÄzÁVzÉ. MªÉÄä AiÉÆÃa¹ £ÉÆÃr - ¥Àæ¥ÀAZÀzÀ°è J®ègÀÆ MAzÉà jÃwAiÀÄ UÀÄt-¸Àé¨sÁªÀªÀżÀîªÀgÁVzÀÝgÉ §ºÀıÀ: F fêÀ£ÀzÀ°è ¸ÁégÀ¸ÀåªÉà EgÀÄwÛgÀ°®èªÉãÉÆÃ! EAvÀºÀ ‘gÀAUÀÄ-gÀAVïÁ’ d£ÀjgÀĪÀÅzÀjAzÀ¯Éà ¨Á¼ÀÄ ªÉÊ«zsÀåªÀÄAiÀÄ, ºÁ¸ÀåªÀÄAiÀÄ, zÀÄ:RªÀÄAiÀÄ, PÀAlPÀªÀÄAiÀÄ, ¸ÁºÀ¸ÀªÀÄAiÀÄ ªÀÄvÀÄÛ ¸ÀàzsÁðªÀÄAiÀĪÁVgÀĪÀÅzÀÄ.

£ÉÃgÀªÁV ºÉüÀ¨ÉÃPÉAzÀgÉ: £Á£ÀÄ £Á£Éà - ¤ÃªÀÅ ¤ÃªÉÃ! £Á£ÀÄ ¤ÃªÁUÀ®Ä ¸ÁzsÀå«®è, ¤ÃªÀÅ £Á£ÁUÀ®Ä ¸ÁzsÀå«®è. DzÀgÉ AiÀiÁgÁågÀÄ K£ÉãÀÄ DVzÁÝgÉ JA§ÄzÀÄ ªÀiÁvÁæ CªÀgÀªÀgÀ ªÉÊAiÀÄÄQÛPÀ £É¯ÉUÀnÖ£À°è, C£ÉÃPÀ C¼ÀvÉUÉÆîÄUÀ¼À »£É߯ÉAiÀÄ°è, ¤zsÀðj¸À§ºÀÄzÁzÀAvÀºÀ «µÀAiÀÄ. CxÁðvï, M§â ªÀåQÛAiÀÄ ¥ÀƪÀð ¸ÀA¸ÁÌgÀ, DvÀ£À ªÀiÁvÁ-¦vÀÈUÀ¼ÀÄ, ¸ÀºÉÆÃzÀgÀ-¸ÀºÉÆÃzÀjAiÀÄgÀÄ, DvÀ£À DyðPÀ ¹Üw-UÀw, §Ä¢Þ-P˱À®å, DvÀ£À ¥Àj¸ÀgÀ, DvÀ£À ¸ÉßûvÀgÀÄ, DvÀ£À ¸ÀºÉÆÃzÉÆåÃVUÀ¼ÀÄ, DvÀ£À ªÀiÁUÀðzÀ±ÀðPÀgÀÄUÀ¼ÀÄ ªÀÄÄAvÁzÀ C£ÉÃPÀ «ZÁgÀUÀ¼ÀÄ NªÀð ªÀåQÛAiÀÄ PÁAiÀÄðPÉëÃvÀæªÀ£ÀÄß [F ¥Àæ¥ÀAZÀªÉA§ gÀAUÀªÀÄAZÀzÀ ªÉÄÃ¯É CvÀ£ÀzÉãÀÄ ¥ÁvÀæªÉAzÀÄ] ¤zsÀðj¸ÀĪÀ°è ¥ÀæªÀÄÄR ¥ÁvÀæ ªÀ»¸ÀÄvÀÛªÉ JAzÀgÉ vÀ¥Àà®è. DzÀgÉ £ÉÆÃr: ¨É¼ÉzÀÄ zÉÆqÀتÀgÁUÀĪÀ vÀ£ÀPÀ F AiÀiÁªÀÅzÉà ¨ÁºÀå «ZÁgÀUÀ¼ÀÄ £ÀªÀÄä CAPÀıÀzÀ°è®è. CªÀÅUÀ¼À£ÀÄß DAiÉÄÌ ªÀiÁrPÉƼÀÄîªÀ CªÀPÁ±À PÀÆqÀ £ÀªÀÄV®è. J®èjUÀÆ w½zÀAvÉ, ‘ºÀÄlÄÖ DPÀ¹äPÀ, ¸ÁªÀÅ ¤²ÑvÀ” DzÀgÉ CªÉgÀqÀgÀ £ÀqÀÄ«gÀĪÀ ¨Á¼ÀÄ ªÀiÁvÀæ ¸ÀvÀå. CzÉAvÀºÀ ¨Á¼ÀÄ £ÀªÀÄzÁUÀ¨ÉÃPÀÄ; fêÀ£ÁxÀðªÉãÀÄ JAzÀÄ CjAiÀÄĪÀµÀÖgÀ°èAiÉÄà £ÀªÀÄä fêÀ£ÀzÀzsÀðªÀÇ PÀ¼ÉzÉà ©nÖgÀÄvÀÛzÉ!  £ÀAvÀgÀ G½¢gÀĪÀ C¯ÁàªÀ¢üAiÀÄ°è C°èAiÀĪÀgÉUÉ, w½zÉÆà w½AiÀÄzÉAiÉÆÃ, ªÀiÁrzÀ C£ÉÃPÀ «ZÁgÀUÀ¼À£ÀÄß j¥ÉÃj ªÀiÁqÀĪÀÅzÀgÀ°èAiÉÄà DAiÀĸÀÄì ªÀÄÄVzÀÄ ©nÖgÀÄvÀÛzÉ. CAvÉAiÉÄà ¥ÀÄgÀAzÀgÀgÀ F ¸Á®ÄUÀ¼ÀÄ E°è JµÀÄÖ ¥Àæ¸ÀÄÛvÀ £ÉÆÃr: “£Á ªÀiÁrzÀ PÀªÀÄ𠧮ªÀAvÀªÁzÀgÉ ¤Ã ªÀiÁqÀĪÀzÉãÉÆà zÉêÀ - ¸ÁªÀiÁ£ÀåªÀ®è«zÀÄ §æºÀä §gÉzÀ §gÀºÀ £ÉêÀÄ¢AzÀ° J£Àß ºÀuÉAiÀÄ°è §gÉzÀÄzÀPÉ.....”. fêÀ£ÀzÀ°è K£ÀÆ ¸Á¢ü¸À°®èªÀ®è, fêÀ£ÀªÀ£ÀÄß ªÀåxÀðªÁV PÀ¼ÉzÀÄ ©mÉÖ£À®è, fêÀ£ÀªÀ£ÀÄß E£ÀÆß GvÀÛªÀĪÁV ¨Á¼À§ºÀÄ¢vÀÛ®è JA§ PÉÆgÀV£À°èAiÉÄà §ºÀ¼ÀµÀÄÖ ªÀÄA¢ CAwªÀÄ ¢£ÀUÀ¼À°è ¥À±ÁÑvÁÛ¥À ¥ÀqÀĪÀÅzÀ£ÀÄß £ÁªÀÅ £ÉÆÃrzÉÝêÉ. DzÀgÉ PÁ® «ÄAazÀ ªÉÄÃ¯É K£ÀÄ vÁ£Éà ªÀiÁqÀ®Ä ¸ÁzsÀå?

DzÀÄzÀjAzÀ ¥Àæ¥ÀAZÀzÀ°è£À £ÀªÀÄä ºÀÄlÄÖ ªÀÄvÀÄÛ £ÀªÀÄä ¥Á°UÉ §gÀĪÀ ¥ÁvÀæzÀ DAiÉÄÌ £ÀªÀÄä°è®èªÉA§ÄzÀÄ ¸ÀàµÀÖ. CµÉÖà KPÉ? £ÀªÀÄä ºÉ¸Àj£À DAiÉÄÌ ¸ÀºÀ £ÀªÀÄä PÉÊAiÀÄ°è®è! ºÁUÉAzÀ ªÉÄÃ¯É EgÀĪÀ MAzÉà DAiÉÄÌ JAzÀgÉ £ÀªÀÄUÉ zÉÆgÉwgÀĪÀ ¥ÁvÀæªÀ£ÀÄß ¸ÀjAiÀiÁV CxÀð ªÀiÁrPÉƼÀÄîªÀÅzÀÄ; CAzÀgÉ D ¥ÁvÀæzÀ UÀÄt-¸Àé¨sÁªÀUÀ¼ÀÄ, GzÉÝñÀ, ¥ÁvÀæªÀ£ÀÄß ZÉ£ÁßV ¤ªÀð»¸ÀĪÀ°è ¨ÉÃPÁzÀ ¥ÉÆõÁPÀÄ ªÀÄwÛvÀgÉ ¸ÁªÀÄVæUÀ¼ÀÄ EvÁå¢. £ÉÃgÀªÁV ºÉüÀ¨ÉÃPÉAzÀgÉ ªÁ¸ÀÛªÀªÀ£ÀÄß M¦àPÉƼÀÄîªÀÅzÀÄ. AiÀiÁªÀÅzÉà PÁgÀtPÀÆÌ ¥Àæ¥ÀAZÀ°ègÀĪÀ EvÀgÉà ¥ÁvÀæzsÁjUÀ¼À£ÀÄß £ÉÆÃr £ÁªÀÅ ºÉÆð¹ PÉƼÀî¨ÁgÀzÀÄ. »ÃUÉ ªÀiÁrAiÉÄà C£ÉÃPÀgÀÄ vÀªÀÄä£ÀÄß vÁªÉà C®àgÉAzÀÆ, QüÀĸÀÛgÀzÀªÀgÉAzÀÆ PÀ°à¹PÉÆAqÀÄ vÀªÀÄä fêÀ£ÀªÀ£Éßà ºÁ¼ÀÄ ªÀiÁrPÉÆAqÀªÀjzÁÝgÉ. EzÀ£Éßà CAUÀè ¨sÁµÉAiÀÄ°è inferiority complex JAzÀÄ PÀgÉ¢zÁÝgÉ. ¸ÀvÀåªÉAzÀgÉ E°è J¯Áè ¥ÁvÀæzsÁjUÀ¼ÀÆ MAzÉÃ. AiÀiÁªÀ ¥ÁvÀæªÀÇ zÉÆqÀØzÀ®è; AiÀiÁªÀ ¥ÁvÀæªÀÇ QjzÀ®è. J¯Áè ¥ÁvÀæzsÁjUÀ¼ÀÆ vÀªÀÄä vÀªÀÄä ¥ÁvÀæªÀ£ÀÄß ¸ÀjAiÀiÁV ¤ªÀð»¸ÀĪÀÅzÀµÉÖà ¥ÀæwAiÉƧâgÀ PÀvÀðªÀå. CAvÉAiÉÄà F ¥Àæ¥ÀAZÀzÀ°è ªÀĺÁvÀä UÁA¢ü, gÁªÀÄPÀȵÀÚ ¥ÀgÀªÀĺÀA¸À, «ªÉÃPÁ£ÀAzÀ, ¨sÀUÀvï ¹AUï ªÀÄÄAvÁzÀ ªÀiÁºÁ ªÀÄ»ªÀÄgÀÆ EzÁÝgÉ;  ²ªÀgÁ¸À£ï, PÀ¸À¨ï, ºÉrè ªÀÄÄAvÁzÀ ‘qÉrè’ UÀ¼ÀÆ EzÁÝgÉ! £ÀªÀÄä ¤ªÀÄäAvÀºÀ ¸ÁªÀiÁ£ÀågÀÆ EzÁÝgÉ!

MnÖ£À°è £ÀªÀÄUÉ D ¨sÀUÀªÀAvÀ PÀgÀÄt¹zÀ PÁAiÀÄðPÉëÃvÀæªÀ£ÀÄß §®Ä DzÀgÀ¢AzÀ UËgÀ«¹ D PÁAiÀÄðPÉëÃvÀæPÉÌ «²µÀÖªÁzÀ PÉÆqÀÄUÉAiÀÄ£ÀÄß PÉÆqÀĪÀvÀÛ £ÀªÀÄä ªÉÆzÀ® DzÀåvɬÄgÀ¨ÉÃPÀÄ. MAzÀÄ ¥ÀlÖtzÀ ªÀåªÀ¸ÉÜAiÀÄ£Éßà £ÉÆÃr. ¥ÀlÖtªÀ£ÀÄß ±ÀÄaAiÀiÁVqÀ®Ä gÀhiÁqÀªÀiÁ°UÀ¼ÀÆ ¨ÉÃPÀÄ, GzÁå£ÀªÀ£ÀUÀ¼À£ÀÄß £ÉÆÃrPÉƼÀî®Ä ªÀiÁ°UÀ¼ÀÆ ¨ÉÃPÀÄ, £Á£Á ªÀÄÆ®¨sÀÆvÀ ¸ËPÀAiÀÄðUÀ¼ÁzÀ ¤ÃgÀÄ, «zÀÄåvï ªÀÄÄAvÁzÀªÀÅUÀ¼ÀÄ G¸ÀÄÛªÁj £ÉÆÃrPÉƼÀî®Ä ¸ÀÆPÀÛ ¹§âA¢ ¨ÉÃPÀÄ, Erà ªÀåªÀ¸ÉÜAiÀÄ ªÉÄðéZÁgÀuÉUÁV M§â ªÀÄÄRå¸ÀÜ ¨ÉÃPÀÄ. F J¯Áè ªÀÄA¢AiÀÄÆ ¸ÁAXPÀªÁV zÀÄrzÁUÀ¯Éà D ¥ÀlÖtzÀ ªÀåªÀ¸ÉÜ ZÉ£ÁßVgÀ®Ä ¸ÁzsÀå.  DzÀÄzÀjAzÀ, ‘dignity of labour’ JA§ ¥Àæ±ÉßAiÉÄà J°èAiÀÄÆ, AiÀiÁªÁUÀ®Æ §gÀPÀÆqÀzÀÄ. £ÀªÀÄä £ÀªÀÄä ¥Á°UÉ §AzÀ PÀvÀðªÀåªÀ£ÀÄß ¤µÉ׬ÄAzÀ, ¥ÁæªÀiÁtÂPÀvɬÄAzÀ, AiÀiÁªÀÅzÉà QüÀÄ ¨sÁªÀ£ÉUÀ½®èzÉà ¤ªÀð»¸ÀĪÀÅzÉà MAzÀÄ jÃwAiÀÄ ¨sÀUÀªÀAvÀ£À DgÁzsÀ£É. KPÉAzÀgÉ ¨sÀUÀªÀAvÀ D PÉ®¸ÀPÉÌAzÉà £ÀªÀÄä£ÀÄß E°èUÉ PÀ¼ÀÄ»¹gÀĪÁUÀ ªÀÄvÀÄÛ DvÀ ¤AiÀiÁ«Ä¹zÀ PÁAiÀÄðªÀ£ÀÄß £ÁªÀÅ CvÀåAvÀ PÀ¼ÀPÀ½¬ÄAzÀ ªÀÄvÀÄÛ D¸ÉܬÄAzÀ ¤ªÀð»¹zÁUÀ CzÀÄ RArvÁ ¨sÀUÀªÀAvÀ¤UÉ ªÉÄZÀÄÑUÉ DUÀĪÀÅzÀgÀ°è ¸ÀA±ÀAiÀÄ«®è; CzÉà ¤dªÁzÀ ¥ÀÆeÉ; PÁAiÀÄPÀªÉà PÉʯÁ¸ÀzÀAvÉ. JµÉÆÖà ¥ÀæPÀgÀtUÀ¼À£ÀÄß £ÁªÀÅ £ÉÆÃrzÉÝêÉ. £ÁªÁUÀ ¨ÉÃPÉAzÀÄPÉÆArgÀĪÀÅzÀÄ MAzÁzÀgÉ £ÁªÁUÀĪÀÅzÉà ¨ÉÃgÉÆAzÀÄ. ¥Àj¹Üw ªÀÄvÀÄÛ ¸ÀAzÀ¨sÀðUÀ¼À ¥Àæ¨sÁªÀ¢AzÀ, ªÀÄwÛvÀgÉ MvÀÛqÀUÀ½AzÀ EAvÀºÀ C£ÉÃPÀ ¥Àæ¸ÀAUÀUÀ¼ÀÄ JzÀÄgÁUÀÄvÀÛªÉ. C°èAiÀÄÆ PÀÆqÀ £ÀªÀÄä DAiÉÄÌUÉ CªÀPÁ±À«®è¢gÀĪÀÅzÀjAzÀ, §gÀĪÀ CªÀPÁ±ÀªÀ£Éßà D ¨sÀUÀªÀAvÀ£À D²ÃªÁðzÀªÉAzÀÄ ¨sÁ«¹ CzÀPÉÌ ¸ÀÆPÀÛ £ÁåAiÀÄ MzÀV¸ÀĪÀvÀÛ ªÀiÁvÁæ £ÁªÀÅ UÀªÀÄ£À PÉÆqÀĪÀÅzÀÄ GavÀªÁ¢ÃvÀÄ. CzÉà D ¨sÀUÀªÀAvÀ£À EZÉÒ JA§ÄzÉà £ÀªÀÄä ¸ÀªÀiÁzsÁ£ÀzÀ ªÀÄÆ®ªÁUÀ¨ÉÃPÀÄ; D EZÉÒAiÀÄ£ÀÄß ¥ÀÆgÉʸÀĪÀÅzÉà £ÀªÀÄä DzÀå PÀvÀðªÀåªÁUÀ¨ÉÃPÀÄ.

£ÀªÀÄä ªÀÄvÀÄÛ EvÀgÀgÀ fêÀ£À ±ÉÊ°AiÀÄ£ÀÄß £ÁªÀÅ ¸ÀzÁ ºÉÆð¹ £ÉÆÃqÀÄwÛgÀĪÀÅzÉà £ÀªÉÄä¯Áè C±ÁAw, C¸ÀªÀiÁzsÁ£À ªÀÄvÀÄÛ ºÉÆmÉÖQaÑ£À ªÀÄÆ® PÁgÀtªÁVzÉ. “AiÉÆÃV ¥ÀqÉzÀzÀÄÝ AiÉÆÃVUÉ, ¨sÉÆÃV ¥ÀqÉzÀzÀÄÝ ¨sÉÆÃVUÉ” JA§AvÉ vÀÀªÀÄä ¥Á°UÉ §AzÀzÀÝ£Éßà ¥ÀgÀªÀiÁ£ÀߪÉAzÀÄ ¹éÃPÀj¸ÀĪÀªÀ£Éà ¤dªÁzÀ AiÉÆÃV PÀªÀÄðAiÉÆÃV. ¥ÀgÀgÀ£ÀÄß PÀAqÀÄ PÀgÀħĪÀÅzÀQÌAvÀ, ¥ÀgÀgÀ°è, CªÀgÀ AiÀıÀ¹éUÉ PÁgÀtªÁzÀ, ¸ÀàµÀÖ UÀÄj, ¤gÀAvÀgÀ ¸ÁzsÀ£É, zÀÈqsÀ ¸ÀAPÀ®à ªÀÄÄAvÁzÀ ¸ÀzÀÄÎtUÀ¼À£ÀÄß vÀÀªÀÄä PÁAiÀÄðPÉëÃvÀæPÉÌ C¼ÀªÀr¹PÉƼÀÄîªÀªÀ£Éà ¤dªÁzÀ ¸ÁzsÀPÀ. ªÀÄvÉÆÛ§âgÀÄ CªÀgÀ ±ÀPÁÛöå£ÀĸÁgÀ ªÀÄÄV¯ÉvÀÛgÀPÉÌ ºÁjzÀÝgÀÆ aAvÉ, FµÉåð ¨ÉÃqÀ; §zÀ¯ÁV £Á£ÀÄ £À£Àß ±ÀPÁÛöå£ÀĸÁgÀ ¨ÉlÖzÉvÀÛgÀPÁÌzÀgÀÆ ºÁjAiÉÄà ºÁgÀÄvÉÛÃ£É J£ÀÄߪÀ DvÀä «±Áé¸ÀªÀżÀîªÀ£Éà ¤dªÁzÀ bÀ®UÁgÀ; ªÁ¸ÀÛªÀ ¥ÀÄgÀĵÀ. CzÉà jÃw, fêÀ£ÀzÀ ºÁ¢AiÀÄ £ÀqÀÄ«£À°è £ÀªÀÄä C£ÉÃPÀ §AzsÀÄ-«ÄvÀægÀÄ £ÀªÀÄä£ÀÄß ©lÄÖ ºÉÆÃUÀÄvÁÛgÉ. D PÀëtPÉÌ ¥Àæ¥ÀAZÀªÉà ¨ÉÃqÀªÉ¤¸ÀĪÀµÀÄÖ ªÉÊgÁUÀå (¸Àä±Á£À ªÉÊgÁUÀå!) £ÀªÀÄä£ÁߪÀj¹©qÀÄvÀÛzÉ. DzÀgÉ CzÀÄ ¸ÀjAiÀÄ®è. ¨sÀUÀªÀAvÀ CªÀgÀ£ÀÄß AiÀiÁªÀ PÁAiÀÄðPÁÌV F ¨sÀÆ«ÄUÉ PÀ¼ÀÄ»¹ÀzÀÝ£ÉÆÃ, JµÀÄÖ PÁ®PÉÌ PÀ¼ÀÄ»¹zÀÝ£ÉÆÃ, CµÀÖgÀ°è D PÁAiÀÄðªÀ£ÀÄß CªÀgÀÄ ªÀÄÄV¹ DvÀ£À ¸Á¤ßzsÀå ¥ÀqÉ¢zÁÞgÉ (CªÀgÀ UÀÄj ¸ÁzsÀ£ÉAiÀiÁ¬ÄvÉÆà E®èªÉÇà JA§ÄzÀ£ÀÄß ¤zsÀðj¸ÀĪÀªÀ D ¨sÀUÀªÀAvÀ£ÉA§ÄzÀÄ ¨ÉÃgÉ ªÀiÁvÀÄ). £ÁªÀÇ PÀÆqÀ £ÁªÀÅ §AzÀ PÁAiÀÄðªÁzÉÆqÀ£ÉAiÉÄà ªÀÄvÀÄÛ £ÀªÀÄä PÁ¯ÁªÀPÁ±À ªÀÄÄVzÉÆqÀ£ÉAiÉÄà CªÀgÀ£ÀÄß »A¨Á°¸À¯Éà ¨ÉÃPÀÄ. CzÀgÉ £ÀªÀÄUÉ ¤AiÀiÁ«Ä¹zÀ PÁAiÀÄðªÉà ¨ÉÃgÉ. £ÀªÀÄä UÀÄjAiÉÄà ¨ÉÃgÉ. C¢£ÀÆß ¥ÀÆtðªÁV®è. DzÀÄzÀjAzÀ, £ÀªÀÄä ¥Á°UÉ §AzÀ PÀvÀðªÀåªÀ£ÀÄß ªÀÄÄV¸ÀĪÀvÀÛ ªÀiÁvÀæ £ÀªÀÄä UÀªÀÄ£À«gÀ¨ÉÃPÀÄ. CzÀPÉÌAzÉà DvÀäºÀvÉå ªÀĺÁ ¥Á¥ÀªÉAzÀÆ ºÉüÀĪÀÅzÀÄ.

¨sÀUÀªÀAvÀ ¸ÀȶֹgÀĪÀ F C¸ÀASÁåvÀ ¥ÁvÀæzsÁjUÀ¼ÀÄ DvÀ£À C£ÀÄeÉÕAiÀÄAvÉ £ÀqÉAiÀÄĪÀ AiÀÄAvÀæUÀ¼ÀµÉÖ. ºÁUÁV DvÀ£À C£ÀÄeÉÕAiÀÄ£ÀÄß £ÉgÀªÉÃj¸À®Ä §AzÀAvÀºÀ J®è ¥ÁvÀæzsÁjUÀ¼ÀÆ DvÀ£À ¸ÀégÀÆ¥ÀªÉà JAzÁ¬ÄvÀÄ. ºÁUÁV ¥ÁvÀæ K£Éà EgÀ°, £ÁªÉ®ègÀÆ DvÀ£À ªÀÄPÀ̼ÉÃ, DvÀ£À ¸ÀégÀÆ¥ÀªÉÃ. ªÀiÁ£ÀªÀ£ÀµÉÖà C®è, ¥Àæ¥ÀAZÀzÀ J¯Áè fëUÀ¼ÀÆ DvÀ£À ¸ÀȶÖAiÉÄà DzÀÝjAzÀ ¸ÀPÀ® fëUÀ¼ÀÆ PÀÆqÀ DvÀ£À CªÀvÁgÀªÉÃ.  £ÁªÉ¯Áè DvÀ ¤ÃrzÀ PÀvÀðªÀåªÀ£ÀÄß ¥Á°¸À §A¢gÀĪÀ DvÀ£À ¸ÉêÀPÀgÀÄ. CzÀPÉÌAzÉà ‘zÁ¸À£À ªÀiÁrPÉÆà J£Àß ¸Áé«Ä’ JAzÀÄ ¥ÀÄgÀAzÀgÀgÀÄ ºÁrzÀÄÝ. DzÀÄzÀjAzÀ E°è ªÉÄîÄ-Qý£À ¨sÁªÀ£ÉAiÉÄà §gÀPÀÆqÀzÀÄ. J®ègÀÆ ¸ÉêÀPÀgÉà JAzÀ ªÉÄÃ¯É vÁgÀvÀªÀÄåzÀ ¥Àæ±ÉßAiÉÄà ¨ÁgÀzÀÄ. CAvÀºÀ MAzÀÄ ¸ÀªÀÄ¶Ö ¨sÁªÀ  £ÀªÉÄä®ègÀ°è ªÀÄÆqÀ°; D ¨sÀUÀªÀAvÀ, £ÀªÀÄä ªÀÄÆ®PÀ, ¤AiÀiÁ«Ä¹ PÀ¼ÀÄ»¹zÀ PÉ®¸À PÁAiÀÄðUÀ¼ÀÄ ¤«ðWÀߪÁV, ¥ÁæªÀiÁtÂPÀªÁV, ¤µÀÌ®äµÀªÁV ªÀÄvÀÄÛ ¸ÀĸÀÆvÀæªÁV £ÀqÉzÀÄ DvÀ£À ¥ÁzÀPÀªÀÄ®UÀ½UÉ £ÁªÀ¦ð¸ÀĪÀ ¢ªÀåPÀĸÀĪÀÄUÀ¼ÁUÀ° ªÀÄvÀÄÛ £Á«gÀĪÀ F ¨sÀÆ«Ä ¸ÀzÁ £ÉªÀÄä¢, ¸ÀAvÀ¸À ªÀÄvÀÄÛ ¸ÀªÀÄÈ¢Þ¬ÄAzÀ £À¼À£À½¸À° JAzÀÄ J®ègÀÆ ºÁgÉʸÉÆÃt.
¥sÉÊ£À¯ï QPï:
¥ÀæwAiÉƧâgÀ£ÀÆß D ¨sÀUÀªÀAvÀ MAzÀÄ ¤¢ðµÀÖ PÉ®¸ÀPÁÌV E°èUÉ PÀ½¹zÁÝ£É. D PÉ®¸À £ÀqÉAiÀįÉAzÀÄ ¥ÀæwAiÉƧâjUÀÆ CzÀPÉÌ vÀPÀÌ ¸ÀªÀ®vÀÄÛUÀ¼À£ÀÆß PÀgÀÄt¹zÁÝ£É. D ¸ÀªÀ®vÀÄÛUÀ¼ÀÄ D PÉ®¸À ¥ÀÆwðUÁV ªÀiÁvÀæ. D ¸ÀªÀ®vÀÄÛUÀ¼À£ÀÄß zÀÄgÀÄ¥ÀAiÉÆÃUÀ¥Àr¹PÉƼÀÄîªÀªÀ£ÀÄ ªÀÄvÀÄÛ D ¸ÀªÀ®vÀÄÛUÀ¼ÀÄ vÀ£ÀV®èªÀ®èªÉAzÀÄ PÉÆgÀUÀĪÀªÀ£ÀÄ ªÀÄvÀÄÛ vÀ£Àß°ègÀĪÀ ¸ÀªÀ®vÀÄÛUÀ¼À£ÀÆß ªÀÄgÉvÀÄ, vÀ£Àß PÉ®¸ÀªÀ£ÀÄß ªÀÄgÉAiÀÄĪÀgÉ®ègÀÆ zÉʪÀzÉÆæûAiÀiÁUÀĪÀgÀÄ.
|| ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||
PÀ« ªÉA. ¸ÀÄgÉñï 
13.1.2010

Tuesday, December 14, 2010

ಅನಾರೋಗ್ಯ ಮತ್ತು ಆಧ್ಯಾತ್ಮ ..!!?!!



¥Àæ¥ÀAZÀzÀ°è K£À£ÀÄß ¸Á¢ü¸À¨ÉÃPÁzÀgÀÆ PÀÆqÀ ¸Àé¸ÀÜ zÉúÀ ªÀÄvÀÄÛ ªÀÄ£À¸ÀÄì ¤vÀå fêÀ£ÀªÉA§ ºÉÆêÀÄzÀ CªÀ±Àå ºÀ«¸ÀÄìUÀ¼ÀÄ. J®èPÀÆÌ F zÉúÀ ªÀÄvÀÄÛ ªÀÄ£À¸Éìà ªÀÄÆ® ¸ÁzsÀ£ÀUÀ¼ÀÄ; C¤ªÁAiÀÄð ªÀÄvÀÄÛ ªÀÄgÀÄeÉÆÃqÀuɬĮèzÀ G¥ÀPÀgÀtUÀ¼ÀÄ. ºÁUÁV £ÀªÉÄä®è ±Á¸ÀÛç, ¥ÀÄgÁt, ªÉÃzÀUÀ¼ÀÄ, IĶªÀÄĤUÀ¼ÀÄ, zÁ¸ÀªÀgÉÃtågÀÄ ªÀÄvÉÛ¯Áè ¥ÁædÐgÀÆ PÀÆqÀ £ÀªÀÄä zÉúÀ ªÀÄvÀÄÛ ªÀÄ£À¸Àì£ÀÄß ¸ÀzÁ ¸ÀĹÜwAiÀÄ°èqÀĪÀ ¥ÁæªÀÄÄRåvÉ §UÉÎ ««zsÀ gÀÆ¥ÀUÀ¼À°è MwÛ ºÉýzÁÝgÉ. CzÀPÉÌAzÉà “a sound mind in a sound body” JAzÀÄ DAUÀè ¨ÁµÉAiÀÄ°è PÀÆqÀ MwÛ ºÉýgÀĪÀÅzÀÄ. zÉúÀ gÉÆÃUÀ-£ÉÆêÀÅ gÀ»vÀªÁVzÁÝUÀ ªÀÄvÀÄÛ ªÀÄ£À¸ÀÄì ¤²ÑAvÉAiÀiÁVzÁÝUÀ ªÀiÁvÁæ ªÀiÁ£ÀªÀ vÀ£Àß EaÒvÀ ¸ÁzsÀ£ÉUÀ¼À£ÀÄß ¸ÀgÁUÀªÁV £ÀqɹPÉÆAqÀÄ ºÉÆÃUÀ§®è. CzÉà zÉúÀ ªÀÄvÀÄÛ ªÀÄ£À¸ÀÄì WÁ¹UÉƼÀUÁzÁUÀ ªÀiÁ£ÀªÀ PÀAUÁ¯ÁUÀÄvÁÛ£É; DvÀ£À ¸ÁzsÀ£Á EZÉÒUÀ¼ÀÄ QëÃt¸ÀÄvÀÛªÉ E®èªÉà DzÀåvÉAiÀÄ ¥ÀnÖAiÀÄ°è PɼÀUÉ zÀÆqÀ®àqÀÄvÀÛªÉ. ¸ÀºÀdªÁVAiÉÄà DvÀ vÀ£Àß gÉÆÃUÀ-£ÉÆêÀÅ ªÀÄvÀÄÛ ªÀÄ£À¹ì£À vÀĪÀÄÄ®UÀ½AzÀ dgÀhÄðjvÀ£ÁV ¸ÁzsÀ£Á¥ÀxÀzÀ°è §ºÀÄ »AzÉ G½zÀÄ ©qÀÄvÁÛ£É.

fêÀ£À±ÉÊ°UÀÆ £ÀªÀÄä DgÉÆÃUÀåPÀÆÌ MAzÀÄ C«£Á¨sÁªÀªÁzÀ £ÀAlÄ GAlÄ. F £ÀAlÄ UÀAmÁzÀgÉ fêÀ£ÀªÉà PÀUÀÎAlÄ!  ªÉÃzÀUÀ¼À PÁ®¢AzÀ®Æ §ºÀÄ EwÛÃa£ÀªÀgÉUÉ £ÀªÀÄä ¥ÀƪÀðdgÀ fêÀ£À±ÉÊ°AiÀÄ£ÀÄß £ÉÆÃrzÀgÉ «µÀAiÀÄ ¸Àé¥ÀÖªÁUÀÄvÀÛzÉ. CªÀgÀ ºÁUÀÆ £ÀªÀÄä fêÀ£À±ÉÊ°AiÀÄ ªÀåvÁå¸À PÀÆqÀ ¸ÀéµÀÖªÁV ºÉÆgÀºÉƪÀÄÄävÀÛzÉ. ¸ÀgÀ¼À fêÀ£À - ¸ÀgÀ¼À ªÀÄvÀÄÛ ¸ÁwéPÀ ¨sÉÆÃd£À CªÀgÀ DgÉÆÃUÀå ªÀÄvÀÄÛ ¸ÁzsÀ£ÉAiÀÄ M¼ÀUÀÄlÄÖ. §zÀÄPÀ°PÉÌ CªÀ±Àå«zÀݵÀÖPÉÌà ¥Áæ¥ÀAaPÀ ªÀ¸ÀÄÛUÀ¼À G¥ÀAiÉÆÃUÀ ªÀÄvÀÄÛ ¸ÀAUÀæºÀ ªÀÄvÀÄÛ J®èQÌAvÀ «ÄV¯ÁV fêÀ£ÀzÀ°è PÀªÀÄ®d®¥ÀvÀæzÀAvÉ §zÀÄPÀĪÀ ªÉÄÃgÀÄ ªÀÄ£ÉÆäUÀæºÀ PÀÆqÀ CA¢£ÀªÀgÀ ¸ÀÄR ªÀÄvÀÄÛ CzÀQÌAvÀ «ÄV¯ÁzÀ ¸ËRåPÉÌ PÁgÀtªÁVzÀÝAvÀºÀ ¥ÀæªÀÄÄR CA±ÀUÀ¼ÀÄ. ¸ÀÄRzÀ ¥ÀjPÀ®à£É ªÀåQÛUÀvÀ. ºÀt EvÁå¢ ªÀiÁzsÀåªÀÄUÀ½AzÀ £ÁªÀÅ ¸ÀÄR ¥ÀqÉzɪÉAzÀÄPÉƼÀÀÄzÀÄ; DzÀgÉ ¸ËRåªÉà ¨ÉÃgÉ. CzÀPÉÌ ºÀt EvÁå¢UÀ¼À CªÀ±ÀåPÀvÉ ¨ÉÃqÀ. ¸ËRå C¥Àj«ÄvÀ ªÁåSÉå G¼ÀîzÀÄÝ. CzÀ£Éßà £ÀªÀÄä ¥ÀƪÀðdgÀÄ ¨Á½-§zÀÄQ vÉÆÃj¹gÀĪÀÅzÀÄ. ºÁUÁV ¸ÀºÀdªÁVAiÉÄà CªÀgÀÄ zÉÊ»PÀªÁVAiÀÄÆ ªÀÄvÀÄÛ ªÀiÁ£À¹PÀªÁVAiÀÄÆ CvÀåAvÀ ¸ÀzÀÈqsÀgÁV ªÀÄvÀÄÛ £ÉªÀÄ䢪ÀAvÀgÁVzÀÝgÀÄ. D²ÃªÁðzÀ ªÀiÁqÀĪÁUÀ PÀÆqÀ DgÉÆÃUÀåPÉÌà ¥ÀæxÀªÀÄ ¥Áæ±À¸ÀÛöå: “DAiÀÄÄgÁgÉÆÃUÀåL±ÀéAiÀiÁð©üªÀÈ¢ÞgÀ¸ÀÄÛ” JAzÀÄ CA¢¤AzÀ FªÀgÉUÀÆ ºÀgÀ¸ÀĪÀÅzÀÄAlÄ.
CzÉà £ÀªÀÄä fêÀ£À±ÉÊ°AiÀÄ£ÉÆߪÉÄä £ÉÆÃrPÉÆAqÁUÀ ªÀÄvÀÄÛ CzÀjAzÀ DgÉÆÃUÀå ªÀÄvÀÄÛ ªÀiÁ£À¹PÀ £ÉªÀÄä¢AiÀÄ ªÉÄÃ¯É GAmÁUÀÄwÛgÀĪÀ ©üÃPÀgÀ ¥ÀjuÁªÀÄUÀ¼À£ÀÄß £ÉÆÃrzÁUÀ ¨sÀ«µÀå PÀgÁ¼ÀªÁV vÉÆÃgÀÄvÀÛzÉ. w½¢zÀÆÝ EgÀļÀÄ PÀAqÀ ¨sÁ«UÉ ºÀUÀ®Ä ©Ã¼ÀÄwÛgÀĪÀ £ÀªÀÄä ªÀÄ£À¹ÜwAiÀÄ §UÉÎ £ÉÆÃrzÁUÀ EzÀÄ ‘eÁt QªÀÅqÉÆà eÁt PÀÄgÀÄqÉÆÃ’ CxÀªÁ ‘«£Á±ÀPÁ¯Éà «¥ÀjÃvÀ §Ä¢Þ’AiÉÆà JA§ ¸ÀA±ÀAiÀÄ ªÀÄÆqÀÄvÀÛzÉ. ªÀÄ£ÉAiÀÄ ¸ÁPÀÄ £Á¬Ä, PÁgÀÄ EvÁå¢UÀ¼À£ÀÄß ¸ÀĹÜwAiÀÄ°èqÀ®Ä PÉÆqÀĪÀ ¸ÀªÀÄAiÀÄ-±ÀæªÀÄzÀ C®à ¸ÀªÀÄAiÀĪÀ£ÀÆß £ÀªÀÄä zÉúÀ ªÀÄvÀÄÛ ªÀiÁ£À¹PÀ ¹ÜwAiÀÄ£ÀÄß PÁ¥ÁqÀ®Ä PÉÆqÀ¯ÁUÀzÀ C¸ÀºÁAiÀÄPÀ ¥Àj¹ÜwAiÀÄ°è £ÁªÀÅ §ºÀĪÀÄA¢ ¹®ÄQzÉÝêÉ. ¥ÀjuÁªÀÄ ¸ÀĸÀàµÀÖ. EAzÀÄ 35-40 ¥ÁæAiÀÄ zÁnzÀ ¥ÀæwAiÉƧâgÀÆ MAzÀ®è MAzÀÄ ¨ÉãɬÄAzÀ §¼À®ÄwÛzÁÝgÉ. ¥Àæw 5 d£ÀgÀ°è PÀ¤µÀ× 3 d£ÀgÀÄ ªÀÄzsÀĪÉÄúÀ¢AzÀ¯Éà §¼À®ÄwÛzÁÝgÉ JA§ÄzÀÄ FUÀ dUÀeÁÓ»ÃgÁVzÉ. E£ÀÄß EvÀgÉ SÁ¬Ä¯ÉUÀ¼À §UÉÎ «±ÉõÀªÁV ºÉüÀĪÀ CUÀvÀå«®è. J®èjUÀÆ w½zÀzÉÝÃ. ¥Àæw wAUÀ¼ÀÆ gÀPÀÛ ¥ÀjÃPÉë, ªÉÊzÀågÀ ¸À®ºÉ, ªÀiÁvÉæ, OµÀ¢ü ªÀÄvÀÄÛ PÀAqÀPÀAqÀªÀgÀ°è ±ÀÄUÀgï, ©.¦, PÉƯɸÁÖç¯ï EvÁå¢UÀ¼À §UÉÎ ZÀað¸ÀĪÀÅzÀgÀ°èAiÉÄà fêÀ£ÀzÀ Cwà ¥ÀæªÀÄÄR WÀlÖzÀ ¸ÀªÀÄAiÀÄ ¥ÉÆïÁUÀÄwÛgÀĪÀÅzÀÄ PÀÆqÀ £ÁªÀÅ UÀªÀĤ¸À§ºÀÄzÀÄ. DgÉÆÃUÀå ªÀÄvÀÄÛ £ÉªÀÄä¢AiÀÄ£ÀÄß UÀ½¸ÀĪÀvÀÛ, «±ÉõÀªÁV FV£À ¦Ã½UÉAiÀĪÀgÀ zsÉÆÃgÀuÉ ªÀÄvÀÄÛ UÀÄj-gÀ»vÀ fêÀ£À±ÉÊ° DvÀAPÀ ªÀÄÆr¸ÀÄvÀÛzÉ. ºÁUÁV EAzÀÄ AiÀiÁgÉƧâgÀÆ ¸ÀA¥ÀÆtð DgÉÆÃUÀåªÀAvÀgÀ®è (zÉÊ»PÀªÁV ªÀÄvÀÄÛ ªÀiÁ£À¹PÀªÁV) JA§ÄzÀÄ PÀlĸÀvÀå. EgÀĪÀ SÁ¬Ä¯ÉUÀ¼À §UÉÎ aAvÉAiÀÄ°èAiÉÄà ªÀiÁ£À¹PÀ £ÉªÀÄä¢ PÀÆqÀ ¸ÁPÀµÀÄÖ PÀzÀrzÉ.

F »£É߯ÉAiÀÄ°è £ÁªÀÅ £ÀªÀÄVgÀĪÀ zÉÊ»PÀ ªÀÄvÀÄÛ ªÀiÁ£À¹PÀ Ew-«ÄwUÀ¼À°è   ¥ÀæªÀÄÄRªÁV fêÀ£ÀzÀ ¸ÀvÀåUÀ¼À£ÀÄß CjAiÀÄĪÀ ¤nÖ£À°è £ÀªÀÄä fêÀ£À±ÉÊ° ªÀÄvÀÄÛ CzÀQÌAvÀ ºÉZÁÑV £ÀªÀÄä zÀȶÖPÉÆãÀUÀ¼À£ÀÄß §zÀ¯Á¬Ä¹PÉƼÀÄîªÀ CUÀvÀå«zÉ. ±Á¥ÀªÁV §A¢gÀĪÀ gÉÆÃUÀUÀ¼À£Éßà ªÀgÀªÁV ¥ÀjªÀvÀð£É ªÀiÁrPÉƼÀÄîªÀ ªÀiÁUÀðUÀ¼À£ÀÄß PÀÆqÀ £ÁªÀÅ PÀAqÀÄPÉƼÀî¨ÉÃPÁVzÉ. d£ÀäPÀÌAnzÀ gÉÆÃUÀUÀ¼ÀÄ ºÉÆÃUÀĪÀÅ¢®è JA§ÄzÀÄ w½zÁUÀ CªÀÅUÀ¼ÉÆqÀ£ÉAiÉÄà ¸ÉßúÀ ¨É¼É¹, CªÀÅUÀ¼À£ÀÄß ¸ÁPÀµÀÄÖ ªÀÄnÖUÉ ªÉÄnÖ ªÀÄÄ£ÀßqÉAiÀÄĪÀ UÀnÖvÀ£ÀªÀ£ÀÄß PÀÆqÀ £ÁªÀÅ UÀ½¹PÉƼÀî¨ÉÃPÁVzÉ. ªÀÄzsÀĪÉÄúÀ«gÀ°, ºÀÈzÀAiÀÄ vÉÆAzÀgÉ EgÀ° - AiÀiÁªÀÅzÉà EzÀÝgÀÆ ªÉÊzÀågÀÄ PÉÆqÀĪÀ ¸ÁªÀiÁ£Àå ¸À®ºÉUÀ¼ÉAzÀgÉ - ¥Àæw¤vÀå 3-4 Q.«Ä. £ÀrUÉ, fqÀÄØ, ªÀĸÁ¯É ªÀÄvÀÄÛ PÀjzÀ ¥ÀzÁxÀðUÀ¼À ªÀdåð ªÀÄvÀÄÛ ªÀiÁ£À¹PÀ ¸ÀAvÀÄ®£ÀªÀ£ÀÄß PÁ¥ÁqÀĪÀÅzÀÄ EvÁå¢. J®ègÀÆ ¸ÀPÀÌgÉ ¤zÉÝAiÀÄ°ègÀĪÀ ¸ÀªÀÄAiÀÄzÀ°è F zÉúÀzÀ°ègÀĪÀ £ÀªÀÄä ¸ÀPÀÌgÉ £ÁªÀÅ ¸À« ¤zÉÝAiÀÄ°ègÀĪÁUÀ¯Éà ªÀÄÄAZÉ JzÀÄÝ ªÁQAUï ºÉÆÃUÀĪÀAvÉ ªÀiÁrvÀ¯Áè JAzÀÄ PÉÆgÀUÀĪÀªÀgÉà §ºÀĪÀÄA¢. ¨É½UÉÎ ªÁQAUï ªÀiÁqÀĪÀ C£ÉÃPÀgÀ°è ¸À¥Éà ªÉÆÃgÉ ºÁQPÉÆAqÀÄ PÁ¯É¼ÉzÀÄPÉÆAqÀÄ ¸ÁUÀĪÀªÀgÉà C£ÉÃPÀ ªÀÄA¢!

¨Á¬Ä ZÀ¥À® ¤AiÀÄAvÀæt ªÀiÁqÀzÀªÀjUÀAvÀÆ ªÉÊzÀågÀ ¸À®ºÉ ±Á¥ÀªÉAzÉà vÉÆÃgÀÄvÀÛzÉ. ‘¸Àé®à CµÉÖÃ’ J£ÀÄßvÁÛ ¥Àæw¤vÀå ¥ÀxÀåªÀ£ÀÄß C¥ÀxÀå ªÀiÁqÀĪÀªÀgÉà §ºÀĪÀÄA¢. DUÀ¯Éà PÀÄ®UÉnÖgÀĪÀ DgÉÆÃUÀåzÀ UÀw E£ÉßãÁ¢ÃvÀÄ? ªÉÊzÀågÀ ¸À®ºÉAiÀÄAvÉ fêÀ£À±ÉÊ° §zÀ¯ÁªÀuÉ ªÀiÁrzÉÝà DzÀgÉ SÁ¬Ä¯É ¤AiÀÄAvÀætzÀ°è RArvÁ §gÀÄvÀÛzÉ. fqÀÄØ, ªÀĸÁ¯É ªÀÄvÀÄÛ PÀjzÀ ¥ÀzÁxÀðUÀ¼À£ÀÄß ©qÀĪÀÅzÀjAzÀ £ÀªÀÄä DºÁgÀ ¤dªÁVAiÀÄÆ ¸ÁwéPÀ DºÁgÀªÉà DUÀÄvÀÛzÉ. ¸ÁwéPÀ DºÁgÀzÀ ¸ÉêÀ£É zÉúÁgÉÆÃUÀåzÀ eÉÆvÉUÉ ¥ÀgÉÆÃPÀëªÁV £ÀªÀÄä ªÀÄ£À¹ì£À°è ±ÁAvÀvÉ GAlĪÀiÁr ¸ÀPÁgÁvÀäPÀ aAvÀ£ÉUÀ½UÉ JqɪÀiÁrPÉÆqÀÄvÀÛzÉ; vÁªÀĸÀUÀÄtUÀ¼À£ÀÄß ¸ÁPÀµÀÄÖ zÀÆgÀ ªÀiÁqÀÄvÀÛzÉ. ºÁUÁV ¥ÁægÀA¨sÀzÀ°è ¥ÀxÀå C¥ÀxÀåªÉ¤¹zÀgÀÆ PÀÆqÀ, £Á°UÉ £ÉÆAzÀÄPÉÆAqÀgÀÆ PÀÆqÀ(!) »vÀ-«ÄvÀªÁzÀ DºÁgÀ £ÀªÀÄä£ÀÄß ¸ÀvÀå ±ÉÆÃzsÀ£ÉAiÉÄqÉUÉ ¸ÁUÀĪÀ ªÀiÁUÀðªÀ£ÀÄß ºÀ¸À£ÀÄUÉƽ¸ÀÄvÀÛzÉ. KPÉAzÀgÉ w£ÀÄߪÀ DºÁgÀ ªÀÄ£ÀĵÀå£À ªÀiÁ£À¹PÀ ¹ÜwAiÀÄ ªÉÄÃ®Æ C¥ÀgÉÆÃPÀë ¥ÀjuÁªÀÄ ©ÃgÀÄvÀÛzÉ JA§ÄzÀÄ FUÁUÀ¯Éà ¥ÀæªÀiÁtÂÃPÀj¹zÀ «ZÁgÀ. ‘DºÁgÀ±ÀÄzËÞ ¸ÀvÀÛ÷é±ÀÄ¢Þ:’ JAzÀÄ bÁAzÉÆÃUÀå G¥À¤µÀvï ºÉüÀÄvÀÛzÉ. CAzÀgÉ DºÁgÀªÀÅ ±ÀÄzÀÞªÁVzÀÝgÉ CAvÀ:PÀgÀtªÀÅ ±ÀÄzÀÞªÁVgÀÄvÀÛzÉ; ºÁUÁV ¸ÁwéPÀ DºÁgÁ¢UÀ¼À ¸ÉêÀ£ÉAiÉÄà ±ÉæÃAiÀĸÀÌgÀ. E£ÀÄß ¢£À ¤vÀåzÀ ªÁQAUï£ÀÄß £ÁªÀÅ ±Á¥ÀªÉAzÀÄ ¥ÀjUÀt¸À¯Éà ¨ÉÃPÁV®è. CzÉÆAzÀÄ ªÀgÀªÉÃ. £Á¯ÁÌgÀÄ d£À §jà SÁ¬Ä¯ÉUÀ¼À §UÉÎAiÉÄà ZÀað¸ÀÄvÁÛ ªÁQAUï ªÀiÁrzÀgÉ RArvÁ CzÀÄ ªÀåxÀð±ÀæªÀĪÉà ¸Àj. CzÀgÀ §zÀ¯ÁV, ¤ÃªÉǧâgÉà ªÁQAUï ºÉÆÃV. ºÉÆÃUÀĪÁUÀ ¤ªÀÄä EµÀÖzÉʪÀzÀ £ÁªÀĸÀägÀuÉAiÀÄ£ÉÆßÃ, ¸ÀºÀ¸Àæ£ÁªÀÄUÀ¼À£ÉÆßÃ, ªÀÄ£À¹ì£À¯Éèà ªÀiÁqÀÄvÁÛ ºÉÆÃUÀĪÀÅzÀÄ, zÁjAiÀÄ°è zÉêÁ®AiÀÄ«zÀÝgÉ C°èUÀÆ ¨sÉÃn PÉÆqÀĪÀÅzÀÄ Cwà ¯Á¨sÀPÀgÀ ªÀÄvÀÄÛ vÀȦÛPÀgÀ JA§ «µÀAiÀÄ £À£Àß C£ÀĨsÀªÀªÉÃzÀåªÁzÀ ªÀiÁvÀÄ. CzÉà jÃw MAzÀÄ ¯ÉÃR£À/PÀªÀ£À gÀZÀ£ÉAiÀÄ §UÉÎAiÉÆÃ, MAzÀÄ M¼Éî «ZÁgÀzÀ §UÉÎAiÉÆà ªÉÄ®ÄPÀÄ ºÁPÀÄvÁÛ £ÀqÉAiÀÄĪÀÅzÀÆ PÀÆqÀ DºÁèzÀªÀ£ÀÄßAlÄ ªÀiÁqÀ§®èzÀÄ. ªÀÄ£ÀPÉëÆèsÉUÉƽ¸ÀĪÀ AiÀiÁªÀ «ZÁgÀUÀ¼À£ÀÆß aAw¸À¢j. ‘ªÀAiÀĸÁì¬ÄvÀÄ, SÁ¬Ä¯É §A¢zÉ, £À£Àß fêÀ£À ªÀÄÄV¬ÄvÀÄ’ JA§ £ÉÃvÁåvÀäPÀ AiÉÆÃZÀ£Á®ºÀjUÀ¼À£ÀÄß §¢VlÄÖ, §zÀ¯ÁzÀ fêÀ£À±ÉÊ°AiÀÄ°èAiÉÄà ¸ÁxÀðPÀvÉAiÀÄ£ÀÄß PÀAqÀÄPÉƼÀÄîªÀ F ¥ÀæAiÀÄvÀß ¤dPÀÆÌ ªÀiÁ£ÀªÀ d£ÀäªÀ£ÀÄß ¸ÁxÀðPÀåUÉƽ¸À§®èzÀÄ. ªÀAiÀĸÁìzÀ ªÉÄÃ¯É ¨É½î PÀÆzÀ®Ä, ¨Á¬Ä vÀÄA¨Á a£ÀßzÀ ºÀ®ÄèUÀ¼ÀÄ, ªÀÄÆvÀæPÉÆñÀzÀ vÀÄA¨Á ªÀdæzÀ ºÀgÀ¼ÀÄUÀ¼ÀÄ, ªÀÄÄjzÀ ªÀÄƼÉAiÀÄ §zÀ¯ÁV EA¥ÉÆÃmÉðqï ¥Áèn£ÀA gÁqïUÀ¼ÀÄ EvÁå¢ §AzÁUÀ £ÁªÉµÀÄÖ ²æêÀÄAvÀgÀ®èªÉà JAzÀÄ £À£Àß ¸ÉßûvÀgÉƧâgÀÄ «qÀA§£ÁvÀäPÀªÁV ºÉýzÀgÀÄ. §ºÀ¼ÀµÀÄÖ d£ÀjUÉ (£À£ÀߣÀÆß ¸ÉÃj!) ¨É½î PÀÆzÀ®Æ ¸ÀºÀ E®è! UÀ½¹zÀ a£ÀߪɯÁè ¨ÁåAPï ¯ÁPÀgï£À°ènÖgÀĪÀ C£ÉÃPÀgÀÄ ¤dªÁVAiÀÄÆ a£ÀßzÀ ºÀ®ÄèUÀ¼À£ÀÄß ªÀiÁr¹PÉÆAqÀgÉ CzÀÄ ªÉÄZÀÑ ¨ÉÃPÁzÀ CA±ÀªÉÃ! KPÉAzÀgÉ CªÀgÀÄ ¸ÀA¥Á¢¹zÀÝ£ÀÄß CµÀÖgÀªÀÄnÖUÁzÀgÀÆ CªÀgÉà C£ÀĨsÀ«¸À§ºÀÄzÀÄ. EAzÀÄ §ºÀĪÀÄA¢ UÀ½¹zÀ D¹Û-¸ÀA¥ÀvÀÄÛUÀ¼É®èªÀÇ C£ÀågÀ ¥Á¯ÉÃ. EªÀgÀzÀÄÝ §jà UÀ½¹-G½¸ÀĪÀÅzÀgÀ°èAiÉÄà DgÉÆÃUÀå UÉÆlPï, DAiÀĸÀÄì RvÀA! ªÀÄÄ¢vÀ£À MAzÀÄ ±Á¥ÀªÉ£ÀÄߪÀÅzÀAvÀÆ ¤«ðªÁzÀ. eÉÆvÉUÉ F SÁ¬Ä¯ÉUÀ¼À PÁl ¨ÉÃgÉ. SÁ¬Ä¯ÉAiÀÄAvÀÆ J®èjUÀÆ EAzÀÄ PÀnÖlÖ §ÄwÛ. ªÀÄÄ¢vÀ£ÀªÀAvÀÆ (C°èAiÀĪÀgÉUÉ §zÀÄQzÀÝgÉ!) ¤²ÑvÀ. ¥Àj¹ÜwAiÀÄ eÉÆvÉ ºÉÆAzÁtÂPÉ ªÀÄvÀÄÛ ¸ÀªÀÄ£ÀéAiÀÄvÉAiÀÄ ªÀiÁUÀðUÀ¼ÀÄ C£ÉÃPÀ. CªÀÅUÀ¼À£ÀÄß £ÀªÀÄä D¸ÀQÛAiÀiÁ£ÀĸÁgÀ ¸ÀÆPÀÛªÁV £ÀªÀÄä §zÀÄQ£À°è C¼ÀªÀr¹PÉƼÀÄîªÀÅzÀÄ £ÀªÀÄä eÁtvÀ£ÀPÉÌ ªÀÄvÀÄÛ QæAiÀiÁ²Ã®vÉUÉ, CªÉ®èQÌAvÀ «ÄV¯ÁV, £ÀªÀÄä D±Á¨sÁªÀUÀ¼À Ew-«ÄwUÉ ©lÖ «ZÁgÀ. EAvÀºÀ ¸ÀAzÀ¨sÀðzÀ°è CªÀ±ÀåªÁzÀ ªÀiÁ¥ÁðlÄUÀ¼À£ÀÄß fêÀ£À±ÉÊ°AiÀÄ°è ªÀiÁrPÉÆAqÀÄ, zÉúÀ ªÀÄvÀÄÛ ªÀÄ£À¸Àì£ÀÄß ¸ÁPÀµÀÄÖ ºÀvÉÆÃnAiÀÄ°èlÄÖPÉÆAqÀÄ, ¸ÀPÁgÁvÀäPÀ ªÀÄ£À¹ì¤AzÀ ¸À£ÁäUÀðzÀ ¥ÀxÀªÀ£ÀÄß PÀæ«Ä¸À®Ä G¥ÀPÀæ«Ä¹zÀgÉ ¤¨sÀðgÀªÁzÀ ªÀÄvÀÄÛ DvÀAPÀzÀ F fêÀ£À ¸ÀºÀåªÉ¤¹ÃvÀÄ. C£ÁgÉÆÃUÀåªÀÇ ªÀgÀªÁ¢ÃvÀÄ. DzsÁåvÀäzÉqÉV£À ¥ÀAiÀÄt ¸ÀÄUÀªÀĪÁ¢ÃvÀÄ.


‘DgÉÆÃUÀåªÉà fêÀ£À’ ªÉA§ ªÀiÁwzÉ. DzÀjAzÀÄ C£ÁgÉÆÃUÀåªÉà fêÀ£ÀªÁVzÉ. DgÉÆÃUÀå«gÀ°, C£ÁgÉÆÃUÀå«gÀ° ªÀÄgÀt ¤²ÑvÀªÀ®èªÉÃ? ºÁUÁV EAzÀÄ C£ÁgÉÆÃUÀåzÀ eÉÆvÉV£À §zÀÄPÀÄ C¤ªÁgÀåªÁVzÉ.  ªÀÄzÀĪÉAiÀiÁzÀ £ÀAvÀgÀzÀ §ºÀÄd£ÀgÀ ¥Àj¹ÜwAiÀÄAvÉ! EzÀÄÝzÀgÀ°è fêÀ£ÀzÀ £ÉÆêÀÅ-gÉÆÃUÀ-PÉèõÀ,  vÀ£ÀUÀÆ EvÀgÀjUÀÆ,  ¸ÀºÀ¤ÃAiÀĪÁV¸ÀĪÀ ¸ÀPÁgÁvÀäPÀ ªÀÄvÀÄÛ DzsÁåwäPÀ jÃw-¤ÃwUÀ¼À£ÀÄß £ÁªÉà PÀAqÀÄPÉƼÀî¨ÉÃPÁVzÉ.


 
 


                           || ²æà gÁªÀÄ dAiÀÄ gÁªÀÄ dAiÀÄ dAiÀÄ gÁªÀÄ ||



* ಕ« ªÉA. ¸ÀÄgÉñï



Thursday, November 25, 2010

ಹೀಗೊಂದು ಮೀ(ಮಾಂ)ಸೆ



«ÄøÉUÀÆ «ÄêÀiÁA¸ÉUÀÆ K£ÀÄ ¸ÀA§AzsÀ JAzÀÄ ºÀĨÉâÃj¸À¨ÉÃr. KPÉAzÀgÉ E°è ªÀiÁqÀ ºÉÆgÀngÀĪÀÅzÀÆ «ÄøÉAiÀÄ §UÉÎAiÉÄà MAzÀÄ ¸ÀtÚ «ÄêÀiÁA¸É. «ÄêÀiÁA¸É ¥ÀzÀzÀ°èAiÉÄà «ÄÃ¸É PÀÆqÀ CqÀVgÀĪÀÅzÀÆ MAzÀÄ «±ÉõÀªÉÃ. ºÁUÉAzÀÄ «ÄøÉAiÀÄ §UÉÎ «ÄêÀiÁA¸É £ÀqɸÀ§®è ¤dªÁzÀ «ÄøɪÀAvÀgÀÄ EzÁÝgÉAiÉÄà JAzÀÄ D±ÀÑAiÀÄð¥ÀqÀ¨ÉÃr. AiÀiÁjUÉ UÉÆvÀÄÛ «ÄøÉAiÀÄ ªÀĺÀvÀézÀ §UÉÎ, CzÀgÀ ºÀ®ªÀÅ DPÁgÀ-«PÁgÀUÀ¼À §UÉÎ, CªÀÅUÀ¼À zÀ¥Àà, GzÀÝ, UÁvÀæzÀ §UÉÎ, CzÀgÀ CAzÀ-ZÀAzÀUÀ¼À §UÉÎ £ÀªÀÄä vÉgÉ-ªÀÄgÉAiÀÄ°èAiÉÄà EgÀĪÀ DzsÀĤPÀ ¸ÀA±ÉÆÃzsÀPÀgÀÄ JµÀÄÖ qÁPÀÖgÉÃmï ¥ÀzÀ«UÀ¼À£ÀÄß ¥ÀqÉ¢zÁÝgÉÆÃ? §ºÀıÀ: «ÄøÉAiÀÄA§ ¸ÀtÚ «µÀAiÀÄzÀ §UÉÎ qÁPÀÖgÉÃmï ¥ÀqÉzÀ ¸ÀAPÉÆÃZÀ¢AzÀ¯ÉÆà K£ÉÆà C£ÉÃPÀgÀÄ vÀªÀÄä «zÀévÀÆàtð ¸ÀA±ÉÆÃzsÀ£ÁvÀäPÀ yùøïUÀ¼À£ÀÄß ¥ÀæPÀl¥Àr¸À®Ä »AdjAiÀÄÄvÀÛ®Æ EgÀ§ºÀÄzÀÄ. ºÁUÁVAiÉÄà £ÀªÀÄä°è qÁPÀÖgÉÃmï ¥ÀqÉzÀ C£ÉÃPÀgÀÄ AiÀiÁªÀ «µÀAiÀÄzÀ ªÉÄÃ¯É CzÀ£ÀÄß ¥ÀqÉzÀªÀgÀÄ JA§ÄzÀÄ w½AiÀÄĪÀÅzÉà E®è. EzÀjAzÀ ¸ÁªÀiÁ£ÀåjUÀ F «ÄøÉAiÀÄ ºÀ®ªÀÅ ªÀÄd®ÄUÀ¼ÀÄ CeÁÕvÀªÁVAiÉÄà G½AiÀÄ¢gÀ°, CzÀPÀÆÌ PÀÆqÀ ¸ÁPÀµÀÄÖ ªÀĺÀvÀé EzÉ JA§ÄzÀ£ÀÄß ªÀÄ£ÀzÀlÄÖ ªÀiÁqÀĪÀ ¸ÀtÚ ¥ÀæAiÀÄvÀߪÉà F «ÄêÀiÁA¸É!

«ÄÃ¸É JAzÀgÉãÀÄ? bÉ! EzÉAxÁ ¥Àæ±Éß C£ÀߨÉÃr. yùøï DgÀA¨sÀªÁUÀĪÀÅzÉà »ÃUÉ - definition ¤AzÀ! ªÀÄÆUÀÄ ªÀÄvÀÄÛ ¨Á¬ÄAiÀÄ ªÀÄzsÉå, ªÉÄîÄÝnAiÀÄ ªÉÄïÉ, AiÀi˪À£ÁªÀ¸ÉÜUÉ §AzÀ £ÀAvÀgÀ ¥ÀÄgÀĵÀgÀ°è (PÉ®ªÀÅ ªÀÄ»¼ÉAiÀÄjUÀÆ ªÀÄÆqÀĪÀÅzÀÄAlÄ C¢°è C¥Àæ¸ÀÄÛvÀ) MAzÀÄ ¤¢ðµÀÖ DPÁgÀzÀ°è ªÀÄÆqÀĪÀ PÀÆzÀ®ÄUÀ¼À ¸ÀªÀÄƺÀªÀ£Éßà «ÄÃ¸É J£ÀÄߪÀgÀÄ. CzÀÄ ¥ËæqsÁªÀ¸ÉÜAiÀÄ ¥ÀæwÃPÀªÀÇ ºËzÀÄ. EzÀÄ £À£Àß ¸ÁªÀiÁ£Àå eÁÕ£ÀPÉÌ ºÉƼÉzÀ definition. ¥ÁædÕgÀÄ ºÉaÑ£À ¨É¼ÀPÀÄ Zɮ觺ÀÄzÀÄ. PÉ®ªÀjUÉ ºÀħÄâUÀ¼ÀÆ ªÀÄvÀÄÛ Q«AiÀÄ ªÉÄð£À PÀÆzÀ®ÄUÀ¼ÀÆ «ÄøÉAiÀÄ£Éßà ºÉÆîÄvÀÛªÉ. DzÀgÉ CªÀÅ ¤dªÁzÀ «ÄøÉUÀ¼À®è! dummy UÀ¼É£ÀߧºÀÄzÀµÉÖÃ!

ªÉÆzÀ¯Éà ºÉýzÀAvÉ ¥ÀÄgÀĵÀjUÉà «ÄøÉAiÉÄA§ UÀj. CzÀÄ ¥ÀÄgÀĵÀvÀézÀ ºÉUÀÎgÀÄvÀÄ JAzÀgÀÆ ¸ÀjAiÉÄÃ. DzÀÝjAzÀ¯Éà ¥ÀÄgÀĵÀgÀÄ ªÀiÁvÁæ «ÄÃ¸É wgÀĪÀ§®ègÀÄ! (ªÀÄ»¼ÉAiÀÄgÀÄ vÀªÀÄä ªÀÄÆwAiÀÄ£ÀÄß ªÀÄvÀÄÛ UÀAqÀ£À ªÀÄÆwAiÀÄ£ÀÄß ªÀiÁvÁæ PÀæªÀĪÁV wgÀĪÀ§®ègÀÄ ªÀÄvÀÄÛ w«AiÀħ®ègÀÄ!). DzÀgÉ MAzÀÄ ¥Àæ±Éß: KPÉ PÉ®ªÀgÀÄ ªÀiÁvÁæ «ÄÃ¸É ©qÀÄvÁÛgÉ ªÀÄvÀÄÛ E£ÀÄß PÉ®ªÀgÉÃPÉ «ÄÃ¸É ¨ÉÆý¸ÀÄvÁÛgÉ? “D PÉ®¸À £Á£ÀÄ ªÀiÁqÀ¢zÀÝgÉ £À£Àß «ÄøÉAiÀÄ£Éßà ¨ÉÆý¹©qÀÄvÉÛãɔ JAzÀÄ ¨Áf PÀlÄÖªÀ ºÀ®ªÀgÀ£ÀÄß £ÁªÀÅ £ÉÆÃrzÉÝêÉ. CzÉà jÃw, C£ÉÃPÀ PÀqÉ PÉlÖ PÉ®¸À ªÀiÁrzÀªÀ£À «ÄÃ¸É ¨ÉÆý¹ - MªÉÆäªÉÄä CzsÀð «ÄÃ¸É ¨ÉÆý¹ PÀvÉÛAiÀÄ ªÉÄÃ¯É (¥Á¥ÀzÀ PÀvÉÛ CzÉãÀÄ ªÀiÁrvÀÄÛ?) ªÉÄgÀªÀtÂUÉ ªÀiÁqÀĪÀÅzÀ£ÀÆß ¸ÀºÀ £ÁªÀÅ PÀArzÉÝêÉ. DzÀgÉ, EzÉãÀÆ E®èzÉAiÉÄà ¸ÀĪÀÄä£É vÀªÀÄä «ÄÃ¸É ¨ÉÆý¸ÀĪÀªÀgÀ£ÀÆß £ÁªÀÅ PÀArzÉÝêÉ! ªÀÄzÀĪÉUÉ ªÀÄÄAZÉ “UÀAqÀÄ” ªÀÄzÀÄªÉ DzÀ PÀÆqÀ¯Éà D “UÀAqÀÄ” ¥ÀzÀzÀ PÉÆA§Ä ªÀÄÄjzÀÄ DUÀĪÀÅzÉà “UÀAqÀ”! ºÁUÁV, ªÀÄzÀÄªÉ DzÀ PÀÆqÀ¯Éà PÉ®ªÀÅ “UÀAqÀA¢gÀÄ” «ÄÃ¸É ¨ÉÆý¸ÀĪÀÅzÀ£ÀÄß ¤ÃªÀÅ UÀªÀĤ¹gÀ§ºÀÄzÀÄ. §ºÀıÀ: CzÀgÀ “QjPÀj” “¦j¦j” vÁ¼À¯ÁgÀzÉà CªÀ£À ºÉAqÀw D «ÄøÉUÉ JgÀªÁVgÀ§ºÀÄzÀÄ. CzÉà jÃw, «ÄÃ¸É E®èzÀ PÉ®ªÀÅ UÀAqÀÄUÀ¼ÀÄ ªÀÄzÀĪÉAiÀÄ £ÀAvÀgÀ UÀAqÀ DzÁUÀ «ÄÃ¸É ©qÀĪÀÅzÀgÀ°èAiÀÄÆ PÀÆqÀ CªÀgÀ ¥ÀwßAiÀÄgÀ ¥Á°gÀ§ºÀÄzÀÄ. »ÃUÉ «ÄÃ¸É ©qÀ°PÉÌ, vÉUÉAiÀÄ°PÉÌ C£ÉÃPÀ PÁgÀtUÀ½gÀ§ºÀÄzÀÄ. DzÀgÉ CªÀÅ §ºÀÄ ¤UÀÆqsÀ ªÀÄvÀÄÛ gÀºÀ¸Àå ªÀÄvÀÄÛ ªÉÊAiÀÄÄQÛPÀ.  EAvÀºÀ ¥ÀæªÀÈwÛUÉ ªÀÄÆ® PÁgÀtUÀ¼ÉãÀÄ, EzÀgÀ°è ªÀÄ»¼ÉAiÀÄ ¥ÁvÀæªÉãÀÄ, EzÀjAzÀ (vÀ¤ßZÉÒUÉ «gÀÄzÀÞªÁV) «ÄÃ¸É ©lÖ E®èªÉà ¨ÉÆý¹zÀªÀ£À ªÉÄïÁUÀĪÀ ªÀiÁ£À¹PÀ ªÀÄvÀÄÛ EvÀgÉà ¥ÀjuÁªÀÄUÀ¼ÉãÀÄ, «ÄÃ¸É EgÀ¨ÉÃPÉà ¨ÉÃqÀªÉÃ, F §UÉÎ ¹ÛçÃAiÀÄgÀ/¥ÀÄgÀĵÀgÀ C¤¹PÉUÀ¼ÉãÀÄ? ªÀÄÄAvÁzÀ ¥Àæ±ÉßUÀ¼ÀÄ ¤dPÀÆÌ qÁPÀÖgÉÃmï yùøïUÉ MAzÀÄ GvÀÛªÀÄ ¸ÀA±ÉÆÃzsÀ£ÁvÀäPÀ «µÀAiÀĪÁUÀ§®èªÀÅ.

E£ÀÄß £ÀªÀÄä C£ÉÃPÀ zÉêÀgÀÄUÀ¼À£ÀÄß ªÀÄvÀÄÛ zÉêÀvÁ ¥ÀÄgÀĵÀgÀ£Éßà £ÉÆÃr. CªÀgÀ°è §ºÀ¼ÀµÀÄÖ ªÀÄA¢UÉ «ÄøÉAiÉÄà E®è. CzÉà gÁPÀë¸ÀgÉ®èjUÀÆ ¨sÀdðj «ÄøÉUÀ¼ÀÄ. CAzÀgÉ «ÄÃ¸É E®èzÀªÀgÀÄ ¸ÀvÀÄàgÀĵÀgÀÄ; «ÄÃ¸É EzÀݪÀgÀÄ CzsÀ«ÄðUÀ¼ÀÄ J£ÀÄߪÀÅzÀÄ EzÀgÀ ¸ÀAPÉÃvÀªÉÃ? ²ªÀ£À£Éßà £ÉÆÃr DvÀ£À£ÀÄß “¨sÉÆïÉãÁxï” JAzÀÆ PÀgÉAiÀÄÄvÁÛgÉ. Cwà ¸ÁªÀiÁ£ÀåªÁzÀ CxÀðzÀ°è “¨sÉÆïɔ JAzÀgÉ ªÀÄÄUÀÞ CxÀªÁ ¸Àé®à “¥ÉzÀÄÝ ¥ÉzÀÄÝ” JAzÀÄ w½AiÀħºÀÄzÀÄ. CAvÉAiÉÄà ¸ÀªÀÄÄzÀæ ªÀÄxÀ£À PÁ®zÀ°è ²ªÀ »AzÉ ªÀÄÄAzÉ £ÉÆÃqÀzÉà «µÀ PÀÄrzÀÄ ¤Ã®PÀAoÀ£ÁzÀ; ¸Àé®àªÀÇ ¥ÀƪÁð¯ÉÆÃZÀ£É ªÀiÁqÀzÉà vÀ£Àß DvÀä °AUÀªÀ£Éßà gÁªÀt¤UÉ ¤ÃrzÀ. ºÁUÀAvÀ «ÄÃ¸É E®èzÀªÀgÉ®ègÀÆ “¨sÉÆïɔ J£ÀÄߪÀÅzÀÄ JµÀÄÖ ¸ÀÆPÀÛ? «ÄøÉAiÀÄ §UÉÎ MAzÀÄ ¸ÁégÀ¸ÀåPÀgÀªÁzÀ PÀxÉ EzÉ. M§â gÁd «ÄÃ¸É EgÀĪÀ «zÁéA¸ÀgÉà ºÉZÀÄÑ §Ä¢ÞªÀAvÀgÉAzÀgÉ, DvÀ£À ªÀÄAwæ «ÄÃ¸É EgÀĪÀ ªÁå¥ÁjAiÉÄà §Ä¢ÞªÀAvÀ£ÉAzÀ. ¸Àj, M§â «zÁéA¸À£À£ÀÄß PÀgɹ, ¤£Àß «ÄÃ¸É gÁdjUÉ ¨ÉÃPÁVzÉ, JµÀÄÖ ¨É¯É ºÉüÀÄ JAzÀÄ PÉüÀ¯Á¬ÄvÀÄ. vÀ£Àß «ÄøÉUÀÆ ¨É¯É§AvÀ®è JAzÀÄ M¼ÀUÉƼÀUÉà RĶ¥ÀlÖ D «zÁéA¸À 10 a£ÀßzÀ £ÁtåUÀ¼ÀÄ JAzÀ. DvÀ¤UÉ CzÀ£ÀÄß PÉÆlÄÖ M§â PËëjPÀ£À£ÀÄß PÀgɹ DvÀ£À «ÄÃ¸É ¨ÉÆý¹ PÀ½¸À¯Á¬ÄvÀÄ. £ÀAvÀgÀ M§â ªÁå¥ÁjAiÀÄ£ÀÄß PÀgÉzÀÄ CzÉà ¥Àæ±Éß PÉüÀ¯Á¬ÄvÀÄ. PÀÆqÀ¯Éà ¸Àé®à ¥ÉZÁÑzÀAvÉ PÀAqÀ DvÀ, ¸ÁªÀj¹PÉÆAqÀÄ, vÀ£Àß «ÄøÉUÉ 20 ¸Á«gÀ a£ÀßzÀ £ÁtåUÀ¼ÀÄ JAzÀ. ¸Àj JAzÀÄ PËëjPÀ£À£ÀÄß «ÄÃ¸É ¨ÉÆý¸À®Ä PÀgÉzÁUÀ DvÀ PËëjPÀ¤UÉ »ÃUÉ UÀzÀj¹zÀ: “ºÀĵÁgï, £À£Àß «ÄÃ¸É FUÀ gÁd¤UÉ ¸ÉÃjzÀÄÝ. CzÀ£ÀÄß ªÀÄÄlÖ®Ä AiÀiÁjUÀÆ C¢üPÁgÀ«®”è JAzÀÄ ºÉý a£ÀßzÀ £ÁtåUÀ¼ÉÆA¢UÉ ºÉÆgÀ£ÀqÉzÀ. gÁd «ÄÃ¸É ºÉÆvÀÛ ªÁå¥ÁjAiÉÄà §Ä¢ÞªÀAvÀ£ÉAzÀÄ M¦àPÉÆAqÀ. DzÀÄzÀjAzÀ, «ÄøÉUÀÆ ªÀåQÛAiÀÄ §Ä¢Þ ¸ÁªÀÄxÀåðPÀÆÌ K£ÁzÀgÀÆ ¸ÀA§AzsÀ«zÉAiÉÄà JA§ CA±À PÀÆqÀ ¸ÀA±ÉÆÃzsÀ£ÉUÉ MAzÀÄ M¼Éî ¸ÁªÀÄVæ DUÀ§®èzÀÄ.

PÀÄr «ÄøÉ, aUÀÄgÀÄ «ÄøÉ, ºÀÄj «ÄÃ¸É ªÀÄÄAvÁzÀªÀÅ «ÄøÉAiÀÄ C£ÉÃPÀ «zsÀUÀ¼ÀÄ. aãÀ, d¥Á£ï, £ÉÃ¥Á¼À zÉñÀzÀªÀgÀÄ vÀªÀÄäzÉà DzÀ «²µÀÖªÁzÀ ±ÉÊ°AiÀÄ «ÄøÉUÀ¼À£ÀÄß ºÉÆvÀÛªÀgÀÄ. ««zsÀvÉAiÀÄ°è KPÀvÉ ¸ÁgÀĪÀ ¨sÁgÀvÀzÀ°è ªÀiÁvÁæ £Á£Á «zsÀzÀ vÀgÁªÀj «ÄøÉUÀ¼ÀÄ. »lègï, §lègï, «ÃgÀ¥Àà£ï ªÀÄÄAvÁzÀªÀgÀÄ vÀªÀÄä «£ÀÆvÀ£À ªÀiÁzÀjAiÀÄ «ÄøÉUÀ½AzÀ¯Éà ¥Àæ¹zÀÞgÁzÀªÀgÀÄ! PÉ®ªÀgÀÄ “VjeÁ «Äøɔ PÀÆqÀ ©nÖzÁÝgÀAvÉ. VjeÉ AiÀiÁªÁUÀ «ÄÃ¸É ©lÖ¼ÀÄ? £À£ÀUÀAvÀÆ F ºÉ¸ÀgÀÄ KPÉ ªÀÄvÀÄÛ ºÉÃUÉ §AvÉAzÀÄ w½AiÀÄzÀÄ. D §UÉÎ vÀ£ÀUÉà «ÄÃ¸É E®èzÀ D “¥ÀgÀªÉÄñÀégÀ”£Éà w½¸À¨ÉÃPÀÄ! «ÄøÉAiÀÄ£ÀÄß “næªÀiï” ªÀiÁqÀ¢zÀÝ PÁgÀtPÁÌV Kgï EArAiÀiÁzÀ°è vÀ£Àß PÉ®¸ÀªÀ£Éßà PÀ¼ÉzÀÄPÉÆAqÀªÀ£À §UÉÎ PÀÆqÀ F »AzÉ N¢zÀAvÉ £É£À¥ÀÄ DºÁ! JAxÁ «ÄøÁ©üªÀiÁ¤!  ºÁUÉAiÉÄà ºÀÄqÀÄUÀ «ÄÃ¸É ©nÖ®èªÉA§ PÁgÀtPÉÌ ªÀÄzÀĪÉUÉ M¥ÀàzÀ C£ÉÃPÀ ºÀÄqÀÄVAiÀÄgÀ §UÉÎ PÀÆqÀ ¤ÃªÀÅ w½¢gÀ§ºÀÄzÀÄ. «ÄøÉAiÀÄ ªÉÄÃ¯É ¤A¨É ºÀtÄÚ PÀÆj¸ÀĪÀ, «ÄøɬÄAzÀ¯Éà PÁgÀÄ-«ªÀiÁ£À J¼ÉªÀ ªÀÄvÀÄÛ «ÄøɬÄAzÀ¯Éà ºÀvÁÛgÀÄ ºÉAUɼÉAiÀÄgÀ ªÀÄ£À PÀ¢ªÀ-PÀ®PÀĪÀ C£ÉÃPÀgÀ£ÀÄß £ÁªÀÅ £ÉÆÃrzÉÞêÉ. «ÄøÉAiÀÄ ªÀÄgÉAiÀįÉèà ºÀĹ £ÀUÉ ©Ãj ºÀÈzÀAiÀÄPÉÌ PÀ£Àß ºÁPÀĪÀªÀjUÉãÀÆ PÀrªÉĬĮè.

£ÉÆÃr, ¥Àæ¥ÀAZÀzÀ Cwà GzÀÝzÀ «ÄÃ¸É ºÉÆA¢gÀĪÀ ºÉUÀνPÉ PÀÆqÀ ¨sÁgÀwÃAiÀÄgÀzÉÃ! CºÀªÀÄzÁ¨Á¢£À UÀÄdÓgï JA§ÄªÀ FvÀ£À «ÄøÉAiÀÄ GzÀÝ 12 Cr 6 EAZÀÄUÀ¼ÀÄ! FvÀ vÀ£Àß «ÄøÉAiÀÄ£ÀÄß 22 ªÀµÀðUÀ½AzÀ PÀvÀÛj¹AiÉÄà E®èªÀAvÉ! vÀ£ÀVAvÀ zÀÄ¥ÀàlÄÖzÀÝzÀ F ®A§Ä «ÄøÉAiÀÄ£ÀÄß DvÀ ºÉÃUÉ ¤¨sÁ¬Ä¸ÀÄwÛzÁÞ£ÉÆÃ? §ºÀıÀ: DvÀ£À ºÉAqÀw ¸ÀéAiÀÄA ¨Á¨ï PÀmï ªÀiÁrPÉÆAqÀÄ FvÀ£À ¸ÀºÁAiÀÄPÉÌ ¤AwgÀ®Æ§ºÀÄzÀÄ! EAvÀºÀ «ÄøÉUÀ¼À ¸Á°£À°è £À£Àß ¸ÀA±ÉÆÃzsÀ£ÉUÉ(?) PÀAqÀ ªÀÄvÉÆÛAzÀÄ «ÄøÉAiÉÄAzÀgÉ ¦ü®Ögï «ÄøÉ! EzÉãÀÄ ¤Ãj£À ¦ü®Ögï PÉýzÉݪÀÅ EzÁåªÀ ¦ü®Ögï «ÄÃ¸É JAzÀÄ D±ÀÑAiÀÄð ¥ÀqÀ¨ÉÃr. ¸ÁzsÁgÀtªÁV GvÀÛgÀ PÀ£ÁðlPÀzÀ UÁæ«ÄÃt ¥ÀæzÉñÀzÀ UÀAqÀ¸ÀgÀ°è ¤Ã«zÀ£ÀÄß UÀªÀĤ¸À§ºÀÄzÀÄ. CªÀgÀÄ vÀªÀÄä «ÄøÉAiÀÄ£ÀÄß “næªÀiï” ªÀiÁqÀĪÀÅzÉà E®è. ºÁUÁV CªÀgÀ ªÀÄÆV£À ºÉƼÉî ªÀÄvÀÄÛ ¨Á¬Ä «ÄøÉAiÀÄ GzÀÝ£É PÀÆzÀ®ÄUÀ½AzÀ ªÀÄÄaÑ ºÉÆÃVgÀÄvÀÛzÉ. ºÁUÁV UÁ½AiÀÄ°ègÀĪÀ zsÀƼÀÄ ªÀÄvÀÄÛ DºÁgÀ CzÀgÀ®Æè «±ÉõÀªÁV ¥Á¤ÃAiÀÄ ¸Éë¸ÀĪÁUÀ, F «ÄøÉAiÉÄà ¦ü®Ögï DUÀÄvÀÛzÉ! EªÀgÀÄ PÁ¦ü, nÃ, PÀj¨ÉêÀÅ-PÉÆvÀÛA§j ºÁQzÀ ªÀÄfÓUÉ ªÀÄÄAvÁzÀªÀÅUÀ¼À£ÀÄß PÀÄrzÀ PÀÆqÀ¯Éà CªÀgÀ «ÄøÉAiÀÄ£ÀÄß UÀªÀĤ¹. PÁ¦ü, nÃAiÀÄ°è£À PÉ£É, ªÀÄfÓUÉAiÀÄ°èzÀÝ ¸ÉÆ¥ÀÄà EvÁå¢UÀ¼ÀÄ «ÄøÉUÉ CAnPÉÆAqÀÄ ºÀ¤ ºÀ¤AiÀiÁV vÉÆnÖPÀÄÌwÛzÀÝgÉ, ªÀÄĸÀÄgÉ §QÃnUÉ ªÀÄÆw C¢Ý PÀvÉÛwÛzÀ JªÉÄäAiÀÄ ¨Á¬ÄAiÀÄ zÀȱÀå ¤ªÀÄä ªÀÄÄAzÉ RArvÁ ¨ÁgÀ¢gÀzÀÄ!

DzÀgÉ «ÄÃ¸É ¨ÉÃPÉ - ¨ÉÆý¸À¨ÉÃPÉà JA§ feÁÕ¸É §ºÀıÀ: F ¥Àæ¥ÀAZÀ EgÀĪÀ vÀ£ÀPÀ J®è ¥ÀÄgÀĵÀgÉà C®èzÉà ¹ÛçAiÀÄgÀ£ÀÆß RArvÁ PÁqÀzÉà ©qÀ¯ÁgÀzÀÄ. “«ÄÃ¸É EzÀÝgÀÄ aAvÉ, «ÄÃ¸É E®è¢zÀÝgÀÆ aAvÉ” JA§AvÉ. JgÀqÀPÀÆÌ CzÀgÀzÀgÀzÉà DzÀ §®ªÁzÀ PÁgÀtUÀ½gÀ§ºÀÄzÀÄ - ¸ÀªÀÄxÀð£ÉUÀ½gÀ§ºÀÄzÀÄ. F feÁÕ¸É PÀÆqÀ £ÀªÀÄä  ‘qÁPÀÖgÉÃmï’ DPÁAQëUÀ½UÉ MAzÀÄ PÀÄvÀƺÀ®PÀgÀªÁzÀ ¸ÀA±ÉÆÃzsÀ£ÁvÀäPÀ «µÀAiÀĪÀÇ DUÀ§®èzÀÄ.

“dnÖ £É®PÉÌ ©zÀÝgÀÆ «ÄÃ¸É ªÀÄuÁÚUÀ°®è” , “«ÄÃ¸É §AzÀªÀ¤UÉ zÉñÀ PÁtzÀÄ” ªÀÄÄAvÁzÀªÀÅ «ÄÃ¸É §UÉÎ EgÀĪÀ PÉ®ªÀÅ ¥ÀæZÀ°vÀ UÁzÉUÀ¼ÀÄ. “«ÄøÉUÉƧâ D¸ÉUÉƧ┠JA§ ZÀ®£ÀavÀæ PÀÆqÀ EzÉAiÀÄAvÉ! PÉ®ªÀÅ ªÀµÀðUÀ¼À »AzÉ vÀÄA¨Á d£À¦æAiÀĪÁV NrzÀ “UÉÆïïªÀiÁ¯ï” »A¢ avÀæzÀ ¥ÀÆtð PÀxÉ MAzÀÄ «ÄøÉAiÀÄ ªÉÄïÉÃAiÉÄà ºÉuÉ¢gÀĪÀÅzÀÄ UÀªÀÄ£ÁºÀð. “£À£Á߸ÉAiÀÄ «Äøɔ, “UÀAqÀÄUÀ° «Äøɔ, “«ÄøÉAiÀÄ §¯ÉAiÀÄ°è”, “«ÄÃ¸É ªÉÄÃ¯É ¸ÀªÁ¯ï”, “«ÄÃ¸É ªÀÄ®è”, “«ÄøÉUÉà ¸ÀªÁ¯ï” (»ÃgÉÆÃAiÀÄ£ï ªÀÄÄRå ¥ÁvÀæzsÁjAiÀiÁVzÀÝgÉ), “PÉgÀ½zÀ «Äøɔ, “«ÄøÉAiÀÄ D¸ÀgÉAiÀÄ°è”, “«ÄÃ¸É ºÉÊzÀ” ªÀÄÄAvÁzÀ £ÀªÀå ºÉ¸Àj£À ZÀ®£ÀavÀæUÀ¼ÀÄ §AzÀgÀÆ D±ÀÑAiÀÄð ¥ÀqÀ¨ÉÃPÁV®è!  «ÄøÉ-UÀqÀØzÀ §UÉÎ CAvÀgÀgÁ¶ÖçÃAiÀÄ ªÀÄlÖzÀ ¸ÀàzsÉðUÀ¼ÀÄ PÀÆqÁ ¥Àæw ªÀµÀð £ÀqÉAiÀÄÄvÀÛzÀAvÉ.  ºÁUÁV «ÄÃ¸É JAzÀgÉ ¸ÀtÚ «µÀAiÀĪÀ®è. «ÄÃ¸É ©r E®èªÉà ¨ÉÆý¹. F ªÉÄð£À CA±ÀUÀ¼À »£É߯ÉAiÀÄ°è CzÀÄ ¤ªÀÄä «ªÉÃZÀ£ÉUÉ ©lÖzÀÄÝ! DzÀgÉ D §UÉÎ £À£ÀUÉ w½zÀ £Á®ÄÌ «ZÁgÀUÀ¼À£ÀÄß ºÉÆgÀºÁQ, F «µÀAiÀÄzÀ §UÉÎ ¸ÀA±ÉÆÃzsÀ£ÉUÉ CºÀðªÁzÀ PÉ®ªÀÅ DAiÀiÁªÀÄUÀ¼À£ÀÄß ¸ÀÆa¹,  “qÁPÀÖgÉÃmï” ¥ÀzÀ«UÉ ºÉƸÀ ºÉƸÀ «µÀAiÀÄPÁÌV ¥ÀgÀzÁqÀÄwÛgÀĪÀ C£ÉÃPÀjUÉ ¸ÀºÁAiÀÄPÀªÁUÀ°Ã ªÀÄvÀÄÛ CµÉÖà C®èzÉà «ÄøÉAiÀÄ §UÉÎ qÁPÀÖgÉÃmï ¥ÀqÉzÀªÀgÀÆ PÀÆqÀ vÀªÀÄä «zÀévï ¥Àæ§AzsÀUÀ¼À£ÀÄß ¤¸ÀìAPÉÆÃZÀªÁV ¥ÀæPÀn¹ «ÄøÉAiÀÄ §UÉÎ vÀªÀÄä ªÀÄƸɬÄAzÀ ºÉZÉÑZÀÄÑ «ZÁgÀUÀ¼À£ÀÄß ºÀAaPÉƼÀÄîªÀ zsÉÊAiÀÄð §AzÀÄ «ÄøÉAiÀÄ J¯Áè DAiÀiÁªÀÄUÀ¼ÀÆ £À£ÀUÀÆ ¸ÉÃj J®èjUÀÆ w½AiÀÄĪÀAvÁUÀ°Ã, ªÀÄvÀÄÛ «ÄÃ¸É ©lÖªÀgÀÄ ªÀÄvÀÄÛ ¨ÉÆý¹zÀªÀgÀÆ vÀªÀÄä ªÀÄÄA¢£À PÁAiÀÄðPÀæªÀÄzÀ §UÉÎ aAw¸À®Ä C£ÀĪÁUÀ° JA§ GzÉÞñÀ¢AzÀ¯Éà F «ÄÃ(ªÀiÁA)¸É!


«.¸ÀÆ: EAvÀºÀ «µÀAiÀÄUÀ½UÉà qÁPÀÖgÉÃmï PÉÆqÀĪÀ PÉ®ªÉà PÉ®ªÀÅ ¸ÀA¸ÉÜUÀ½ªÉ. CAvÉAiÉÄà CªÀÅUÀ½UÉ KeÉAlgÀÆ EzÁÝgÀAvÉ. ¤UÀ¢vÀ ±ÀÄ®Ì ¥ÁªÀw¹zÀgÁ¬ÄvÀÄ. G½zÀÄzÉ®è single total package! CªÀÅUÀ¼À£ÀÄß UÀÄgÀÄw¹, ªÀåªÀºÁgÀ PÀÄzÀÄj¹PÉƼÀÄîªÀ dªÁ¨Áâj ªÀÄvÀÄÛ PÀ¸ÀgÀvÀÄÛ ªÀiÁvÁæ ¤ªÀÄäzÀÄ. AiÀiÁªÀÅzÉà (CqÀØ) ¥ÀjuÁªÀÄUÀ½UÉ (¤ªÀÄä «ÄøÉAiÀÄ ¸ÀÄgÀPÀëvÉAiÀÄÆ ¸ÉÃjzÀAvÉ!) F ¯ÉÃRPÀ ºÉÆuÉAiÀÄ®è! MmÁÖgÉ ¤ªÀÄä ºÉ¸ÀgÀ ªÀÄÄAzÉ qÁ: §AzÀÄ ¥ÉÃ¥ÀgïUÀ¼À°è ¤ªÀÄä ¥sÉÆÃmÉÆà gÁgÁf¹zÀgÉ ¸ÁPÀ®èªÉÃ? E£ÉßÃPÉ vÀqÀ «ÄÃ¸É wgÀÄ«j; «ÄøÉAiÀÄ §UÉÎ ¤ªÀÄä §Ä¢ÞAiÀÄ£ÀÄß CgɬÄj; - ªÀÄÄ£ÀßqɬÄj!!!


[ªÉÄÃ,2009 d£ÀºÉÆÃgÁl ¥ÀwæPÉAiÀÄ°è ¥ÀæPÀnvÀ ¯ÉÃR£À)


Thursday, November 18, 2010

ಶೂನ್ಯದಿಂದ ಶೂನ್ಯದೆಡೆಗೆ

ನಾವು ಎಲ್ಲಿದ್ದೆವು?  ಎಲ್ಲಿಂದ ಬಂದೆವು?   ಹೇಗೆ ಬಂದೆವು? ಎಂಬೀ ಪ್ರಶ್ನೆಗಳು ಜೀವನದಲ್ಲಿ   ನಮ್ಮನ್ನೊಮ್ಮೆಯಾದರೂ ಕಾಡದೇ ಇರಲಾರವು.  ಈ ದೇಹ ಪಂಚ ಭೂತಗಳಿಂದ ಸೃಷ್ಟಿಯಾಯಿತೆಂಬುದು ಸಾಮಾನ್ಯ ನಂಬಿಕೆ. ನಾವು ಎಲ್ಲಿದ್ದೆವು? ಹಿಂದೆ ಏನಾಗಿದ್ದೆವು? ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಇನ್ನೂ ನಿಗೂಢವೇ. ಕೆಲವು ಪೂರ್ವಜನ್ಮದ ನೆನಪನ್ನು ಈ ಜನ್ಮದಲ್ಲಿ ತೋರಿದಂತಹ ಮತ್ತು ಅನುಭವಿಸಿದಂತಹ ಕೆಲವೇ ಕೆಲವು ಪ್ರಕರಣಗಳನ್ನು ಬಿಟ್ಟರೆ, ಆ ಬಗ್ಗೆ ಚೆಲ್ಲಿರುವ ಬೆಳಕು ಏನಕ್ಕೂ ಸಾಲದು. ಅದೇ ರೀತಿ, ಸಾವಿನ ನಂತರ ಮುಂದಿನ ನಮ್ಮ ’posting’ ಕೂಡಾ ನಿಗೂಢ - ಅನಿಶ್ಚಿತ. ಉಸಿರಾಡುವ ತನಕ ಈ ದೇಹ ತನ್ನ ಚಟುವಟಿಕೆಗಳನ್ನು ನಿರಂತರ ಸಾವಕಾಶವಾಗಿ ಮಾಡುತ್ತಿರುವ ತನಕ, ನಾವು ಜೀವಿತವಿದ್ದೇವೆ ಎನ್ನವುದೇ ನಿತ್ಯಾನುಭವ - ನಿತ್ಯ ಸತ್ಯ. ಅದುವೇ ವಾಸ್ತವ.
    ಹಿಂದಿನದು ಅರಿಯೆ - ಮುಂದಿನದು ತಿಳಿಯೆ - ಎಂಬುದು ಸೂರ್ಯನ ಬೆಳಕಷ್ಟೇ ನಿಚ್ಚಳವಾದಾಗ, ನಾವು ಅನುಭವಿಸಿ ಬಾಳುತ್ತಿರುವ ಬಾಳು - ಅಂದರೆ ಪ್ರಸ್ತುತ ಜೀವನ - ಸುಂದರವಾಗಿರಬೇಕು; ಅರ್ಥಪೂರ್ಣವಾಗಿರಬೇಕು; ಇತರರಿಗೆ ಸಹನೀಯ-ಸಹಕಾರಿಯಾಗಿರಬೇಕು ಎನ್ನವುದು ಸ್ವಸ್ಥ ಮಾನವರೆನಿಸಿಕೊಂಡವರೆಲ್ಲರ ಬಯಕೆ. ಬಾಳು ಅನಿಶ್ಚಿತ - ಸಾವು ನಿಶ್ಚಿತ. ಬದುಕಿನ ಅನಿಶ್ಚಿತತೆಯ ಅವಿರತ ನೆನಪು ಬದುಕನ್ನು ಹೆಚ್ಚು ಸುಂದರವಾಗಿರಿಸಿಕೊಳ್ಳಲು ತುಂಬಾ ಸಹಕಾರಿಯಾದೀತು. ಎಂತಲೇ ಬದುಕಿನ ಪ್ರತಿ ಹಂತದಲ್ಲಿ (ಬಾಲ್ಯ, ಯೌವನ, ಗೃಹಸ್ಥಾಶ್ರಮ ಮತ್ತು ವಾನಪ್ರಸ್ಥಾಶ್ರಮ) ನಾವು ಹೇಗಿದ್ದರೆ ಚೆನ್ನ ಎಂಬುದನ್ನೊಮ್ಮೆ ಮೆಲುಕು ಹಾಕಬಹುದಲ್ಲವೇ? ಪ್ರಪಂಚ ಬರೀ ಸಂಕಟ, ನರಳಾಟಗಳಿಂದ ತುಂಬಿದ ಸ್ಥಳವಲ್ಲ. ಇದು ಸುಂದರವಾದ ಮತ್ತು ಶಾಂತವಾದ ಸನ್ನಿವೇಶದಲ್ಲಿ ಜೀವನೋನ್ನತಿಗೆ ಹಾಗೂ ಸದ್ಗತಿ ಪ್ರಾಪ್ತಿಗೆ ಅನುವು ಮಾಡಿಕೊಡುವಂತಹ ಪರಮಾತ್ಮನ ಶಾಲೆ. ಆದುದರಿಂದ, ಜೀವನದ ಪ್ರತಿಯೊಂದು ಘಟ್ಟವನ್ನೂ ಅನುಭವಿಸಿ ಅದರ ಸಾರವನ್ನು ಆತ್ಮೋದ್ಧಾರಕ್ಕೆ ಸೋಪಾನ ಮಾಡಿಕೊಂಡಾಗ ಜೀವನ ನಿಜಕ್ಕೂ ಸುಂದರವಾದೀತು.

    ಬಾಲ್ಯಾವಸ್ಥೆ (ಬುದ್ದಿ ಬರುವವರೆಗೆ) ಬಹುಶ: ಮನುಷ್ಯ ನಿಶ್ಚಿಂತತೆಯಿಂದ, ಯಾವುದೇ ಪೂರ್ವಾಪರ ವಿಚಾರಗಳಿಂದ ಹೊರತಾಗಿ ಮತ್ತು ರಾಗ-ದ್ವೇಷಗಳ ಛಾಯೆಯಿಲ್ಲದೇ ಇರುವ ಏಕೈಕ ಘಟ್ಟ; ಬಹುಶ: ನಮ್ಮ ಜೀವನದ ’only colourful and golder period!’.  ಎಂತಲೇ ಮಕ್ಕಳನ್ನು ದೇವರು - ದೇವರ ಸಮಾನರೆನ್ನುವುದು. ದೈವತ್ವಕ್ಕೆ ಮತ್ತು ಮುಗ್ಧತೆಗೆ ಮತ್ತೊಂದು ಹೆಸರೇ ಏನೂ ಅರಿಯದ ಈ ಮಕ್ಕಳು. ತಂದೆ-ತಾಯಿಯರ ಬೆಚ್ಚಗಿನ ಆಸರೆಯಲ್ಲಿ ಅಜ್ಜ-ಅಜ್ಜಿಯರ ಪ್ರೀತಿಯ ಝರಿಯಲ್ಲಿ ಹಾಗೂ ನೆರೆ-ಹೊರೆ ಪುಟಾಣಿಗಳ ಸಹಯೋಗದಲ್ಲಿ ಬಾಲ್ಯಾವಸ್ಥೆ ಬಲುಬೇಗ ಕಳೆದುಬಿಡುತ್ತದೆ. ಸ್ವ-ಬುದ್ಧಿ ಮತ್ತು ಸ್ವ-ಚಿಂತನಾ ಶಕ್ತಿಗಳು ಈ ಹಂತದಲ್ಲಿ ಇನ್ನೂ ಪೂರ್ಣವಾಗಿ ವಿಕಸನ ಆಗದ ಕಾರಣ ವ್ಯಕ್ತಿ ತಾನಾಗಿಯೇ (ಸ್ವತಂತ್ರನಾಗಿ) ಏನೂ ಮಾಡಲಾರನು.
    ಬಾಲ್ಯ ಕಳೆದು ಶಾಲೆಗೆ ಸೇರಿದೊಡನೆಯೇ ಮನುಷ್ಯ ಜೀವನದ ಜಂಜಾಟದ ಪರಿ ಆರಂಭವಾಯಿತೆಂದೇ ಅರ್ಥ - ಅಂದರೆ ವಿದ್ಯಾರ್ಥಿ ದೆಸೆ. ಹಿಂದೆ ಗುರುಕುಲ ಪದ್ಧತಿಯಿದ್ದು ಈಗ ಸಾಕಷ್ಟು ವಿಕಸಿತವಾದ ಮತ್ತು ವಿಸ್ತೃತವಾದ ಶೈಕ್ಷಣಿಕ ವ್ಯವಸ್ಥೆ ಇದೆ. ಆದರೆ ಈ ಶಿಕ್ಷಣ ಪದ್ಧತಿ ಎಷ್ಟರ ಮಟ್ಟಿಗೆ ವ್ಯಕ್ತಿ ವಿಕಾಸಕ್ಕೆ ಮತ್ತು ಮೌಲ್ಯವರ್ಧನೆಗೆ ಪೂರಕವಾಗಿದೆ ಎಂಬುದು ಚರ್ಚಾಸ್ಪದ ವಿಚಾರ. ’ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಮುಂದೆ ನಾವು ಏನಾಗುತ್ತೇವೆ ಎಂಬುವ ಎಲ್ಲಾ ಸೂಚನೆಗಳೂ ಈ ಘಟ್ಟದಲ್ಲೇ ಸೂಕ್ಷ್ಮವಾಗಿ ಗೋಚರವಾಗುತ್ತವೆ. ವಿದ್ಯಾರ್ಥಿ ಜೀವನ ಹೇಗಿರಬೇಕು? ವಿದ್ಯಾರ್ಥಿ ಹೇಗಿರಬೇಕು? ಎಂಬ ಬಗ್ಗೆ ಈಗ ಸಾಕಷ್ಟು ಮಾಹಿತಿ ಇದೆ. ಮಾರ್ಗಧರ್ಶಕರೂ ಇದ್ದಾರೆ. ಆದರೆ ಈಗಿನ ವಿದ್ಯಾಭ್ಯಾಸ ಕ್ರಮ ’knowledge-based’ ಅಗಿದೆಯೇ ಹೊರತು ಅದರ ಒತ್ತು ವ್ಯಕ್ತಿ-ವಿಕಸನ ಆಗಿಲ್ಲ. ಒಂದು ರೀತಿ ನೋಡಿದರೆ ಈ ಆಧುನಿಕ ಶಿಕ್ಷಣ ಅರ್ಥಹೀನವಾದದ್ದು. ಅದು ಹಣ ಗಳಿಸುವ ಬಗ್ಗೆ (ಹಣ ಗಳಿಕೆ ಯಾವ ರೀತಿಯಿಂದ ಎನ್ನುವ ಬಗ್ಗೆ ಲಕ್ಷ್ಯವೇ ಇಲ್ಲ), ಮಾಹಿತಿ ಸಂಗ್ರಹಿಸುವ ಬಗ್ಗೆ ಒತ್ತು ನೀಡಿ, ಉತ್ತಮ ನೈತಿಕತೆ, ನಡತೆಗಳ ಬಗ್ಗೆ ಚಕಾರವೆತ್ತುವುದಿಲ್ಲ. ಅರ್ಥಾತ್ ಸಾಸಿವೆಯಲ್ಲಿ ಸಾಗರವನ್ನು ಹಿಡಿದಿಡುವ ವ್ಯರ್ಥ ಪ್ರಯತ್ನ. ನಮ್ಮ ತಲೆ ಬರೀ ಮಾಹಿತಿಗಳ ಆಕರವಷ್ಟೇ ಆದರೆ ಸಾಲದು; ಮಾನವೀಯತೆ ಮತ್ತು ಸುಸಂಸ್ಕೃತಿಯನ್ನು ಮೆರೆಯುವ ಮೆದುಳೂ ಆಗಬೇಕು. ಉತ್ತಮ ಸಂಸ್ಕಾರ, ಉತ್ತಮ ನಡೆ-ನುಡಿ, ವಿಧೇಯತೆ, ಗುರು-ಹಿರಿಯರಲ್ಲಿ ಗೌರವ, ಓದಿನಲ್ಲಿ ಶ್ರದ್ಧಾಭಕ್ತಿ, ಸಹಪಾಠಿಗಳಲ್ಲಿ ಪ್ರೇಮ-ಸಹಕಾರ, ಅವರ ನೋವು-ನಲಿವುಗಳಿಗೆ ಸ್ಪಂದಿಸುವ ಪ್ರಜ್ಞೆ ಮುಂತಾದುವುಗಳನ್ನು ಬೆಳೆಸುವುದು, ಪೋಷಿಸುವುದು ವ್ಯವಸ್ಥೆಯ ಮತ್ತು ಪೋಷಕರ ಜವಾಬ್ದಾರಿಯಾದರೂ ಕೂಡ. ಮಕ್ಕಳೂ ಆ ದಿಸೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದಾಗ, ಅವರ ವಿದ್ಯಾರ್ಥಿ ಜೀವನ ಸಾರ್ಥಕ ಕಂಡೀತು. ೪೦ ವರ್ಷ ದಾಟಿದ ನಂತರ ನಾನು ಎಸ್.ಎಸ್.ಎಲ್.ಸಿ.ಯಲ್ಲಿ ಸ್ವಲ್ಪ ಹೆಚ್ಚು ಅಂಕ ಪಡೆದಿದ್ದರೆ ಚೆನ್ನಾಗಿರುತ್ತಿತ್ತು ಅಥವಾ ಇನ್ನೂ ಸ್ವಲ್ಪ ಚೆನ್ನಾಗಿ ಓದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಪಶ್ಚಾತ್ತಾಪಕ್ಕೆ ಅವಕಾಶವಿಲ್ಲದಾದೀತು!
    ರೆಕ್ಕೆ-ಪುಕ್ಕ ಬಂದೊಡನೆ ಮರಿಹಕ್ಕಿ ಗೂಡಿನಿಂದ ಹಾರಿ ಹೋಗಿ ಬಿಡುತ್ತದೆ; ತಂದೆ-ತಾಯಿಗಳೆಂಬ ಬಂಧವನ್ನು ಕೂಡ ಕಳಚಿಕೊಂಡು. ತನ್ನ ಸ್ವಂತ ಶ್ರಮದ ಮೇಲೆ ತನ್ನ ಹೊಸ ಜೀವನ ಆರಂಭಿಸಿಯೇ ಬಿಡುತ್ತದೆ. ಅದೇ ರೀತಿ, ವಿದ್ಯಾಭ್ಯಾಸ ಮುಗಿದ ಕೂಡಲೇ ಸೂಕ್ತ ಉದ್ಯೋಗ ಬೇಟೆ ಪ್ರಾರಂಭ. ಏಕೆಂದರೆ ಇಲ್ಲಿ ದುಡಿಯುವವರಿಗೆ (ಸಂಪಾದಿಸುವವರಿಗೆ) ಮಾತ್ರ ಮನ್ನಣೆ.  ದುಡಿಯದ ಗಂಡನನ್ನು ಹೆಂಡತಿ ಕೂಡ ಮೂಲೆಗುಂಪು ಮಾಡುವಳು. ಈಗಿನ ಕಾಲದಲ್ಲಿ ಓದಿಗೆ ತಕ್ಕಂತೆ, ಪ್ರತಿಭೆಗೆ ತಕ್ಕಂತೆ ಉದ್ಯೋಗ ಅನೇಕ ಬಾರಿ ಅನೇಕರಿಗೆ ಸಿಗದು. ಓದಿಗೂ-ಉದ್ಯೋಗಕ್ಕೂ ಅನೇಕ ಕಡೆ ಸಾಮ್ಯವೇ ಇರದು. ಆದಾಗ್ಯೂ, ಪಾಲಿಗೆ ಬಂದ ಕರ್ತವ್ಯವನ್ನು ನಿಸ್ಪೃಹವಾಗಿ, ಪ್ರಾಮಾಣಿಕವಾಗಿ ಹಾಗೂ ದಕ್ಷತೆಯಿಂದ ಮಾಡುವುದು ಮೊದಲು ಎಲ್ಲರ ಧ್ಯೇಯವಾಕ್ಯವಾಗಬೇಕು. ಈ ಪ್ರಪಂಚವೆಂಬ ನಾಟಕ ಶಾಲೆಯಲ್ಲಿ ಭಗವಂತ ನಮಗೆ ಕೊಟ್ಟಿರುವ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದಾಗಲೇ ನಾಟಕಕ್ಕೂ ಮತ್ತು ಕಲಾಕಾರನಿಗೂ ಸಾರ್ಥಕ್ಯ. ಸಂಪಾದಿಸಿದ ಹಣದ ನಿರ್ವಹಣೆ ಕೂಡ ಅಷ್ಟೇ ಪ್ರಾಮುಖ್ಯವಾದುದು. ಯೌವನ + ಹಣ - ಬಹಳ ತುಂಟ ಜೊತೆಗಾರರು. ಕ್ಷಣದಲ್ಲಿ ಹಾದಿ ತಪ್ಪಿಸಿ, ಅರಿವಾಗುವ ಮುಂಚೆಯೇ   ಹಳ್ಳಕ್ಕೆ ತಳ್ಳುವುದರಲ್ಲಿ ನಿಸ್ಸೀಮರು. ವೈವಾಹಿಕ ಜೀವನಕ್ಕೆ ಹಾಗೂ ಮುಂದೆ ನಿವೃತ್ತಿ ಜೀವನಕ್ಕೆ ನೆರವಾಗುವಂತೆ ಸೂಕ್ತ ವ್ಯವಸ್ಥೆಯನ್ನು ಮಾಡಿ, ದುಶ್ಚಟಗಳಿಗೆ ಬಲಿ ಬೀಳದೇ, ಸಮಾಜದ ನಾಲ್ಕು ಜನ ಮೆಚ್ಚುವ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸ್ವ-ಪ್ರಯತ್ನ, ಸ್ವ-ಸಹಾಯ ಮಂತ್ರವಾಗಿ ಇತರರ ಮುಂದೆ ಕೈ ಚಾಚುವ ಪರಿ ತ್ಯಜಿಸಿ ಬಾಳುವ ಬಾಳೇ ನಿಜವಾದ ಬಾಳು.
ಉದ್ಯೋಗ ಸಿಕ್ಕ ಮೇಲೆ ಜೀವನ ಸಂಗಾತಿ ಬಯಕೆ;  ವಿವಾಹ - ಮಡದಿ - ಮಕ್ಕಳು. ಎಲ್ಲಾ ಹೊಸತು. ಎಲ್ಲೆಡೆ ಸಂತಸ, ಸಂಭ್ರಮ. ಇಡೀ ಪ್ರಪಂಚವೇ ಒಂದು ಸುಂದರ ತಾಣ. ದಿನ ಕಳೆದಂತೆ, ಮಕ್ಕಳು ದೊಡ್ಡವರಾದಂತೆ ಸಂಸಾರದ ನಿಜವಾದ ಜಂಜಾಟದ ಅರಿವು. ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸುವುದು ತಂದೆ-ತಾಯಿಯರ ಒಂದು ಗುರುತರ ಕರ್ತವ್ಯ. ಅತ್ಯಂತ ಕಲುಷಿತಗೊಂಡಿರುವ ಇಂದಿನ ಸಮಾಜದಲ್ಲಿ ಪೋಷಕರೆ ಮಕ್ಕಳಿಗೆ ನಿಜವಾದ ’role-model’ ಗಳು. ಉತ್ತಮ ಸಂಸ್ಕಾರ, ಉತ್ತಮ ನಡವಳಿಕೆ, ಗುರು-ಹಿರಿಯರಲ್ಲಿ ಭಕ್ತಿ-ಭಾವನೆ, ವಂಶದ ಆಚರಣೆಗಳ ಬಗ್ಗೆ, ಕಟ್ಟು ಪಾಡುಗಳ ಬಗ್ಗೆ ಹಾಗೂ ಹಿರಿಯರ ಬಗ್ಗೆ ಮಾಹಿತಿ ಮುಂತಾದವುಗಳನ್ನು ನೀಡುವುದು ಹಿರಿಯರ ಆದ್ಯ ಕರ್ತವ್ಯ. ನಾವು ಸಮಾಜಕ್ಕೆ ಏನನ್ನು ನೀಡದಿದ್ದರೂ, ಮಾಡದಿದ್ದರೂ ಪರವಾಗಿಲ್ಲ - ಉತ್ತಮ ನಾಗರೀಕರನ್ನು ಸಮಾಜಕ್ಕೆ (ನಮ್ಮ ಮಕ್ಕಳ ರೂಪದಲ್ಲಿ) ನೀಡಿ - ಅದಕ್ಕಿಂತ ಬೇರೆ ಸಂತೃಪ್ತಿ ಮತ್ತು ಸಾಧನೆ ಮತ್ತೊಂದಿಲ್ಲ. ಸುಖೀ ಮತ್ತು ಸಂತೃಪ್ತ ಸಂಸಾರ ನಮ್ಮೆಲ್ಲರ ಗುರಿಯಾಗಲಿ. ಗೃಹಸ್ಥಾಶ್ರಮದ ಸಾರ್ಥಕತೆ ಬಗ್ಗೆ ಚಾಣಕ್ಯನ ಈ ನೀತಿ ಮಾತು ಇಲ್ಲಿ ಪ್ರಸ್ತುತ:

ಸಾನಂದಂ ಸದನಂ ಸುತಾಶ್ಚ ಸುಧಿಯ: ಕಾಂತಾ ನ ದುರ್ಭಾಷಿಣೀ
ಸನ್ಮಿತ್ರಂ ಸುಧನಂ ಸ್ವಯೋಪಿತಿ ರತಿ: ಆಜ್ಞಾಪರಾ: ಸೇವಕಾ: |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋ: ಸಂಗಮುಪಾಸನೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮ: ||


[ಆನಂದ ತುಂಬಿದ ಮನೆ, ಬುದ್ಧಿವಂತರಾದ ಮಕ್ಕಳು, ಎದುರು ವಾದಿಸದ ಪತ್ನಿ, ಹಿತೈಷಿಗಳಾದ ಸ್ನೇಹಿತರು, ಧರ್ಮ ಮೂಲದಿಂದ ಸಂಪಾದಿಸಿದ ಧನ, ಸ್ವಪತ್ನಿಯಲ್ಲಿ ನಲಿಯುವಿಕೆ, ಆಜ್ಞೆಯನ್ನು ಮೀರದ ಸೇವಕರು, ಅತಿಥಿ ಸತ್ಕಾರ, ಪ್ರತಿ ನಿತ್ಯ ಭಗವದಾರಾಧನೆ, ಇಷ್ಟವಾದ ಅನ್ನ ಪಾನಾದಿಗಳು, ಮನೆಗೆ ಸದಾ ಸಾಧು-ಸಂತರು ಬಂದು ಹೋಗುತ್ತಿರುವುದು - ಹೀಗೆ ಇದ್ದಾಗ ಗೃಹಸ್ಥಾಶ್ರಮವು ಧನ್ಯವಾಗುತ್ತದೆ].

    ಸುಂದರವಾದ ಗೃಹಸ್ಥಾಶ್ರಮದ ಸವಿ ಇನ್ನೂ ಸವಿಯುತ್ತಿರುವಾಗಲೇ ನಮಗೇ ತಿಳಿಯದಂತೆ ವಯಸ್ಸು (ಆಯಸ್ಸು) ನಮ್ಮನ್ನು ಬೆನ್ನು ಹತ್ತಿರುತ್ತದೆ. ಒಂದು ದಿನ ಕಛೇರಿಯಲ್ಲಿ ಹೂವು-ಹಣ್ಣು ಕೊಟ್ಟು, ಹಾರ ಹಾಕಿ ನೀವೀಗ ’ರಿಟೈರ್’ ಎಂದು ಮನೆಗೆ ಕಳಿಸಿ ಬಿಡುತ್ತಾರೆ. ಉದ್ಯೋಗದಲ್ಲಿದ್ದಾಗಲೇ ಮಕ್ಕಳ ವಿದ್ಯಾಭ್ಯಾಸ, ಹೆಣ್ಣು ಮಕ್ಕಳ ಮದುವೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ  ನಿವೃತ್ತಾನಂತರದ ಪ್ರವೃತ್ತಿ ಮುಂತಾದವುಗಳ ಬಗ್ಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದರೆ, ಈ ’ನಿವೃತ್ತಿ’ ಎಂಬ ಭೂತ ನಿಮ್ಮನ್ನು ಹೆಚ್ಚು ಕಾಡಲಾರದು. ಆದರೆ ನಿವೃತ್ತಿ ಆಗುವ ತನಕ ನಮ್ಮ ಜೀವನದ ಎಲ್ಲ ರಂಗಗಳಲ್ಲಿ - ಉದ್ಯೋಗ, ಹಣ ಸಂಪಾದನೆ, ಆಸ್ತಿ ಗಳಿಕೆ ಇತ್ಯಾದಿ - ಮುಗಿಲು ಮುಟ್ಟುವ ಪ್ರಯತ್ನ ಮತ್ತು ಶ್ರಮ ನಮ್ಮ ಪ್ರವೃತ್ತಿಯಾಗಿರಬೇಕು. ಆದರೆ ಅವೆಲ್ಲವೂ ಪ್ರಾಮಾಣಿಕವಾದ, ಪಾರದರ್ಶಕವಾದ ಮತ್ತು ಪರರನ್ನು ನೋಯಿಸದ ಮಾರ್ಗದಲ್ಲಿರಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. ಜೀವನದಲ್ಲಿ ನಿವೃತ್ತಿ (ಅದು ಉದ್ಯೋಗದಿಂದ ಮಾತ್ರ ನಿವೃತ್ತಿ ಎಂಬುದು ನೆನಪಿರಲಿ) ನಾವು ಈವರೆಗೆ ಬದುಕಿ-ಬಾಳಿದ ಜೀವನದ ’balance-sheet’ ತೆಗೆಯಲು ಸಕಾಲ. ಈ ತ:ಖ್ತೆ ಹೇಗಿರಬೇಕೆಂದರೆ, ನಾವು ಇತರರಿಂದ (ಒಟ್ಟಾರೆ ಸಮಾಜದಿಂದ) ಪಡೆದ ಸಹಾಯ-ಸವಲತ್ತುಗಳು ಹಾಗೂ ನಾವು ಇತರರಿಗೆ (ಸಮಾಜಕ್ಕೆ) ಪ್ರತಿಫಲವಾಗಿ ಕೈಗೊಂಡ ಕೈಕಂರ್ಯಗಳು ಖಂಡಿತ ತಾಳೆ ಹೊಂದದಿದ್ದರೂ - ಕನಿಷ್ಠಪಕ್ಷ ೬೦:೪೦ ರ ಅನುಪಾತದಲ್ಲಾದರೂ ಇದ್ದಲ್ಲಿ ನಮ್ಮ ಬದುಕು ಸಾರ್ಥಕವೆಂದೇ ಅಂದುಕೊಳ್ಳಬಹುದು. ರೆಕ್ಕೆ ಬಲಿತ ಮಕ್ಕಳಿಗೆ ಜವಾಬ್ದಾರಿ ಹೊರಿಸಿ, ಈಗಲಾದರೂ ಸತ್ಕಾರ್ಯಗಳಲ್ಲಿ, ಸಜ್ಜನರ ಸಂಗದಲ್ಲಿ,  ಸದ್ವಿಚಾರ ಚಿಂತನೆಯಲ್ಲಿ, ಭಗವದಾರಾಧನೆಯಲ್ಲಿ - ಒಟ್ಟಾರೆ ಮಾನಸಿಕ ಮತ್ತು ಆಧ್ಯಾತ್ಮಿಕ ಉನ್ನತಿಯೆಡೆಗಿನ ಪಥದಲ್ಲಿ ಸಾಗುವುದು ಎಲ್ಲ ಶಿಷ್ಟ ಮಾನವರ ಲಕ್ಷಣ ಮತ್ತು ಅವಶ್ಯಕತೆ ಕೂಡಾ. ಜೀವನದಲ್ಲಿ - ವಿಶೇಷವಾಗಿ ಈ ಘಟ್ಟದಲ್ಲಿ ನಮ್ಮ ಪರಿ ಹೇಗಿರಬೇಕೆಂಬುದನ್ನು ಕೆಳದಿ ಆಸ್ಥಾನ ಕವಿ ವಂಶದ ಕೆಳದಿ ಕವಿ ವೆಂಕಣ್ಣ ತನ್ನ ಕೀರ್ತನೆಯಲ್ಲಿ ಬಹು ಮಾರ್ಮಿಕವಾಗಿ ತಿಳಿಸಿದ್ದಾನೆ:
.. .. ತನ್ನ ತಾನೇ ತಿಳಿಯಬೇಕು | ತೋರುವ ಲೋಕ _
ವನ್ನು ದೃಶ್ಯವೆಂದಿರಬೇಕು
ತನ್ನಂತೆ ಸಕಲರ ನೋಡಲು ಬೇಕು
ಮಾನ್ಯರ ಕಂಡರೆ ಮನ್ನಿಸಬೇಕು
ಅನ್ಯನಾದರು ಹಿತವನೆ ಮಾಡಬೇಕು
ಪ್ರಸನ್ನ ರಾಮೇಶನ ನೆನಹಿರಬೇಕು | .. ..

    ಹುಟ್ಟಿನಷ್ಟೇ ಸತ್ಯ - ಸಾವು. ಸಾವಿನ ನಂತರದ ಪಯಣ ಅನಿಶ್ಚಿತ - ನಿಗೂಢ. ದೇಹ ಪಂಚಭೂತಗಳಲ್ಲಿ ಲೀನ. ಹುಟ್ಟಿದಾಗ ಬರಿಗೈಯಲ್ಲಿ ಬಂದು - ಅಗಾಧವಾದಷ್ಟನ್ನು ಗಳಿಸಿ - ಸಾಯುವಾಗ ಪುನ: ಬರಿಗೈಯಲ್ಲಿ ಹೋಗುವ ಈ ಪರಿ ಎಷ್ಟು ನಿತ್ಯಸತ್ಯ. ಶೂನ್ಯದಿಂದ ಬಂದು ಅಂತಿಮವಾಗಿ ಶೂನ್ಯದಲ್ಲೇ ಲೀನವಾಗುವಂತೆ! (’ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ - ನಡುವೆ ಬರೀ ಕತ್ತಲೆ ಎಂಬಂತೆ). ಮಧ್ಯೆ ಇರುವ ನಾಲ್ಕು ದಿನದಲ್ಲಿ ಬದುಕನ್ನು ನಮಗೂ-ಇತರರಿಗೂ ಸಹನೀಯವಾಗುವಂತೆ ಮತ್ತು ವಿಶೇಷವಾಗಿ ಆತ್ಮೋನ್ನತಿಯಾಗುವಂತೆ ರೂಪಿಸಿಕೊಳ್ಳುವುದೇ - ಹಾಗೂ ನಿರಂತರ ಆ ನಿಟ್ಟಿನಲ್ಲಿ ಪ್ರಜ್ಞಾಪೂರ್ವಕವಾಗಿ ಮುಂದುವರಿಯುವುದೇ ಇಂದಿನ ಎಲ್ಲರ ಅಗತ್ಯತೆ, ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡಾ!

[ದಿ.೨೦.೬.೨೦೦೮ ರ ಶಿವಮೊಗ್ಗದ  'ನಾವಿಕ' ಪತ್ರಿಕೆಯಲ್ಲಿ ಪ್ರಕಟಿತ ಲೇಖನ]

[ಬರಹ convert  ನಿಂದ ಪೋಸ್ಟ್ ಆದ ನನ್ನ ಮೊದಲ ಲೇಖನ. ಕೃತಜ್ಞತೆ: ಶ್ರೀ ಪ್ರಸನ್ನ, ಶ್ರಿ ಶ್ರೀಧರ್, ಶ್ರೀ ಕವಿ ನಾಗರಾಜ್]

Friday, November 12, 2010

ಹೀಗೇಕೆ...?? (ಮುಂದುವರೆದುದು)

* Software ಮತ್ತು hardware  ಭರಾಟೆಯಲ್ಲಿ ಬಹು ಜನರಾಗಿದ್ದಾರೆ footware!

* ಮನೆ ನಾಯಿಗೆ ನಿತ್ಯ ಸ್ನಾನ, ಸತ್ವಯುತ ಭೋಜನ; ಕಾರಿಗುಂಟು ನಿತ್ಯ ಸ್ನಾನ, ಕಾಲಕಾಲಕ್ಕೆ ನವೀಕರಣ; ಮನೆ ಯಜಮಾನನಿಗೆ ಪುರಸೊತ್ತಿಲ್ಲ ಉಣ್ಣಲು ನೆಮ್ಮದಿಯ ಭೋಜನ ಮತ್ತು ಕಾಪಾಡಲು ತನ್ನದೇ ದೇಹದ ಸ್ವಾಸ್ಥ್ಯವ;

* ಮನೆ ವಾರ್ತೆಗೆ ಸಮಯವುಂಟು, ತಲೆಹರಟೆಗೆ ಸಮಯವುಂಟು, ಪರಟೀಕೆಗೆ ಸಮಯವುಂಟು, ಮನೋರಂಜನೆಗೆ ಸಮಯವುಂಟು ಆದರೆ ಅಲ್ಪಕಾಲವಾದರೂ ಜಪ-ತಪ ಮಾಡಲು ಸಮಯವೆಲ್ಲುಂಟು?

* ಹಣ ಮತ್ತು ಚಿನ್ನಾಭರಣಗಳ ಜೊತೆಗೆ ಪ್ರೀತಿ, ವಾತ್ಸಲ್ಯ, ಪರಸ್ಪರ ಸ್ಪಂದನೆ, ಕಳಕಳಿ ಎಲ್ಲವೂ ಬ್ಯಾಂಕ್ ಲಾಕರ್ ಪಾಲು!

* ಕಷ್ಟಪಟ್ಟು ಸಪೋಟ ಹಣ್ಣು ಬೆಳೆದವಗೆ ಕೆ.ಜಿ.ಗೆ 10 ರುಪಾಯಿ; ಅದನ್ನು ಕೊಂಡು ಮಾರುವವ ಸಂಪಾದಿಸುತ್ತಾನೆ ಕೆ.ಜಿ.ಗೆ 30 ರುಪಾಯಿ! (ಬಹುತೇಕ ಎಲ್ಲ ರೈತರ ಇಂದಿನ ಪಾಡು)

* ಪ್ರಪಂಚವೇ 'ನೀನು ತಪ್ಪಿತಸ್ಥ' ಎಂದು ಸಾಕ್ಷಾಸಮೇತ ಕರೆದರೂ,  ಒಪ್ಪಿಕೊಳ್ಳದ ಏಕೈಕ ವ್ಯಕ್ತಿಯೆಂದರೆ ರಾಜಕಾರಣಿ!

* ಪರರ ಏಳಿಗೆಯ ಬಗ್ಗೆ, ಪರರ ಸಾಧನೆಯ ಬಗ್ಗೆ, ಪರರ ಉಚಿತಾನುಚಿತಗಳ ಬಗ್ಗೆ, ಪರರ ವೇಷಭೂಷಣಗಳ ಬಗ್ಗೆ, ಪರರ ಚಟುವಟಿಕೆಗಳ ಬಗ್ಗೆ ಚಿಂತೆಗೇ ನಮ್ಮ ಬಹುಪಾಲು ಸಮಯ ಮೀಸಲು! 

[ಮುಂದುವರೆಯುವುದು]


Friday, November 5, 2010

ಹೀಗೇಕೆ...??


* ಅಲಾರಾಂ ಹೊಡೆದ ನಂತರವೇ ಗಾಢ ನಿದ್ರೆ

* ಬೀರು ತುಂಬಾ ನೂರಾರು ಸೀರೆ; ಉಡುವುದು ಮಾತ್ರಾ ಸದಾ ನೈಟೀ

* ನವನವೀನ ಪಾತ್ರೆ-ಪಡಗಗಳೆಲ್ಲ ಟ್ರಂಕಿನಾ ಒಳಗೆ; ಮಸಿಹಿಡಿದ, ನುಗ್ಗು-ಜಗ್ಗಾದ ಪಾತ್ರೆಗಳು ಮಾತ್ರಾ ಅಡಿಗೆಮನೆಯೊಳಗೆ;

* ಬ್ಯಾಂಕ್ ಲಾಕರ್ ತುಂಬಾ ಚಿನ್ನದಾ ಆಭರಣಗಳು; ಜೀವನಪೂರ್ತಿ ಮೈಮೇಲೆ ಬರೀ ಥಳುಕಿನಾ ಒಡವೆಗಳು

* ಕಡಲೆಯಿದ್ದವಗೆ ಹಲ್ಲಿಲ್ಲ; ಹಲ್ಲಿದ್ದವಗೆ ಕಡಲೆಯಿಲ್ಲ - ಎರಡೂ ಇದ್ದವ ತಿನ್ನುವ ಹಾಗಿಲ್ಲ (ಮಧುಮೇಹಿಗಳಿಗೆ)

* ತಿಂಗಳಿಗೊಮ್ಮೆ ಭರಪೂರ್ತಿ ಸಂಬಳ; ಹಾಕುವುದು ಮಾತ್ರಾ ಚಿಂದಿಯಾ ಅರಿವೆ (ಈಗಿನ ಫ್ಯಾಷನ್!)

* ಹೋಟೆಲ್ ಮಾಣಿಗೆ ಟಿಪ್ಸ್ 100 ರೂಪಾಯಿ; ಭಿಕ್ಷುಕನಿಗೆ ಮಾತ್ರಾ ಒಂದೇ ರೂಪಾಯಿ!

[ಮುಂದುವರೆಯುವುದು...]

Friday, October 29, 2010

ನೀರು ಮನೆಯೊಳಗೋ ಮನೆಯೊಳು ನೀರೋ!!!


* ಬದುಕು ಕೊನೆಯಾಗುತ್ತಿದ್ದರೂ ಧೈರ್ಯದಿಂದ ಎದುರಿಸಿ ಬದುಕುವ ಛಲವೇ?


* ಪ್ರಾಣಕ್ಕೇ ಸಂಚಕಾರ ಬಂದರೂ ಲೌಕಿಕ ವಸ್ತುಗಳ ಮೇಲೆ ಇಂಗದ ಮೋಹವೇ?


* ಪ್ರಾಪಂಚಿಕ ವಸ್ತುಗಳನ್ನು ಕೂಡಿ ಹಾಕಿ ಸ್ವತಂತ್ರದೆಡೆಗೆ ಸಾಗುವ ನಿರ್ಮೋಹವೇ?


* ಎಲ್ಲಾ ಮುಳುಗಿ ಹೋದರೂ ಪುನ: ಅಲ್ಲೇ ಬಂದು ನೆಲೆಸುವೆನೆಂಬ ಅಚಲ ನಂಬಿಕೆಯೇ?


* ನೀರು ಎಷ್ಟೇ ಮೇಲೆ ಬಂದರೂ ತಲೆಯೆತ್ತಿ ಪಾರಾಗುವೆನೆಂಬ ದೃಢ ವಿಶ್ವಾಸವೇ?



ಏನೆನ್ನಲಿ? .... ದಾಸರು ಹೇಳಿದಂತೆ -
"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ...."

Wednesday, October 20, 2010

ಸತ್ಯಾನ್ವೇಷಣೆ



ಜೀವನವೇ ಒಂದು ಅನ್ವೇಷಣೆ; ಅದೂ ನಿರಂತರವಾದ, ಆದಿ-ಅಂತ್ಯವಿಲ್ಲದ ಮತ್ತು ಬಹುತೇಕ ಸಂದರ್ಭಗಳಲ್ಲಿ ಗೊತ್ತು-ಗುರಿಯಿಲ್ಲದ ಅನ್ವೇಷಣೆ. ಲೌಕಿಕ ಜೀವನ ನಿರ್ವಹಣೆಗೇ ನಮ್ಮ ಜೀವನದ ಬಹುಪಾಲು ಸಮಯ ಮತ್ತು ಶ್ರಮ ಮೀಸಲು. ಆದರೆ ಸೋಜಿಗವೆಂದರೆ ಮುನಷ್ಯನೇ ಒಂದು ವಿಚಿತ್ರ ಪ್ರಾಣಿ. ಅವನ ಇಂದ್ರಿಯಾತ್ಮಕ, ಲೌಕಿಕ ಮತ್ತು ವಿಶೇಷವಾಗಿ ಆತನ ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸಿದಷ್ಟೂ ಅವುಗಳು ಪುನ: ಪುನ: ಬೇರೊಂದು ರೂಪದಲ್ಲಿ ತಲೆಯೆತ್ತುತ್ತಲೇ ಇರುತ್ತವೆ. ಹೀಗೆ ನಾನಾ ಮೂಲಗಳಿಂದ ಉದ್ಭವವಾಗುವ ಇಂತಹ ಸನ್ನಿವೇಶಗಳು, ಅನುಭವಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉಂಟಾದ ನಷ್ಟ, ದು:ಖ ಮತ್ತು ಸಾವು-ನೋವುಗಳು ಆತನಲ್ಲಿ ಜೀವನದ ಉದ್ಧೇಶದ ಬಗ್ಗೆ, ಜೀವನಾರ್ಥದ ಬಗ್ಗೆ ಮತ್ತು ಅಲ್ಪಸ್ವಲ್ಪ ಸಂಸ್ಕಾರ ಮತ್ತು ಯೋಗ್ಯತೆ ಇರುವವರಲ್ಲಿ ಜೀವನ್ಮುಕ್ತಿಯ ಬಗ್ಗೆ ಸಾವಿರಾರು ಪ್ರಶ್ನೆಗಳನ್ನು ಹುಟ್ಟಿಹಾಕುತ್ತವೆ. ಇಂತಹ ಪ್ರಶ್ನೆಗಳ ಚಿಂತನ-ಮಂಥನವೇ ಸತ್ಯಶೋಧನೆ ಅಥವಾ ಸತ್ಯಾನ್ವೇಷಣೆ ಎನ್ನಬಹುದು. ಇಂತಹ ಪ್ರಶ್ನೆಗಳು ಅಥವಾ ದ್ವಂದ್ವಗಳು ಮನಸ್ಸಿನಲ್ಲಿ ಒಂದು ಆಂದೋಳನವನ್ನೇ ಸೃಷ್ಟಿಸಿಬಿಡುತ್ತವೆ. ಆ ಆಂದೋಳನ ಅಥವಾ ಚಿಂತನಕ್ಕೆ ಒಂದು ಅರ್ಥ ಸಿಗಬೇಕಾದರೆ ಅದಕ್ಕೆ ತಕ್ಕುದಾದ ಶ್ರಮ (ಶಾರೀರಿಕ ಮತ್ತು ಬೌದ್ಧಿಕ), ಅರ್ಥಾತ್ ಸಾಧನೆಯನ್ನು ನಾವೇ ಮಾಡಬೇಕು. ವೇದ, ಉಪನಿಷತ್ತು, ಶಾಸ್ತ್ರ-ಪುರಾಣಗಳು, ರಾಮಾಯಣ, ಮಹಾಭಾರತ ಮುಂತಾದ ದಿವ್ಯ ಭಂಡಾರವಿರುವ ಭಾರತೀಯ ಜ್ಞಾನ ಸಂಪತ್ತು ಅಪಾರ ಮತ್ತು ಅಪರಿಮಿತ. ಅದೇ ರೀತಿ, ಸಾಧಕರೂ ಕೂಡಾ ಅಸಂಖ್ಯ. ಆದರೆ ಇವೆಲ್ಲಾ ನಮ್ಮ ಪ್ರಯತ್ನದಲ್ಲಿ ಕೇವಲ ಕೈಮರಗಳಾಗಬಹುದಷ್ಟೇ. ಅನೇಕ ಸಾಧಕ ವ್ಯಕ್ತಿಗಳನ್ನು ನೋಡಿ. ಅವರ ಸಾಮೀಪ್ಯವೇ ಒಂದು ಚೈತನ್ಯದೊಡನಿದ್ದಂತೆ. ಅಂತಹ ಸತ್ಯ ಸಾಕ್ಷಾತ್ಕಾರ ಮಾಡಿಕೊಂಡವರ ವಿಚಾರಧಾರೆ ಕೇಳುವವರಿಗೆ ಮತ್ತು ಅವರ ಸಂಪರ್ಕಕ್ಕೆ ಬಂದವರಿಗೆ ಅಂತಹ ಒಂದು ದಿವ್ಯಾನುಭವ ಸ್ವಯಂವೇದ್ಯ. ಆದರೂ, ನಿಜವಾದ ಸತ್ಯ ಶೋಧನೆಯನ್ನು ನಾವೇ ಮಾಡಬೇಕು; ನಾವೇ ಸಂಪಾದಿಸಬೇಕು ಮತ್ತು ನಾವೇ ಅರ್ಥ ಮಾಡಿಕೊಳ್ಳಬೇಕು. ಆಗ ಅನೇಕ ಮಹಾತ್ಮರೊಡನೆ ನಾವು ಸಂಪರ್ಕಕ್ಕೆ ಬಂದಾಗ ಆಗುವ ಚೈತನ್ಯದ ಅನುಭವ ನಮ್ಮಲ್ಲೂ ಜಾಗೃತವಾಗಬಲ್ಲದು.

ಪ್ರಮುಖವಾಗಿ ಹುಟ್ಟು, ಬದುಕು ಮತ್ತು ಸಾವು - ಇವೇ ನಿಜವಾದ ಸತ್ಯಗಳೆಂದರೆ ತಪ್ಪಾಗಲಾರದು. ಈ ಮೂರೂ ಅವಸ್ಥೆಗಳ ಸಂಪೂರ್ಣ ಹಿನ್ನೆಲೆ, ಅವಕ್ಕೆ ಸಂಬಂಧಿಸಿದ ಲಭ್ಯವಿರುವ ನಾನಾ ವಿಚಾರಗಳ ಸಂಗ್ರಹಣೆ, ಮನನ ಮತ್ತು ಆಚರಣೆಯನ್ನು ಅಳವಡಿಸಿಕೊಳ್ಳಲು ಒಂದು ಜೀವಿತಾವಧಿಯೇ ಸಾಕಾಗಲಾರದು. ಆದುದರಿಂದ, ನಿಜ ಹೇಳಬೇಕೆಂದರೆ ರಹಸ್ಯಗಳನ್ನು ಭೇದಿಸುವುದೇ ಸತ್ಯಾನ್ಷೇಷಣೆ. ಆದರೆ ಯಾವುದು ಸತ್ಯವೆಂಬುದೇ ಬಹು ಜನರಿಗೆ ಇಂದಿಗೂ ಎಟುಕದ ವಿಷಯವಾಗಿದೆ. ಸತ್ಯದ ಪರಿಕಲ್ಪನೆ ವ್ಯಕ್ತಿಗತ. ಹಾಗಾಗಿಯೇ ನಾವಿಂದು ಇಂತಹ ವಿಚಾರಗಳ ಬಗ್ಗೆ ಲೆಕ್ಕವಿಲ್ಲದಷ್ಟು ಸಿದ್ಧಾಂತಗಳನ್ನು, ವಾದ-ವಿವಾದಗಳನ್ನು ಮತ್ತು ಪ್ರತಿಪಾದನೆಗಳನ್ನೂ ನೋಡಬಹುದು.

"ಅರಿವೇ ಗುರುವು" ಎಂಬ ಮಾತೊಂದಿದೆ. ಅಂತೆಯೇ ಜೀವನದುದ್ದಕ್ಕೂ ನಮ್ಮಲ್ಲಿ ಅನೇಕ ಪ್ರಶ್ನೆಗಳು, ಸಂಶಯಗಳು ಮತ್ತು ದ್ವಂದ್ವಗಳು ನಿರಂತರವಾಗಿ ಏಳುತ್ತಿವೆಯೆಂದರೆ ಅದೇ ಅರಿವಿನ ಮೊದಲ ಚಿಹ್ನೆ/ಹೆಜ್ಜೆ. ಪ್ರಶ್ನೆಗಳೆದ್ದಾಗ ಉತ್ತರ ಎಲ್ಲಾದರೂ ಸಿಕ್ಕೀತು. ಆದರೆ ಪ್ರಶ್ನೆಗಳೇ ಏಳದಿದ್ದರೆ ಏನೂ ಮಾಡಲಾಗದು. ಆಗ ಪ್ರಾಣಿಗಳಿಗೂ ನಮಗೂ ಯಾವುದೇ ವ್ಯತ್ಯಾಸವಿರದು. ವಿಷಯ/ವ್ಯಕ್ತಿ/ ವಸ್ತುಗಳ ಅರಿವು ಮತ್ತು ಆ ತಿಳುವಳಿಕೆ ಸರಿಯೇ/ತಪ್ಪೇ ಎಂಬ ನಿರಂತರ ವಿಮರ್ಶೆ/ತರ್ಕಗಳು ನಮ್ಮನ್ನು ಸತ್ಯದೆಡೆಗೆ ಸಾಗಿಸುವ ಪ್ರಮುಖ ಸಾಧನ. ಆದುದರಿಂದ ಸತ್ಯ ಶೋಧನೆಗೆ ತಕ್ಕ ಅರ್ಹತೆ ಮತ್ತು ಯೋಗ್ಯತೆ ಕೂಡಾ ಅತ್ಯಾವಶ್ಯಕ. ಸತ್ಯದ ಪರಿಮಿತಿ ಅಗಾಧವಾದದ್ದು. ಅಂತೆಯೇ ನಮ್ಮ ಸಾಧನೆಗೆ ತಕ್ಕಷ್ಟು ಮಾತ್ರಾ ಸತ್ಯದ ಅರಿವನ್ನು ಪಡೆಯಲು ಸಾಧ್ಯ. ಸಾಗರದಿಂದ ಒಂದು ಬಿಂದಿಗೆ ನೀರು ತಂದಂತೆ! ಅದು ನಮ್ಮ ಸಾಧನೆಯ ಮಟ್ಟಕ್ಕೆ ನಮಗೆ ದೊರೆತ ಸತ್ಯ. ಆದರೆ ಅದೇ ಸಂಪೂರ್ಣ ಸತ್ಯವಲ್ಲ!

ಕಿಟಕಿ ಪರದೆ ಸರಿಸಿದರೇನೆಯೇ ಬೆಳಕು ಬರುವುದು. ಎಳ್ಳನ್ನು ಗಾಣಕ್ಕೆ ಹಾಕಿದಾಗಲೇ ಎಣ್ಣೆ ಬರುವುದು. ನದಿ ತೀರದ ಮರಳನ್ನು ಬಗೆದರೇ ನೀರು ಸಿಗುವುದು. ಅದೇ ರೀತಿ ಸತ್ಯಶೋಧನೆಯಲ್ಲಿ ಇಂತಹ ನಾನಾ ಮಾಯೆಗಳನ್ನು ನಾವು ದಾಟಬೇಕು. ಕ್ರಿಯಾಶೀಲರಲ್ಲಿ ಸಂಸ್ಕರಣೆ ಮತ್ತು ಪರಿವರ್ತನೆ ಒಂದು ನಿರಂತರ ಪ್ರಕ್ರಿಯೆ. ಹಾಗಾಗಿ ಮಾಯೆಗಳ ಛಾಯೆಯನ್ನು ದಾಟುವುದಕ್ಕೆ ಬೇಕು ತಕ್ಕ ಮಾನಸಿಕ ಪರಿಪಕ್ವತೆ, ಸಿದ್ಧತೆ ಮತ್ತು ದೃಢ ಸಂಕಲ್ಪ. ಮಾನಸಿಕ ಸಂತುಲತೆ ಇಲ್ಲದಾದಾಗ ಗ್ರಹಿಕೆಗಿಂತ ಹೆಚ್ಚಾಗಿ ತಪ್ಪು ಗ್ರಹಿಕೆಗಳೇ ಆದೀತು. ಹಾಗಾಗಿ ಯಾವುದೇ ವಿಚಾರದ ಬಗ್ಗೆ ಉದ್ವೇಗರಹಿತವಾದ ಮತ್ತು ಪೂರ್ವಾಗ್ರಹ ರಹಿತವಾದ ದೃಷ್ಟಿಕೋನ ಅಗತ್ಯ. ಹಿಂದೆ ಹೇಳಿದಂತೆ ಸತ್ಯದ ಕಲ್ಪನೆ ವ್ಯಕ್ತಿಗತ. ನಾಲ್ಕಾರು ಕುರುಡರು ಆನೆಯನ್ನು ಮುಟ್ಟಿನೋಡಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿದಂತೆ! ಒಂದೇ ವಿಚಾರದ ಬಗ್ಗೆ ನಾವು ನಾನಾ ದೃಷ್ಟಿಕೋನಗಳಿರುವುದನ್ನು ಗಮನಿಸದ್ಧೇವೆ. ಅವೆಲ್ಲವೂ ಅದರದೇ ಆದ ಹಿನ್ನೆಲೆಯಲ್ಲಿ ಸತ್ಯವೆಂದೂ ತೋರುತ್ತವೆ. ಆದುದರಿಂದ ಅವೆಲ್ಲವನ್ನೂ ತಪ್ಪೆಂದು ಭಾವಿಸಲಾಗುವುದಿಲ್ಲ; ಅನೇಕ ವೇಳೆ, ಸತ್ಯವೆಂದೂ ಒಪ್ಪಲಾಗುವುದಿಲ್ಲ! ಎಲ್ಲಾ ಮಜಲುಗಳಿಂದಲೂ ವಿಷಯವನ್ನು ಪರಾಂಬರಿಸಿ, ಪರಾಮರ್ಶಿಸಿ ಮತ್ತು ಅರ್ಥೈಸಿಕೊಳ್ಳುವ ಪ್ರಕ್ರಿಯೆ ಮಾತ್ರಾ ನಮ್ಮ ಸಂಸ್ಕಾರಾನುಸಾರ, ನಮ್ಮ ಜ್ಞಾನಾನುಸಾರ ಮತ್ತು ನಮ್ಮ ಶಕ್ತ್ಯಾನುಸಾರ ನಾವೇ ಮಾಡಬೇಕು. ಅಂತೆಯೇ ನಮ್ಮಲ್ಲಿರುವ ಸಾಧನ ಸಂಪತ್ತುಗಳ ಸದ್ಭಳಕೆಯಿಂದ ನಾವೇನು ಪರಿಶ್ರಮ ಪಟ್ಟು ಒಂದನ್ನು ನಮ್ಮ ಅಂತರಾತ್ಮ ಸತ್ಯವೆಂದು ಒಪ್ಪುತ್ತದೆಯೋ ಅದೇ ನಮ್ಮ ಪಾಲಿಗೆ ಅಂತಿಮ ಸತ್ಯ.

ದೇಹವೊಂದು ನಾವೆ. ನಾವೇ ಅದರ ನಾವಿಕರು. ಸಾಗರ ದಾಟಲು ದೇಹವೂ ಚೆನ್ನಾಗಿರಬೇಕು, ನಾವೆಯೂ (ಸಾಧನ) ಸುಭದ್ರವಾಗಿರಬೇಕು ಮತ್ತು ನಾವಿಕನು ಹಾಕುವ ಹುಟ್ಟುಗಳೂ ಸರಿಯಾಗಿರಬೇಕು. ಆಗಲೇ ಈ ಭವಸಾಗರವನ್ನು ದಾಟಿ ಗುರಿ ಮುಟ್ಟಲು ಸಾಧ್ಯ. ಆದರಿಲ್ಲಿ ದೇಹವೂ ನಶ್ವರ-ನಾವೆಯೂ ನಶ್ವರ. ಗುರಿ ತಲುಪಿದ್ದೊಂದೇ ಸತ್ಯ. ಸತ್ಯ ಸಾಕ್ಷಾತ್ಕಾರಕ್ಕೆ ಈ ಮುನ್ನ ಹೇಳಿದಂತೆ ತಕ್ಕ ಸಿದ್ಧತೆ ಬೇಕು. ಅಂದರೆ ಈ ಲೌಕಿಕ ವಸ್ತುಗಳೆಲ್ಲವೂ ಅಶಾಶ್ವತ, ಲೌಕಿತ ವಸ್ತುಗಳಲ್ಲಿ ಮೇಲ್ನೋಟಕ್ಕೆ ಗೋಚರವಾಗುವಂತಹ ಮತ್ತು ಆಕರ್ಷಿಸುವಂತಹ ಸುಖ-ಸೌಲಭ್ಯಗಳೆಲ್ಲವೂ ಮಿಥ್ಯ ಮತ್ತು ಅನಿಶ್ಚಿತ, ಲೌಕಿಕಾರ್ಷಣೆ ಕ್ಷಣಿಕ, ಲೌಕಿಕಾಕರ್ಷಣೆಗಳ ಬಗ್ಗೆ ವಿರಕ್ತಿ ಭಾವ, ಪೂರ್ವಾಗ್ರಹ ರಹಿತವಾದ ಮನಸ್ಥಿತಿ, ಪರಮಾತ್ಮ ವಸ್ತು ನಮ್ಮೊಳಗೂ ಇದೆ, ಎಲ್ಲೆಡೆಯೂ ಇದೆ ಮತ್ತು ಎಲ್ಲಕ್ಕೂ ಅತೀತವಾಗಿದೆ ಎಂಬ ನಂಬಿಕೆ ಮುಂತಾದವು ಸತ್ಯಶೋಧನೆಗೆ ಬೇಕಾದ ಪೂರ್ವಸಿದ್ಧತೆಗಳು. ನಮ್ಮ ಮನಸ್ಸಿನ ಸತ್ಯದ ಪರಿಕಲ್ಪನೆಯಂತೆ ನಮ್ಮ ಶಕ್ತ್ಯಾನುಸಾರ ಆ ಸತ್ಯಶೋಧನೆಯೆಡೆಗೆ ಸಾಗಲು ನಮಗೆ ಸಾಕಷ್ಟು ಸಾಧನ-ಸಂಪತ್ತುಗಳಿವೆ. ಮಾರ್ಗದರ್ಶಕರೂ ಇದ್ದಾರೆ. ಆದರೆ ಅವೆಲ್ಲದರ ಆಯ್ಕೆ ಮತ್ತು ವಿವೇಕಯುತ ಸದ್ಬಳಕೆ ಮಾತ್ರಾ ನಮ್ಮದೇ. ನಾವು ಅಗೋಚರದಿಂದ ಬಂದು ಅಗೋಚರ ಸ್ಥಾನಕ್ಕೇ ಹೋಗುವುದು ನಿತ್ಯಸತ್ಯ. ಅದರ ಹಿಂದಿರುವ ಪರತತ್ತ್ವ ಶಕ್ತಿಯೇ ಆ ಭಗವಂತ. ಪ್ರತಿಯೊಂದು ಚರಾಚರ ವಸ್ತು ಕೂಡ ಆ ಅಖಂಡ ಚೈತನ್ಯದಿಂದ ಕೂಡಿದೆ. ಜೀವ ಅನುಭವಿಸುವ ಪ್ರತಿಯೊಂದು ಅನುಭವಗಳೂ, ನೋಡುವ ಪ್ರತಿಯೊಂದು ವಸ್ತುವೂ/ವ್ಯಕ್ತಿಯೂ ಆ ಭಗವಂತನ ಚೈತನ್ಯದಿಂದ ಆವರಿಸಲ್ಪಟ್ಟಿದೆ ಎಂಬ ಭಾವ ಬಂಧಮುಕ್ತಿಗೆ ರಾಜಮಾರ್ಗ. ಪ್ರತಿಯೊಂದರಲ್ಲೂ ಆ ಮಹಾ ಚೈತನ್ಯ ನಮಗೆ ಸ್ಪಷ್ಟವಾಗ ತೊಡಗಿದಂತೆ ನಮ್ಮ ಅಜ್ಞಾನದ ಮತ್ತು ದ್ವಂದ್ವಗಳ ಬೀಡಾದ ಈ ಮನಸ್ಸು ತಿಳಿಯಾಗಲಾರಂಭಿಸುತ್ತದೆ. ವ್ಯಕ್ತಿ/ವಸ್ತು/ವಿಷಯಗಳ ಬಗ್ಗೆ ನಮ್ಮ ಪೂರ್ವಾಗ್ರಹಗಳೂ ಕೂಡ ಮರೆಯಾಗುತ್ತವೆ. ಅಂತಹ ತಿಳಿಯಾದ ಮನವೆಂಬ ಕೊಳದಲ್ಲಿ ನಿಶ್ಚಿತವಾಗಿ ಜ್ಞಾನವೆಂಬ ಕಮಲ ಅರಳುತ್ತದೆ. ಆ ಜ್ಞಾನವೇ ನಮ್ಮನ್ನು ಸತ್ಯದೆಡೆಗೆ ಸುಗಮವಾಗಿ ಕೊಂಡೊಯ್ಯುತ್ತದೆ.

ಹುಟ್ಟಿದ ಮೇಲೆ ಸಾಯಲೇ ಬೇಕು. ಜೀವನದಲ್ಲಿ ಏನು ಸಾದಿಸದಿದ್ದರೂ ಅಥವಾ ಸಾಧಿಸಿದರೂ ಸಾವು ಶತಸ್ಸಿದ್ಧ. ಬರೀ ಅಜ್ಙಾನದಲ್ಲಿ, ಅರೆ ತಿಳುವಳಿಕೆಯಲ್ಲಿ ಮತ್ತು ಪ್ರಾಣಿ ರೀತಿಯಲ್ಲಿ ಬದುಕಿ ಸಾಯುವ ಬದಲು, ಜ್ಞಾನದ, ತಿಳುವಳಿಕೆಯ ಮತ್ತು ಅಂತಿಮವಾಗಿ ಆ ಪರತತ್ತ್ವದ ನಿಜಸತ್ಯವನ್ನು ಅರಿಯಲು ನಿರಂತರ ಹೋರಾಡಿ ಸಾಯುವುದೇ ಒಂದು ರೀತಿಯಲ್ಲಿ ನಿಜವಾದ ವೀರ ಮರಣ. ಆ ಒಂದು ಹೋರಾಟದಲ್ಲಿ ನಾವು ಸಾಕಷ್ಟು ಸತ್ಯದ ಸಮೀಪವೇ ಬಂದಿರುತ್ತೇವೆ. ಕೆಲವು ಪುಣ್ಯಾತ್ಮರು ಅದನ್ನು ಸಾಕ್ಷಾತ್ಕರಿಸಿಕೊಂಡೇ ಬಿಡುತ್ತಾರೆ. ಆದರೆ ಅಂತಿಮವಾಗಿ ಅಂತಹ ಒಂದು ಪ್ರಯತ್ನವೇ ಒಂದು ಮಹತ್ಸಾಧನೆ ಮತ್ತು ಅವರ್ಣನೀಯ ಆನಂದದ ದಿವ್ಯಾನುಭವ. ಹಿಮಾಲಯದ ತುಟ್ಟ ತುದಿ ತಲುಪಲಾಗದಿದ್ದರೂ ಅದನ್ನು ತಲುಪಲು ಪ್ರಾಮಾಣಿಕ ಮತ್ತು ಯಥಾಶಕ್ತಿ ಪ್ರಯತ್ನಶೀಲನಾಗಿ ತೃಪ್ತಿ ಹೊಂದುವವನೇ ನಿಜವಾದ ಸತ್ಯಶೋಧಕ.


ಫೈನಲ್ ಕಿಕ್:

ಸತ್ಯ ಶೋದನೆಗೆ ಸಾಧನಗಳು ಹಲವಾರು. ಒಂದೇ ಊರಿಗೆ ನಾನಾ ದಾರಿಗಳಿದ್ದಂತೆ. ಅತ್ಯಂತ ಸುಗಮವಾದ, ಮನೋಹರವಾದ, ಸಮೀಪವಾದ ಮತ್ತು ಆಹ್ಲಾದಕರವಾದ ದಾರಿಯ ಆಯ್ಕೆ ಮಾತ್ರಾ ನಮ್ಮದೇ. ಆಧ್ಯಾತ್ಮಿಕ ಸತ್ಯಗಳು ಸರ್ವಕಾಲಿಕವಾಗಿ ಮಾನವನನ್ನು ಆಕರ್ಷಿಸುತ್ತಲೇ ಇವೆ. ಭಗವಂತಹ ಕೃಪೆಯೊಂದಿಗೆ ನಾವು ಆ ಸತ್ಯದೆಡೆಗೆ ಸಾಗಲು ನಮ್ಮ ಮೊದಲ ಹೆಜ್ಜೆ ಇಡೋಣ; ನಿರಂತರವಾಗಿ ನಡೆಯೋಣ ಮತ್ತು ನಿಶ್ಚಿತವಾಗಿ ಲಭ್ಯಾನುಸಾರ ಮತ್ತು ಯಥಾಶಕ್ತಿ ಗುರಿ ತಲುಪೋಣ.

"ಸತ್ಯಮೇವ ಜಯತೇ"





Tuesday, October 12, 2010

ಗುರುವನ್ನು ಸ್ಮರಿಸುತ್ತಾ











ಮುಖದಲ್ಲಿ ಸದಾ ಸಚ್ಚಿದಾನಂದ ಭಾವ

ನಡೆ ನುಡಿಯಲ್ಲಿಲ್ಲ ಯಾವ ಅನುಚಿತ ಹಾವ-ಭಾವ
ವದನಾರವಿಂದ ಹರಿಸಿದೆ ದಿವ್ಯ ತೇಜಸ್ಸಿನಾ ಪ್ರಭೆ
ಅದುವೇ ಸದ್ಗುರುವಿನ ಶ್ರೀ ರಕ್ಷೆಯೆಮಗೆ

ಬೇಡ ಅರ್ಥ ಮದ ಮೋಹಗಳಾ ದಾಹ
ಬೇಡ ಪ್ರೀತಿ ಪಾತ್ರರಲಿ ಅತಿಯಾದಾ ಮೋಹ
ಬೇಡ ಕೀರ್ತಿ ಸನ್ಮಾನ ಪುರಸ್ಕಾರಗಳಾ ಪರಿಗ್ರಹ
ಸದ್ಗುರುವೇ ಕರುಣಿಸು ಎಮಗೆ ಎಲ್ಲದರಲಿ ನಿರ್ಮೋಹ

ನಾಮಸ್ಮರಣೆಗೆ ಎಣೆಯುಂಟೇ ಅನ್ಯಸ್ಮರಣೆ
ನಿತ್ಯವೂ ನಡೆಯಲಿ ಅದರ ಪುರಶ್ಚರಣೆ
ನಾಮಸ್ಮರಣೆಗೆ ತಿಳಿಯಾಗುವುದು ಮನ
ತಿಳಿಯಾದ ಕೊಳದಲ್ಲರಳುವುದು ಅರಿವಿನಾ ಕಮಲ

ಕಣ್ಣಿದ್ದೂ ಕುರುಡನಯ್ಯಾ ನಾನು
ಕಿವಿಯಿದ್ದೂ ಕಿವುಡನಯ್ಯಾ ನಾನು
ಬಾಯಿದ್ದೂ ಮೂಕನಯ್ಯಾ ನಾನು
ದಯೆತೋರಿ ದಾರಿ ತೋರಿಸೋ ಸದ್ಗುರುವೇ ನೀನು

ಅರಿಯದೇ ನುಡಿಯಬೇಡ
ಅರಿಯದೇ ಪರರ ಟೀಕಿಸಬೇಡ
ಅರಿಯದಾ ದಾರಿಯಲಿ ನೀ ನಡೆಯಬೇಡ
ಅರಿವೇ ಗುರುವು ಸಂಶಯ ಬೇಡ

ಕಾವಿ ಬಟ್ಟೆಯಿಲ್ಲ, ಮಡಿಮೈಲಿಗೆಯಿಲ್ಲ,
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿಭಾವವೇ ಈ ಮಹಾನುಭಾವರಾ ಗುರಿ
ಅದುವೇ ನಮ್ಮ ಬೆಲಗೂರಿನ ಸದ್ಗುರುಗಳ ನಿತ್ಯದಾ ಪರಿ

Wednesday, September 15, 2010

ಬೆಲಗೂರಿನಲ್ಲಿ ನಡೆದ ಮಹಾಲಕ್ಷ್ಮೀ ಯಾಗದ ಕೆಲವು ಚಿತ್ರಗಳು


ಇತ್ತೀಚೆಗಷ್ಟೇ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 8 ದಿನಗಳ ಕಾಲ ಅನೇಕ ಹೋಮ-ಯಾಗಗಳ ನಡುವೆ ಪ್ರಮುಖವಾಗಿ ಶ್ರೀ ಮಹಾಲಕ್ಷ್ಮೀ ಯಾಗ ಬಹು ವಿಜೃಂಭಣೆಯಿಂದ, ವಿಧಿ ವತ್ತಾಗಿ ನಡೆಯಿತು. ಆಗ ತೆಗೆದ ಕೆಲವು ಚಿತ್ರಗಳನ್ನು ಆಸಕ್ತರಿಗೆ ಇಲ್ಲಿ ಕೊಡಲಾಗಿದೆ. ಪ್ರಾರಂಭದ ದಿನ ಉತ್ಸವ ಮೂರ್ತಿಯ ಮೆರವಣಿಗೆಯ ಜೊತೆಗೆ "ವೇದೋತ್ಸವ" ವನ್ನೂ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಚತುರ್ವೇದ ಸಂಹಿತಾ ಯಾಗಗಳನ್ನೂ ನಡೆಸಲಾಯಿತು. ವೇದಕ್ಕೆ ಸಂಬಂಧಪಟ್ಟ ಮತ್ತು ಶಾಸ್ತ್ರ ಪುರಾಣಗಳಿಗೆ ಸಂಬಂಧಪಟ್ಟ ಪವಿತ್ರ ಗ್ರಂಥಗಳನ್ನು ಸಾಲಂಕೃತ ರಥದ ಮೇಲೆ ಇರಿಸಿ ಸುಮಾರು 300ಕ್ಕೂ ಹೆಚ್ಚು ಋತ್ವಿಜರ ವೇದಘೋಷದೊಂದಿಗೆ ಸಾವಿರಾರು ಮಂದಿ ಭಕ್ತರೊಂದಿಗೆ ಊರಿನ ಪ್ರಮುಖ ಬೀದಿಗಳನ್ನು ಸಾಗಿದ್ದು ಬಹುಶ: ಇದೇ ಪ್ರಥಮವಿರಬಹುದು. 8 ದಿನಗಳ ಈ ಕಾಲಾವಧಿಯಲ್ಲಿ ಸುಮಾರು 3 ಲಕ್ಷ್ಕ್ಕೂ ಅಧಿಕ ಮಂದಿ ಭಕ್ತರು ಇಲ್ಲಿಗೆ ಬಂದಿದ್ದು, ಸರ್ವರಿಗೂ ಸದಾಕಾಲ ಪಾನೀಯ, ಉಪಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಸ್ವಾಮೀಜಿಯವರು 2-3 ದಿನ ಕ್ಷೇತ್ರಕ್ಕೆ ಬಂದ ಎಲ್ಲ ಸುಮಂಗಲಿಯರಿಗೆ (ಯಾವುದೇ ಭೇದ-ಭಾವವಿಲ್ಲದೆ) ಸೀರೆಗಳನ್ನು ಮತ್ತು ಮಂಗಳದ್ರವ್ಯಗಳನ್ನು ಆಶೀರ್ವಾದಪೂರ್ವಕವಾಗಿ ನೀಡಿದಾಗ ಅಲ್ಲಿ ಒಂದು ಜಾತ್ರೆಯೇ ನೆರೆದಂತಿತ್ತು. ಕ್ಷೇತ್ರಕ್ಕೆ ಹೆಬ್ಬೂರಿನ ಶ್ರೀ ದತ್ತಾವಧೂತರು ಭೇಟಿ ನೀಡಿದ್ದು ಮತ್ತು ಅವರಿಗೆ ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿಯವರು ಪಾದಪೂಜೆ ಮಾಡಿದ್ದು ಎಲ್ಲರಿಗೂ ಅವಿಸ್ಮರಣೀಯ ಅನುಭವವಾಯಿತು.

ಇಲ್ಲಿ ಭಕ್ತಾದಿಗಳು ನೀಡುವ ದಾನಧರ್ಮಗಳು, ನಡೆವ ದಾರ್ಮಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ನೋಡಿದಾಗ, ಅನೇಕ ವಿಚಾರಗಳ ಬಗ್ಗೆ ನಮ್ಮನ್ನೇ ನಾವು ಬಲು ದೊಡ್ಡವರೆಂದು ಭಾವಿಸಿದ ನಮಗೆ, ನಮ್ಮ ಕುಬ್ಜತನದ ಅರಿವು ಉಂಟಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಬಹುತೇಕ ಎಲ್ಲ ದಾನಿಗಳೂ ಅನಾಮಧೇಯರು. ಎಷ್ಟು ಅನುಕರಣೀಯ ನಡತೆ ಅಲ್ಲವೇ? ಇಲ್ಲಿ ನಡೆವ ಬೃಹತ್ ಕಾರ್ಯಗಳೂ ಕೂಡ ಎಷ್ಟು ಸುಲಭವಾಗಿ ನಡೆಯುತ್ತವೆ ಎಂದರೆ ಅದು ಒಂದು ಅಲೌಕಿಕ ಶಕ್ತಿಯ ಪವಾಡವೇ ಸರಿ. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯ ಮತ್ತು ಶ್ರೀ ಗುರೂಜಿಗಳ ಕೃಪೆ ಎಲ್ಲರ ಮೇಲಿರಲಿ ಎಂಬ ಆಶಯದೊಂದಿಗೆ.























Tuesday, September 14, 2010

ಗುರುದರ್ಶನ




ಹೆಬ್ಬೂರಿನ ಶ್ರೀ ಶ್ರೀ ದತ್ತಾವಧೂತರು




ಬೆಲಗೂರಿನ ಶ್ರೀ ಶ್ರೀ ಬಿಂದು ಮಾಧವ ಶರ್ಮಸ್ವಾಮೀಜಿಗಳು



ಅರಸಿದೆ ನೆಮ್ಮದಿಯ ಬಂಧು-ಬಾಂಧವರಲ್ಲಿ
ಅರಸಿದೆ ಸಾಂತ್ವನವ ಮಿತ್ರ ಬಾಂಧವರಲ್ಲಿ
ಅರಸಿ ಸುಸ್ತಾದೆ ಸಿಗಲಿಲ್ಲ ನೆಮ್ಮದಿ
ನೆಮ್ಮದಿಗೆ ಶ್ರೀ ಗುರುಪಾದವೇ ಗತಿ!



** **

ವ್ಯಕ್ತ ಒಂದಾದರೆ ಅವ್ಯಕ್ತ ನೂರಾರು
ನುದಿ ಒಂದಾದರೆ ಅರ್ಥ ಹಲವಾರು
ಅರ್ಥವಾದದ್ದು ಒಂದಾದರೆ ಉಳಿದದ್ದು ಸಾವಿರಾರು
ಸರಿದಾರಿ ತೋರಿಸಿ ಮುನ್ನಡೆಸೋ ಓ ಸದ್ಗುರು!


** **

ಕಾವಿ ಬಟ್ಟೆಯಿಲ್ಲ, ಮಡಿ ಮೈಲಿಗೆಯಿಲ್ಲ
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿ ಭಾವವೇ ಮಹಾನುಭಾವರ ಗುರಿ
ಅದುವೇ ನಮ್ಮ ಸದ್ಗುರುಗಳ ನಿತ್ಯದಾ ಪರಿ!

Thursday, August 26, 2010

ನಿವೃತ್ತಿ-ಪ್ರವೃತ್ತಿ


ವೃತ್ತಿಯ ನಂತರ ನಿವೃತ್ತಿ. ನಿವೃತ್ತಿಯ ನಂತರ ಪ್ರವೃತ್ತಿ! ಅಂತಹ ಪ್ರವೃತ್ತಿಯಿದ್ದಾಗಲೇ ನಿವೃತ್ತಿ ಆರಾಮದಾಯಕ ಮತ್ತು ಸಂತೋಷದಾಯಕವಾದೀತು. ಹಾಗೆಂದು ನಿವೃತ್ತಿಯಾದ ನಂತರವೇ ಪ್ರವೃತ್ತಿಗೆ ಸ್ಥಾನವೆಂದರ್ಥವಲ್ಲ. ಸಾಧಾರಣವಾಗಿ ಸಾಕಷ್ಟು ಮಂದಿ ತಮ್ಮ ವೃತ್ತಿಯೊಡನೆಯೇ ಪ್ರವೃತ್ತಿಯನ್ನೂ ರೂಢಿಸಿಕೊಂಡಿರುತ್ತಾರೆ. ಅವರಿಗಂತೂ ನಿವೃತ್ತಿಯ ಕಾವು ತಾಕುವುದೇ ಇಲ್ಲ. ಆದರೆ ಬಹುಮಂದಿ ದುಡಿಮೆಯ ಜಂಜಾಟದಲ್ಲಿ ಹವ್ಯಾಸಗಳನ್ನು ಬೆಳೆಸಿಕೊಂಡಿರುವುದಿಲ್ಲ. ಹಾಗೆಂದೇ ಸೇವೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದಾಗ "ಕಾಲ ಕಳೆಯುವ" ದೊಡ್ಡ ಪ್ರಶ್ನೆ ಎದುರಾಗುತ್ತದೆ. ಅಧಿಕಾರದ ನಷ್ಟ, ಆದಾಯದಲ್ಲಿ ಕುಂಠಿತ ಎರಡೂ ಸಾಕಷ್ಟು ಮನ:ಕ್ಲೇಷಕ್ಕೂ ಎಡೆ ಮಾಡುತ್ತದೆ.

ಹಾಗಾಗಿ ವಿಶ್ರಾಂತ ಜೀವನಕ್ಕಾಗಿ ಮೊದಲೇ ಸಾಕಷ್ಟು ತಯಾರಿ - ಮಾನಸಿಕ ಮತ್ತು ಆರ್ಥಿಕ - ಅತ್ಯವಶ್ಯ. ಇಲ್ಲದಿದ್ದಲ್ಲಿ 'ಕುರುಡು ನಾಯಿ ಸಂತೆಗೆ ಬಂದಂತೆ' ಎಲ್ಲೆಲ್ಲೋ ಗೊತ್ತು ಗುರಿಯಿಲ್ಲದೇ ಬಾಳಬೇಕಾದ ಸ್ಥಿತಿ ಬಂದೀತು. ಜೀವನಪೂರ್ತಿ ನಡೆಸಿದ ವೃತ್ತಿಯ ನೆರಳಿನಲ್ಲಿಯೇ ಬರುವ ಅನೇಕ ಹವ್ಯಾಸಗಳನ್ನು ನಂತರ ಬಳಸಿಕೊಳ್ಳಬಹುದು. ಶಾಲಾ ಮಾಸ್ತರರಾಗಿದ್ದರೆ ನಂತರ ಕೆಲ ಮಕ್ಕಳಿಗೆ ಪಾಠ (ಉಚಿತ!) ಹೇಳಿಕೊಡಬಹುದು;ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೆ, ನಂತರ ಊರಿನ ದೇವಸ್ಥಾನ, ಗುಡಿ-ಗೋಪುರ ನಿರ್ಮಾಣ ಮುಂತಾದ ಕಾರ್ಯದಲ್ಲಿ ತಮ್ಮ ವೃತ್ತಿ ಕೌಶಲ್ಯವನ್ನು ಬಳಸಿಕೊಳ್ಳಬಹುದು; ಹೆಚ್ಚಿನ ಪಾಲು ಬರವಣಿಗೆಯಲ್ಲಿ ತೊಡಗಿದ್ದವರು ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು. ಹೀಗೆ ದಾರಿಗಳು ಹತ್ತು ಹಲವಾರು. ಇಂತಹ ಪ್ರವೃತ್ತಿಗಳಿಂದ ಆದಾಯ ನಿರೀಕ್ಷಿಸಿದಷ್ಟೂ ಆ ಕೆಲಸದಿಂದ ದೊರೆಯುವ ತೃಪ್ತಿಯಿಂದ ನಾವು ವಂಚಿತರಾಗುತ್ತೇವೆ. ಅನಾಯಾಸವಾಗಿ ಬಂದರೆ ಬರಲಿ. ಆದರೆ ಆಸೆ ಬೇಡ. ಆಗಲೇ ಮಾಡಿದ ಅಂತಹ ಕೆಲಸಗಳು ಮನಸ್ಸಿಗೆ ಹೆಚ್ಚು ಹೆಚ್ಚು ಮುದ, ನೆಮ್ಮದಿ ನೀಡಬಲ್ಲವು. ಸಾಂಸಾರಿಕ ಜಂಜಾಟಗಳಿಂದ ಆದಷ್ಟೂ ದೂರವಿರುವುದೇ ಲೇಸು.

ಕೆಳದಿ ಕವಿ ವಂಶದ ಓರ್ವ ಶ್ರೇಷ್ಠ ಕಲಾವಿದ ಸಾಗರದ ಕವಿ ಲಿಂಗಣ್ಣಯ್ಯ[1879-1943]. ಅವರ ಪುತ್ರರಾದ ಕವಿ ಕೃಷ್ಣಮೂರ್ತಿಯವರು ಒದಗಿಸಿದ ಅವರ ತಂದೆ ದಿನವೂ ಮಾಡುತ್ತಿದ್ದ ಪ್ರಾರ್ಥನೆಯ ಸಾರಾಂಶ ಹೀಗಿದೆ:

"ಓ ಪರಮಾತ್ಮನೇ, ನನಗೆ ವಯಸ್ಸಾಗುತ್ತಿದೆ. ಆದ್ದರಿಂದ ಮಾತು ಕಡಿಮೆ ಮಾಡುವಂತೆ ಮಾಡು. ಪ್ರತಿ ವಿಷಯದಲ್ಲೂ ತಲೆ ಹಾಕದಂತೆ ಮಾಡು. ಎಲ್ಲರ ತಪ್ಪನ್ನೂ ತಿದ್ದುವ ಕಾಳಜಿ ನನಗೆ ಬೇಡ. ಇಂತಹ ಬುದ್ಧಿ ನನಗೆ ಕೊಡು. ಇತರರ ನೋವು ನಲಿವುಗಳ ಬಗ್ಗೆ ನನಗೆ ಅನುಕಂಪ ಬರಲಿ. ಏಕೆಂದರೆ ನನ್ನ ನೋವುಗಳೇ ದಿನೇದಿನೇ ಹೆಚ್ಚಾಗಬಹುದು. ಅದನ್ನು ಇತರರೊಡನೆ ಆದಷ್ಟೂ ಕಡಿಮೆ ಹಂಚಿಕೊಳ್ಳುತ್ತೇನೆ. ಅನೇಕ ವೇಳೆ ನನ್ನ ಅಭಿಪ್ರಾಯಗಳು ತಪ್ಪಾಗಬಹುದೆಂಬ ಅರಿವೂ ನನಗಾಗಲಿ. ಹಸನ್ಮುಖಿಯಾಗಿರಲು ಕರುಣಿಸು. ನಾನೇನೂ ಮಹಾತ್ಮನಲ್ಲ. ಆದರೆ ಸಪ್ಪೆಮುಖದಿಂದ ಖಿನ್ನನಾಗಿ ಬಾಳಲಾರೆ. ನನ್ನನ್ನು ವಿಚಾರವಂತನನ್ನಾಗಿ ಮಾಡು. ಆದರೆ ಭಾವನಾಜೀವಿಯಾಗಿಸಬೇಡ. ಇತರರಿಗೆ ಸಹಾಯಕನಾಗಿ ಬಾಳುತ್ತೇನೆ. ಆದರೆ ಇತರರನ್ನು ಒತ್ತಾಯ ಮಾಡುವುದಿಲ್ಲ. ಸ್ವಾವಲಂಬಿಯಾಗಿರುತ್ತೇನೆ. ಇತರರ ಔದಾರ್ಯಕ್ಕೆ ಋಣಿಯಾಗಿರುತ್ತೇನೆ. ನನಗೆ ವಯಸ್ಸಾಗಿದೆ ಎಂಬ ಕಾರಣದಿಂದ ವಿವೇಕಿ ಎಂಬ ಭಾವನೆ ನನಗೆ ಉಂಟಾಗದಿರಲಿ. ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆಗಳು ನನಗೆ ಇಷ್ಟವಾಗಿರದಿದ್ದರೆ ಅದನ್ನು ನಾನು ವ್ಯಕ್ತಪಡಿಸದೆ ಮೌನವಾಗಿರುವಂತೆ ಮಾಡು. ಇನ್ನೆಷ್ಟು ದಿನ ಇರುತ್ತೇನೋ ನಾನರಿಯೆ. ಕಡೆಗಾಲದಲ್ಲಿ ನನಗೆ ಸ್ನೇಹಿತರು ಒಬ್ಬಿಬ್ಬರಾದರೂ ಉಳಿದಿರಲಿ ಎಂಬುದು ನನ್ನ ಆಶಯ."

ಇದಕ್ಕಿಂತ ಹೆಚ್ಚೇನು ಬೇಕು? ನಮ್ಮ ಹವ್ಯಾಸಗಳಲ್ಲಿ ನಾವು ತೊಡಗಿ, ಮಕ್ಕಳಿಗೆ ಸಂಪೂರ್ಣ ಜವಾಬ್ದಾರಿ ನೀಡಿ, ಅವರ ವ್ಯವಹಾರಗಳಲ್ಲಿ ಮೂಗು ತೂರಿಸದೇ, ಆಶೀರ್ವಾದಪೂರ್ವಕವಾಗಿ ನಮ್ಮ ನಡೆಗಳು ಇದ್ದಾಗ ತೊಂದರೆಗೆ, ಮನಸ್ತಾಪಕ್ಕೆ ಎಡೆ ಎಲ್ಲಿ? ನಿವೃತ್ತಾನಂತರ ನಮ್ಮ ಸಬಲ ಆರ್ಥಿಕ ಸ್ಥಿತಿಯಿಂದ ಮಕ್ಕಳ ಮೇಲೆ ನಮ್ಮ ಅಭಿಪ್ರಾಯಗಳನ್ನು ಹೇರುವುದರಿಂದಲೇ ಕುಟುಂಬದಲ್ಲಿ ಅಶಾಂತಿ ಬರುವುದು. ನಿವೃತ್ತಾನಂತರ ವೃದ್ಧಾಶ್ರಮಕ್ಕೆ ಸೇರುವ ಪರಿಸ್ಥಿತಿಗೆ ನಮ್ಮ ಮಕ್ಕಳ ಪಾತ್ರದೊಂದಿಗೆ ನಮ್ಮ ಇಂತಹ ಸ್ವಪ್ರತಿಷ್ಠೆ ನಡವಳಿಕೆಗಳೂ ಅಷ್ಠೇ ಕಾರಣವೆಂಬುದೂ ಸತ್ಯಾಂಶವೇ.

Thursday, August 12, 2010

ಜೀವನದ ಸಂಜೆಯಲ್ಲಿ

ಬಾಲ್ಯ, ಯೌವನ, ವೃದ್ದಾಪ್ಯ ಮತ್ತು ವಾನಪ್ರಸ್ಥಾಶ್ರಮ (ಸನ್ಯಾಸ) ಇವುಗಳು ನಮ್ಮ ಸನಾತನ ಧರ್ಮ ಗುರುತಿಸಿರುವ ಮಾನವ ಜೀವನದ ವಿವಿಧ ಘಟ್ಟಗಳು. ಪೂರ್ಣಾಯಸ್ಸಿನ ಕೃಪೆಯಿದ್ದಲ್ಲಿ ಪ್ರತಿಯೊಬ್ಬರೂ ಈ ಎಲ್ಲಾ ಹಂತಗಳನ್ನೂ (ಬಹುಶ: ಸನ್ಯಾಸವೊಂದನ್ನು ಬಿಟ್ಟು-ಅದು ವ್ಯಕ್ತಿಯ ವೈಯುಕ್ತಿಕ ತೀರ್ಮಾನ) ಅನುಭವಿಸಲೇ ಬೇಕು; ದಾಟಲೇ ಬೇಕು. ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಜನೆ,ಯೌವನದಲ್ಲಿ ವೈವಾಹಿಕ ಜೀವನ ನಿರ್ವಹಣೆ ಮತ್ತು ವೃದ್ಧಾಪ್ಯದಲ್ಲಿ ನೆಮ್ಮದಿಯ, ನಿರಪೇಕ್ಷವಾದ ಮತ್ತು ಶಾಂತಿಯ ಜೀವನ ಇವು ಸಾಮಾನ್ಯವಾಗಿ ನಾವೆಲ್ಲರ ಜೀವನದಲ್ಲಿ ನಿರೀಕ್ಷಿಸಬಹುದಾದ ಮತ್ತು ಸಹಜವಾದ ಕ್ರಿಯೆಗಳು. ಬಾಲ್ಯಾವಸ್ಥೆ ಜೀವನದ ಏಕೈಕ ನಿಶ್ಚಿಂತ ಮತ್ತು ಸುಂದರ ಕಾಲ - a golden period! ಅದೇ ರೀತಿ, ಯೌವನಾವಧಿ ಕೂಡ ಕನಸುಗಳ ಅಲೆಗಳನ್ನೇರಿ ಸುಖ-ಸಂತೋಷಗಳಿಂದ ಸಂಭ್ರಮಿಸುವ ವರ್ಣಮಯ ಕಾಲ. ಆದರೇನು ಮಾಡುವುದು? ಈ ಗಡಿಯಾರದ ಟಿಕ್ ಟಿಕ್ ನಿಲ್ಲುವುದೇ ಇಲ್ಲವಲ್ಲ. ಹಾಗಾಗಿ ಮತ್ತಷ್ಟು ಬೇಕೆಂದರೂ ಕೂಡ ಈ ಘಟ್ಟಗಳ ನಿಜವಾದ ಮತ್ತು ಸಂಪೂರ್ಣವಾದ ಸಂತೋಷವನ್ನು ಅನುಭವಿಸುತ್ತಿರುವಾಗಲೇ ಕಾಲವು ನಮಗರಿವಿಲ್ಲದೆಯೇ ಜಾರಿ ವೃದ್ಧಾಪ್ಯದ ಹೊಸಲಿಗೆ ಬಂದೇ ಬಿಡುತ್ತೇವೆ. ಕಳೆದು ಹೋದ ಸುಂದರ ಸಮಯ ಬರೀ ನೆನಪಾಗಿಯೇ ಉಳಿಯುತ್ತದೆ. ಏತನ್ಮಧ್ಯೆ ನಮ್ಮ ಸ್ವಂತ ಸುಖದ ಬಯಕೆ ಮತ್ತು ಹೆಚ್ಚು ಹೆಚ್ಚು ಗಳಿಸಬೇಕೆಂಬ ನಾಗಾಲೋಟದಲ್ಲಿ ಅನೇಕ ಸತ್ಕಾರ್ಯಗಳನ್ನು ಮುಂದೆ ಮಾಡಿದರಾಯಿತು, ಇನ್ನೂ ಸಮಯ ಇದೆಯಲ್ಲಾ ಇತ್ಯಾದಿ ಸಬೂಬುಗಳನ್ನು ಹೇಳಿ ನಾವು ಮುಂದೂಡುತ್ತಲೇ ಬರುತ್ತೇವೆ. ಹೀಗೆ ಮುಂದೂಡಿದ ಸತ್ಸಂಕಲ್ಪಗಳು ಸಾಕಷ್ಟು ದೊಡ್ಡದಾಗಿ ಬೆಳೆದು, ನಮ್ಮ ಒಳಮನಸ್ಸು ಎಚ್ಚರಿಸಿ ನಾವು ಜಾಗೃತರಾಗುವ ವೇಳೆಗೆ ವೃದ್ಧಾಪ್ಯ ಸನಿಹದಲ್ಲೇ ನಿಂತು ನಸುನಗುತ್ತಾ ನಮ್ಮನ್ನು ಸ್ವಾಗತಿಸುತ್ತಿರುತ್ತದೆ ಇಲ್ಲವೇ ಸಾಕಷ್ಟು ಆವರಿಸಿಬಿಟ್ಟಿರುತ್ತದೆ!!

ಅದುದರಿಂದ, ಜೀವನದಲ್ಲಿ ವೃದ್ಧಾಪ್ಯ ಒಂದು ಪರ್ವಕಾಲ. ಸಂಸಾರದ ಜವಾಬ್ದಾರಿಗಳನ್ನು ಒಂದೊಂದೇ ಕಳೆದು ನಿಶ್ಚಿಂತೆಯಿಂದಿರುವ ಕಾಲ. ವಿಶೇಷವಾಗಿ ಇರಲಿಕ್ಕೊಂದು ಮನೆ, ಹೆಣ್ಣು ಮಕ್ಕಳ ಮದುವೆ ಮತ್ತು ಗಂಡು ಮಕ್ಕಳಿಗೆ ಉದ್ಯೋಗ ಮತ್ತು ಸರಳ ವೃದ್ಧಾಪ್ಯದ ಜೀವನಕ್ಕೊಂದು ದಾರಿ ಪ್ರಾಪ್ತಿಯಾದರೆ ಆ ಸಂಸಾರಸ್ಥನ ಬಹುತೇಕ ಕರ್ತವ್ಯಗಳು ಮುಗಿದಿವೆಯೆಂದೇ ಭಾವಿಸಬಹುದು. ಸುಮಾರು 50-55 ವರ್ಷಗಳಾಗುತ್ತಲೇ ನಾವು ವೃದ್ಧಾಪ್ಯದೆಡೆಗೆ ಕಾಲಿಡುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿ ಜಾಗೃತಿಯಾಗಬೇಕು. ಅದು ಉದ್ಯೋಗ, ವ್ಯಾಪಾರ, ಶಿಕ್ಷಣ, ಸಂಶೋಧನೆ ಮುಂತಾದ ರಂಗಗಳಲ್ಲಿ ದುಡಿತು ಶಕ್ತಿ-ಸಾಮರ್ಥ್ಯಾನುಸಾರ ಮತ್ತು ಅರ್ಹತೆಯಾನುಸಾರ ಮೇಲ್ಮಟ್ಟವನ್ನು ತಲುಪಿರುವಂತಹ ಕಾಲ. ಹಾಗೆಯೇ ಸ್ವಲ್ಪ ಸಮಯದಲ್ಲಿಯೇ ರಿಟೈರ್ ಆಗಿ ಅವರವರ ಕ್ಷೇತ್ರಗಳಲ್ಲಿ ಸಾಧಿಸಿದ ಉತ್ತುಂಗದಿಂದ ಜಾರಿ ಪುನ: ಶೂನ್ಯಾವಸ್ಥೆಗೆ ತಲುಪಿ ಮನೆ ಸೇರುವ ಕಾಲ. ಏಕೆಂದರೆ ಕಾಲಚಕ್ರದಲ್ಲಿ ಮೇಲಕ್ಕೆ ಹೋದ ಮೇಲೆ ಕೆಳಗಿಳಿಯಲೇ ಬೇಕು. ಮೇಲೇರಿದಾಗ ಬಹು ಜನರಿಗೆ ಪ್ರಪಂಚವೇ ಕಾಣದು. ಯಶಸ್ಸಿನ ಮತ್ತು ಹಣದ ಮದ ಅವರ ಕಣ್ಣನ್ನು ಕುರುಡಾಗಿಸಿರುತ್ತದೆ. ವಾಸ್ತವವೆಂದರೆ, ನಾವು ಆ ಉತ್ತುಂಗದಿಂದ ಕೆಳಗಿಳಿದಾಗ ಪ್ರಪಂಚದ ಬೇರೆ ಯಾರಿಗೂ ಕೂಡ ನಾವೂ ಕಾಣಿಸುವುದಿಲ್ಲ! ಆ ಎಚ್ಚರ ಮತ್ತು ಅರಿವು ಇದ್ದಾಗ ನಾವು ಆ ಶಿಖರದಿಂದ ಇಳಿದಾಗ ವಾಸ್ತವವನ್ನು ಎದುರಿಸುವುದು ಅಷ್ಟರಮಟ್ಟಿಗೆ ಸುಲಭವಾದೀತು. ಜೀವನವೆಂದರೆ ಇಷ್ಟೇ ಎಂಬ ನಿರ್ವಿಕಾರ ಭಾವನೆ ಮೂಡಲೂ ಸಹಾಯಕವಾದೀತು. ಎಂತಲೇ, ನಮ್ಮ ವೃದ್ಧಾಪ್ಯ ಜೀವನದ ತಯಾರಿ ಸಕಾರಾತ್ಮಕವಾಗಿ ಮತ್ತು ಯೋಜಿತವಾಗಿ ಪ್ರಾರಂಭವಾಗಬೇಕು. ರಿಟೈರ್ ಆಗುವ ಮೊದಲೇ ರಿಟೈರ್ ಆದ ಮೇಲಿನ ಜೀವನಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವುದು ಮತ್ತು ನೆಮ್ಮದಿಯ ಜೀವನಕ್ಕಾಗಿ ಪರ್ಯಾಯ ಹವ್ಯಾಸಗಳನ್ನು ಮತ್ತು ಚಿಂತನೆಗಳನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ.

ಲೌಕಿಕವಾಗಿ ಶಕ್ತ್ಯಾನುಸಾರ ಸಾಧನೆ-ಸಂಪಾದನೆ ಮಾಡಿದ ಮೇಲೆ ಮತ್ತು ಸಾಂಸಾರಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ಮೇಲೆ, ಮುಂದಿನ ಮತ್ತು ಅಂತಿಮ ಘಟ್ಟದಲ್ಲಿಯಾದರೂ ಹಂತ-ಹಂತವಾಗಿ ಈ ಪ್ರಾಪಂಚಿಕ ಜಂಜಾಟಗಳಿಂದ, ಆಕರ್ಷಣೆಗಳಿಂದ ಮತ್ತು ಮೋಹದ ಪಾಶದಿಂದ ವಿಮುಖವಾಗುವ ಪ್ರಕ್ರಿಯೆ ಒಂದು ಅತೀ ಅಪೇಕ್ಷಣೀಯವಾದ ಮತ್ತು ಅತ್ಯಗತ್ಯವಾದ ಬೆಳವಣಿಗೆ. ಒಬ್ಬ ಕೋಟ್ಯಾಧಿಪತಿಯಾದ ವ್ಯಾಪರಸ್ಥನಿದ್ದನಂತೆ. ಸಾಕಷ್ಟು ವಯಸ್ಶಾದ ಮೇಲೆ, ತನ್ನ ಲೆಕ್ಕಾಧಿಕಾರಿಯನ್ನು ಕರೆದು ನನಗೆ ವಯಸ್ಸಾಗಿದೆ, ಸಾಕಾಗಿದೆ, ನಾನು ಮಾಡಿರುವ ಆಸ್ತಿ ಎಷ್ಟು ತಲೆಮಾರಿನವರೆಗೆ ಬರುತ್ತದೆ, ಲೆಕ್ಕ ಮಾಡಿ ಹೇಳು. ಇನ್ನು ಮುಂದೆ ನಾನು ವಿಶ್ರಾಂತಿ ತೆಗೆದುಕೊಳ್ಳಬಯಸುತ್ತೇನೆ ಎಂದ. ಲೆಕ್ಕ ಹಾಕಿನ ನಂತರ ಆ ಲೆಕ್ಕಾಧಿಕಾರಿ, ಸ್ವಾಮಿ, ತಾವು ಸಂಪಾದಿಸಿದ ಆಸ್ತಿ ಸುಮಾರು ಆರು ತಲೆಮಾರಿಗೆ ಸಾಕಾಗುತ್ತದೆ ಎಂದ. ವ್ಯಾಪಾರಿ ಹಾಗಿದ್ದರೆ, ನಾಳೆಯಿಂದಲೇ ನಾನು ವಿಶ್ರಾಂತ ಜೀವನ ನಡೆಸುತ್ತೇನೆ, ಅಂಗಡಿಗೆ ಬರಿವುದಿಲ್ಲ ಎಂದು ಹೇಳಿ ಮನೆಗೆ ತೆರಳಿದ. ಮಾರನೇ ದಿನ ಲೆಕ್ಕಾಧಿಕಾರಿ ಅಂಗಡಿಗೆ ಬಂದಾಗ ಆಶ್ಷರ್ಯ ಕಾದಿತ್ತು. ಆ ಮುದಿ ಯಜಮಾನ ಅರ್ಧ ಘಂಟೆ ಮುಂಚೆಯೇ ಅಂಗಡಿಗೆ ಬಂದು ಆಸೀನನಾಗಿದ್ದ. ಲೆಕ್ಕಾಧಿಕಾರಿಯ ಪ್ರಶ್ನಾರ್ಥಕ ನೋಟಕ್ಕೆ ಯಜಮಾನನ ಉತ್ತರ ಹೀಗಿತ್ತು: ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ. ನೀನು ಹೇಳಿದಂತೆ ಈ ಆಸ್ತಿ ಕೇವಲ ಆರು ತಲೆಮಾರಿಗಷ್ಟೇ ಸಾಕು. ಏಳನೇ ತಲೆಮಾರಿಗೆ ಏನು ಮಾಡುವುದು ಎಂಬ ಚಿಂತೆಯಾಯಿತು. ಅದಕ್ಕೇ ಕೆಲಸಕ್ಕೆ ಬಂದು ಬಿಟ್ಟೆ! ಹಾಗಾಗಿ, ಈ ಪ್ರಾಪಂಚಿಕ ಮೋಹ-ಪಾಶಗಳಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭವಲ್ಲ. ಅದಕ್ಕೆ ತಕ್ಕ ಸಂಸ್ಕಾರ ಬೇಕು. ಶಿಸ್ತುಬದ್ಧವಾದ, ದೃಢಮನಸ್ಸಿನ ಸಂಕಲ್ಪ, ತಯಾರಿ ಮತ್ತು ಅನುಷ್ಠಾನ ಬೇಕು. ಜೀವನಪೂರ್ತಿ ನಾನು, ನನ್ನ ಸಂಸಾರ, ನನ್ನ ದುಡಿಮೆ, ಯಶಸ್ಸು, ಕೀರ್ತಿ ಇವುಗಳನ್ನೇ ನಾವು ಬೆನ್ನು ಹತ್ತಿಬಿಟ್ಟರೆ, ನಾನು ಎಂದರೇನು ಮತ್ತು ನನ್ನಾತ್ಮದ ಸದ್ಗತಿಯ ಮಾರ್ಗಗಳಾವುವು ಎಂಬುದರ ಬಗ್ಗೆ ಕಿಂಚಿತ್ತಾದರೂ ಚಿಂತಿಸುವುದು ಯಾವಾಗ? ಹಿಂದಿನ ಜನ್ಮಗಳಲ್ಲಿ ನಾವು ಮಾಡಿರುವ ಪಾಪ ಕರ್ಮಗಳು ನಮಗೆ ತಿಳಿಯವು. ಆದುದರಿಂದ, ಕನಿಷ್ಠಪಕ್ಷ ಹಿಂದಿನ ದಿನಗಳಲ್ಲಿ ತಿಳಿದೋ, ತಿಳಿಯದೆಯೋ ಮಾಡಿರಬಹುದಾದ ತಪ್ಪು-ಒಪ್ಪುಗಳ ತುಲನೆ/ಆತ್ಮಾವಲೋಕನ ಮಾಡಿ ಕೊಳ್ಳುವುದು ಯಾವಾಗ? ಅವುಗಳನ್ನು ತಿದ್ದಿಕೊಂಡು ಅಥವಾ ಕನಿಷ್ಟಪಕ್ಷ ಪಶ್ಚಾತ್ತಾಪ ಪಡುವುದು ಯಾವಾಗ? ಸುತ್ತಲಿನ ಆಗು-ಹೋಗುಗಳನ್ನು ಹಂಸ-ಕ್ಷೀರ ನ್ಯಾಯದಂತೆ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳುವುದು ಯಾವಾಗ? ನಾವಿಲ್ಲದಿದ್ದಾಗಲೂ ಈ ಪ್ರಪಂಚ ನಡೆದಿದೆ; ನಾವೂ ಸಹ ಅದನ್ನು ಅನುಭವಿಸಿದ್ದೇವೆ; ನಮ್ಮ ನಂತರವೂ ಈ ನಾಟಕ ಮುಂದುವರೆಯಲಿದೆ ಎಂಬ ಅಂಶ ನಮಗೆ ಮೊದಲು ಸ್ಪಷ್ಟವಾಗಬೇಕು. ನಾವು ಬಂದದ್ದರಿಂದ ಅಥವಾ ಬರದಿದ್ದುದರಿಂದ ಅಥವಾ ನಮ್ಮ ನಿರ್ಗಮನದಿಂದ ಈ ಪ್ರಪಂಚದ ಆಗು-ಹೋಗುಗಳಿಗೆ ಏನೂ ಪ್ರಭಾವ ಇಲ್ಲ. ನಾನಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗದು ಎಂದು ಪ್ರಪಂಚವನ್ನೆಲ್ಲವನ್ನೂ ತಮ್ಮ ತಲೆಯ ಮೇಲೇ ಹೊತ್ತವರಂತೆ ಪರದಾಡುವ ಅನೇಕ ವೃದ್ಧರನ್ನು ನಾವು ಹೇರಳವಾಗಿ ನೋಡಬಹುದು. ಈ ಭ್ರಮೆಯಿಂದಲೇ ಅವರು ತಮ್ಮ ಮಕ್ಕಳ ಹಾಗೂ ನೆಂಟರಿಷ್ಟರ ಬಾಳಿನಲ್ಲಿ ಪ್ರತಿ ವ್ಯವಹಾರದಲ್ಲೂ ಅನಾವಶ್ಯಕ ಮೂಗು ತೂರಿಸಿ ತಮ್ಮ ಹಾಗೂ ಇತರರ ಬಾಳನ್ನೂ ನೆಮ್ಮದಿಗೆಡಿಸುವ ಮೂರ್ಖತನದ ಕೆಲಸಕ್ಕೂ ಕೈ ಹಾಕುವದೂ ಕೂಡ ಈಗ ಸರ್ವೇ ಸಾಮಾನ್ಯ. ತಾವೂ ನೆಮ್ಮದಿಯಿಂದ ಬಾಳರು; ಇತರರನ್ನೂ ನೆಮ್ಮದಿಯಿಂದ ಬಾಳಲು ಬಿಡರು. ಸ್ವಾರ್ಥಸಾಧನೆಯೊಂದೇ ಗುರಿಯಾದಾಗ ಎಲ್ಲರ ನೆಮ್ಮದಿಗೂ ಕುತ್ತು. ಸಾಂಸಾರಿಕ ಮತ್ತು ವ್ಯಾವಹಾರಿ ಜವಾಬ್ದಾರಿಗಳನ್ನು ನಿಶ್ಚಿಂತೆಯಿಂದ ಬಾಧ್ಯಸ್ಥರಿಗೆ ವಹಿಸಿ ತಮ್ಮ ಪ್ರಸ್ತುತಕ್ಕೆ ಅವಶ್ಯವಿರುವಷ್ಟನ್ನು ಮಾತ್ರಾ ಸಂತೃಪ್ತ ಭಾವನೆಯಿಂದ ಅನುಭವಿಸುವ ಪ್ರವೃತ್ತಿ ಕೂಡ ಇಂದು ಮರೆಯಾಗುತ್ತಿದೆ. ಕಡೆಯವರೆಗೂ ಈ ಜಂಜಾಟದಲ್ಲೇ ಮುಳುಗುವವರೇ ಹೆಚ್ಚು. ಅಂತೆಯೇ ಮುಂದಿನ ಪೀಳಿಗೆಯೊಂದಿಗೆ ಸಂಘರ್ಷ ಕೂಡ ಸಾಮಾನ್ಯ. ವೃದ್ಧಾಶ್ರಮಗಳ ಹೆಚ್ಚಳಕ್ಕೆ ಬರೀ ಮಕ್ಕಳನ್ನೇ ಅಪರಾಧಿಗಳಂತೆ ಇಂದು ಬಿಂಬಿಸಲಾಗುತ್ತಿದೆ. ನಿಜ ಹೇಳಬೇಕೆಂದರೆ ನಾಣ್ಯದ ಎರಡು ಮುಖಗಳಂತೆ ಇಲ್ಲೂ ಎರಡು ಆಯಾಮಗಳಿವೆ. ಇತ್ತೀಚಿನ ಕುಟುಂಬಗಳ ವೃದ್ಧರನ್ನು ಗಮನಿಸಿದಾಗ ಸ್ವತಂತ್ರವಾಗಿಯೇ ಬಾಳಬೇಕೆಂಬ ಇರಾದೆ ಮತ್ತು ಕುಟುಂಬದ ಇತರರೊಂದಿಗೆ ಸಮರಸವಾಗಿ ಬೆರೆತು-ಬಾಳುವ ಮನೋಭಾವದ ಕೊರತೆ ಎದ್ದು ಕಾಣುತ್ತದೆ. ಮಕ್ಕಳು ವಯಸ್ಶಾದ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವ ಬಗ್ಗೆ ಅವರಿಗೇ ಅನುಮಾನ (ಬಹುಶ: ಅವರು ಹಿಂದೆ ಅವರ ತಂದೆ-ತಾಯಿಗಳನ್ನು ನೋಡಿಕೊಂಡ ರೀತಿ ನೆನಪಾಗಿ ಅದೇ ಗತಿ ತಮಗೂ ಬರಬಹುದೆಂಬ ಅಂಜಿಕೆಯೂ ಕಾಡಬಹುದೇನೋ?); ಅಂತಹ ಅನುಮಾನ ಅವರಲ್ಲಿ ಮೂಡಬೇಕಾದರೆ ಮಕ್ಕಳನ್ನು ಅವರು ಬೆಳೆಸಿ-ಪೋಷಿಸಿದ ರೀತಿಯಲ್ಲಿಯೇ ಏನೋ ದೋಷವಿದೆಯೆನಿಸುವುದೂ ಸಹಜ ತಾನೇ? ವೃದ್ಧಾಪ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಿಕೊಂಡವರು ವಿಶೇಷವಾಗಿ ಆ ವಿಚಾರವನ್ನೇ ಪದೇ ಪದೇ ತಮ್ಮ ಕುಟುಂಬದ ಕಿರಿಯರಿಗೆ ನೆನಪಿಸುತ್ತಾ, ತಾವೇನೂ ಪರಾವಲಂಬಿಗಳಲ್ಲ, ಮಕ್ಕಳು ಬಿಟ್ಟಿ ಕೂಳು ಹಾಕುತ್ತಿಲ್ಲ ಎಂಬ ತಲೆಪ್ರತಿಷ್ಠೆಯ ಮತ್ತು ಅನಾವಶ್ಯಕ ನಡವಳಿಕೆ ತೋರಿದಾಗ ಸಂಬಂಧಗಳು ಹಳಸುತ್ತವೆ. ಆರ್ಥಿಕವಾಗಿ ಅವರಷ್ಟೇ ಮತ್ತು ಅನೇಕ ಸಂದರ್ಭಗಳಲ್ಲಿ ಅವರಿಗಿಂತ ಹೆಚ್ಚು ಸಬಲವಾಗಿರುವ ಕಿರಿಯರು ಸಹಜವಾಗಿಯೇ ಈ ಪ್ರವೃತ್ತಿಯಿಂದ ಬೇಸತ್ತು ಹಿರಿಯರನ್ನು ಇನ್ನಷ್ಟು ಹೆಚ್ಚು ನಿರ್ಲಕ್ಷಿಸಲು ಮತ್ತು ಪ್ರತಿಭಟಿಸಲು ಮುಂದಾಗುತ್ತಾರೆ. ಸಹಬಾಳ್ವೆಗೆ ಎಲ್ಲರ ಸಹಯೋಗ ಮತ್ತು ಸಹಕಾರ ಅಗತ್ಯ. ಯಾವ ಒಂದು ಕೊಂಡಿ ಸಡಿಲವಾದರೂ ಸಂಬಂಧಗಳು ಸೊರಗುತ್ತವೆ. ಹಾಗಾಗದಂತೆ ಎಚ್ಚರ ವಹಿಸುವ ಮತ್ತು ಸಕಾಲಿಕ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಮತ್ತು ಮೇಲ್ಪಂಕ್ತಿ ಹಾಕಿಕೊಡುವ ಜವಾಬ್ದಾರಿ ಕೂಡ ಹಿರಿಯರದ್ಧೇ ಅಲ್ಲವೇ? ಆದರೆ, ಪ್ರೀತಿ, ಪ್ರೇಮ, ಹಿರೀಕತನ ಮುಂತಾದವು ಇರಬೇಕಾದ ಕಡೆ ಇಂದು ಸ್ವಪ್ರತಿಷ್ಠೆ ಮತ್ತು ಅವಶ್ಯಕತೆಗೂ ಮೀರಿದ ಸ್ವಾಭಿಮಾನ (ದುರಭಿಮಾನ) ವಿರಾಜಿಸುತ್ತಿದೆ. ಹಾಗಾಗಿ ವೃದ್ಧಾಶ್ರಮ ಸೇರುವ ಸಾಕಷ್ಟು ಮಂದಿ ಸ್ವಯಂಕೃತ ಅಪರಾಧಿಗಳೇ ಎಂಬುದು ಕಟುವೆನಿಸಿದರೂ ಸತ್ಯವಾದ ಮತ್ತು ಒಪ್ಪಲೇಬೇಕಾದ ಸಂಗತಿ. ಒಟ್ಟಿನಲ್ಲಿ ಇದು ಕುಟುಂಬದ ಸುಮಧುರ ಬಾಂಧವ್ಯದ ಮತ್ತು ಬಂಧಗಳ ನಿರಂತರ ಪತನದ ದಿಕ್ಸೂಚಿಯೆಂದರೂ ಸರಿಯೇ. ಇಂತಹ ಅವನತಿಗೆ ಪ್ರಮುಖ ಕಾರಣಗಳಲ್ಲೊಂದು ಹಿರಿಯರ ಸ್ವಾರ್ಥಾರಾಧನೆ ಮತ್ತು ಸ್ವಪ್ರತಿಷ್ಠೆ. ಕಾಲ ಕಾಲಕ್ಕು, ತಲೆಮಾರಿನಿಂದ ತಲೆಮಾರಿಗೂ ಸಂಪ್ರದಾಯಗಳು, ಜೀವನಶೈಲಿ ಮತ್ತು ಯೋಚನಾಲಹರಿಗಳು ಬದಲಾಗುತ್ತವೆ; ಬದಲಾಗಲೇ ಬೇಕು. ಬದಲಾವಣೆ ಜಗದ ನಿಯಮ. ಈ ಅಂಶವನ್ನು ಅರಿತು, ಗೌರವಿಸಿದಷ್ಟೂ ಎಲ್ಲರ ಜೀವನ ಆನಂದಮಯವಾಗಿರಲು ಸಾಧ್ಯ. ಕಿರಿಯರಿಗೆ ಹಿರಿಯರ ಮಾರ್ಗದರ್ಶನ, ಒಡನಾಟ ಮತ್ತು ಆಶೀರ್ವಾದ ಬೇಕೇ ಬೇಕು. ಆದರೆ ವಿಶೇಷವಾಗಿ ಈ ಕಾಲದಲ್ಲಿ ಅದನ್ನು ಅವರಾಗಿಯೇ ಕಿರಿಯರ ಮೇಲೆ ಹೇರುವ ಹಠ ಮಾತ್ರಾ ತರವಲ್ಲ. ಅದು ಅವರ ಮತ್ತು ಕಿರಿಯರ ನಡುವೆ ಕೇವಲ ಕಿರಿಕಿರಿಯ ಅಸ್ತ್ರವೊಂದೇ ಆದೀತು. ಅದಕ್ಕೇ ಬಯಸದೇ ಇರುವ ಯಾವುದೇ ಸಲಹೆ ನೀಡಬೇಡಿ ಎಂದು ತಿಳಿದವರು ಹೇಳುವುದು.

ವೃದ್ಧಾಪ್ಯದ ಈ ಕಾಲ, ಈ ಹಿಂದೆ ಹೇಳಿದಂತೆ, ಒಂದು ಆತ್ಮಾವಲೋಕನದ ಕಾಲ. ಈ ಮೊದಲು ಮುಂದೂಡಿದ್ದ ಅನೇಕ ಸತ್ಸಂಕಲ್ಪಗಳನ್ನು ನೆರವೇರಿಸುವ ಕಾಲ. ಅದು ನಿಮ್ಮ ಕುಲದೇವರ ಕ್ಷೇತ್ರಕ್ಕೆ ಹೋಗುವುದಿರಬಹುದು, ತೀರ್ಥಯಾತ್ರೆಗೆ ಹೋಗುವ ವಿಚಾರವಿರಬಹುದು, ಪೂಜೆ, ಹೋಮ-ಹವನ, ದಾನಧರ್ಮಾದಿಗಳನ್ನು ಮಾಡುವುದಿರಬಹುದು, ಕನಿಷ್ಠಪಕ್ಷ ತಮ್ಮ ಕುಟುಂಬದ ಮಕ್ಕಳು-ಮೊಮ್ಮಕ್ಕಳು ವರ್ಷದೊಂದು ದಿನವಾದರೂ (ಹಬ್ಬ ಹರಿದಿನಗಳಲ್ಲಿ) ಒಂದೆಡೆ ಕಲೆತು ಬಾಂಧವ್ಯ ಬಲಗೊಳಿಸುವತ್ತ ಮಾರ್ಗದರ್ಶನ ನೀಡುವುದಿರಬಹುದು, ಕುಟುಂಬದ ಸಂಪ್ರದಾಯಗಳ ಬಗ್ಗೆ, ರೀತಿ ರಿವಾಜುಗಳ ಬಗ್ಗೆ ಮತ್ತು ಕುಟುಂಬದ ಹಿರಿಯರ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದಿರಬಹುದು ಇತ್ಯಾದಿ. ಜೀವನದ ಪರ್ವಕಾಲದಲ್ಲೂ ಇಂತಹ ಯೋಚನೆಗಳು ಬಾರದಿದ್ದಲ್ಲಿ ಅದು ಸ್ವಾರ್ಥದ, ಅಜ್ಞಾನದ ಮತ್ತು ಅಸಡ್ಡೆಯ ಪರಮಾವಧಿ ಎಂದರೆ ತಪ್ಪಾಗಲಾರದು. ಈ ಸಮಯ ಇಂತಹ ಸಂಕಲ್ಪಗಳನ್ನು ಸಾಕಾರಗೊಳಿಸಲು ಇರುವ ಸಕಾಲ ಮತ್ತು ಅಲ್ಪ ಕಾಲ! ಇನ್ನು ತಡಮಾಡಿದರೆ ಮುಂದೆಂದೂ ಆಗದು. ಅಂತ್ಯಕಾಲದಲ್ಲಿ ಭ್ರಮನಿರಸನ ಮತ್ತು ಆಪ್ತರ ತೆಗಳಿಕೆ ಬಿಟ್ಟರೆ ಬೇರೇನೂ ಲಭಿಸದು. ದುರದೃಷ್ಟವಶಾತ್, ಕೊನೆಗಾಲದಲ್ಲಿ ಅರಳು-ಮರುಳಾಗಿಬಿಟ್ಟರಂತೂ, ಅವರ ಅಂತ್ಯಕ್ಕೂ ಪ್ರಾಣಿಯ ಅಂತ್ಯಕ್ಕೂ ಯಾವುದೇ ವ್ಯತ್ಯಾಸ ಇರದು. ಏಕೆಂದರೆ, ಆಗ ದೇಹ ಮತ್ತು ಮನಸ್ಸು ಎರಡೂ ತಮ್ಮ ಸಮತೋಲನವನ್ನು ಸಂಪೂರ್ಣ ಕಳೆದುಕೊಂಡುಬಿಟ್ಟಿರುತ್ತದೆ. ಹಾಗಾಗಿ, ದೇವರು ಆ ಸ್ಥಿತಿ ತಲುಪಿಸುವ ಮೊದಲೇ ಮತ್ತು ಅಂತಹ ಲಕ್ಷಣಗಳು ಕಂಡೊಡನೆಯೇ, ಇರುವ ಶಕ್ತಿ-ಸಂಪನ್ನೂಲಗಳನ್ನು ಬಳಸಿ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಮುಂದಿನ ಪೀಳಿಗೆಗೆ ತಿಳಿಸುವ ಯಾವುದಾದರೂ ಕುಟುಂಬದ ರಹಸ್ಯ ವಿಚಾರಗಳಿದ್ದಲ್ಲಿ ಮತ್ತು ಜವಾಬ್ದಾರಿಗಳನ್ನು ಹಸ್ತಾಂತರಿಸುವುದಿದ್ದಲ್ಲಿ, ಬುದ್ಧಿ ನೆಟ್ಟಗಿರುವಾಗಲೇ ಆ ಕರ್ತವ್ಯಗಳನ್ನು ಮುಗಿಸಿ, ನಿರಾಳವಾಗಿರಬೇಕು. ದಿನನಿತ್ಯದ ಹೆಚ್ಚಿನ ಸಮಯ ಜಪ-ತಪ, ಸದ್ವಿಚಾರ ಚಿಂತನೆ, ಹರಿಕಥೆ-ಸಂಗೀತಗಳ ಶ್ರವಣ, ಹಿತಮಿತವಾದ ದೇಹಕ್ಕೊಪ್ಪುವ ಉಡುಗೆ-ತೊಡುಗೆ ಮತ್ತು ಆಹಾರ-ವಿಹಾರಗಳಲ್ಲಿ ಕಳೆಯುವಂತೆ ಯೋಜನೆ ಮಾಡಿಕೊಳ್ಳಬೇಕು. ಕಿರಿಯರು ಮಾಡುವ ಪ್ರತಿಯೊಂದಕ್ಕೂ ತಪ್ಪು ಹುಡುಕಿ ಗೊಣಗುವುದು ನಿಲ್ಲಬೇಕು. ಸಾಂಸಾರಿಕ ದಿನನಿತ್ಯದ ಪಿರಿಪಿರಿಯಿಂದ ಸಾಕಷ್ಟು ದೂರವಿರಬೇಕು. ಹಾಗಿದ್ದಾಗ ಅನಾಯಾಸವಾದ ಅಂತ್ಯವೂ ಲಭ್ಯವಾದೀತು. ವಿಪರ್ಯಾಸವೆಂದರೆ, ಇಂದಿನ ಅನೇಕ ವೃದ್ಧರೂ ಕೂಡ ತಮ್ಮ ಬಹು ಸಮಯವನ್ನು ಮನೋವಿಕಾರಗೊಳಿಸುವ, ವಿಕೃತ ಕಾಮನೆಗಳನ್ನು ಉದ್ದೀಪಿಸುವ ಮತ್ತು ಯಾವುದೇ ಸದ್ವಿಚಾರಗಳಿಲ್ಲದ ದೂರದರ್ಶನದ ಧಾರಾವಾಹಿಗಳನ್ನು ನೋಡುವುದೇ ತಮ್ಮ ಜೀವನದ ಸಾರ್ಥಕ್ಯವೆಂದು ನಡೆದುಕೊಳ್ಳುತ್ತಿರುವುದು ನಿಜಕ್ಕೂ ಒಂದು ಅಸಹ್ಯಕರವಾದ ಮತ್ತು ಅನಪೇಕ್ಷಣೀಯವಾದ ಬೆಳವಣಿಗೆ. ಮನೆಯಲ್ಲಿರುವ ಮಕ್ಕಳ ಓದಿಗೆ ಕೂಡ ಇದು ತೊಡಕಾಗುತ್ತಿದೆ ಎಂಬ ಅಂಶ ಗೊತ್ತಿದ್ದರೂ ಗಮನಿಸದಂತೆ ತಮ್ಮ ಚಟವನ್ನು ತೀರಿಸಿಕೊಳ್ಳುವವರೇ ಇಂದು ಬಹುಮಂದಿ. ಎಲ್ಲರ ಸಬೂಬೂ ಒಂದೇ - ನಮಗೆ ಕಾಲ ಹೋಗುವುದಿಲ್ಲ; ನಮ್ಮನ್ನು ಯಾರೂ ಗಮನಿಸುವುದಿಲ್ಲ ಎಂದು. ಕಾಲವನ್ನು ಉಪಯೋಗವಾಗುವ ರೀತಿಯಲ್ಲಿ ಮತ್ತು ಸಂತೋಷದಿಂದ ಕಳೆಯಲು ನೂರೆಂಟು ಪರ್ಯಾಯವಾದ ಮತ್ತು ಉತ್ತಮವಾದ ಮಾರ್ಗಗಳಿವೆ. ಅವುಗಳನ್ನು ತಮ್ಮ ಅಭಿರುಚಿಯಾನುಸಾರ ಗುರುತಿಸಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾತ್ರಾ ಅವರೇ ಮಾಡಬೇಕು. ಬೇರೆಯವರ ಪ್ರೀತಿ, ವಾತ್ಸಲ್ಯ, ಸಮಯ ಮತ್ತು ಒಡನಾಟ ಬೇಕಿದ್ದರೆ ನೀವು ಕಿರಿಯರಿಗೆ ಅದನ್ನೇ ಮೊದಲು ನೀಡಬೇಕು. ಆದರೆ ಕಿರಿಯರಿಗೆ ಮಾರ್ಗದರ್ಶಕರಾಗಿರಬೇಕಾದ ಇವರೇ ಇಂತಹ ಕೀಳು ಹವ್ಯಾಸಗಳ ಗುಲಾಮರಾದರೆ, ಕಿರಿಯರ ಮತ್ತು ಮೊಮ್ಮಕ್ಕಳ ಒಟನಾಟದಿಂದ ದೂರ ಸರಿದರೆ, ಕಿರಿಯರಿಗೆ ಉತ್ತಮ ಪುಸ್ತಕಗಳ ಓದುವ ಹವ್ಯಾಸ, ಕಲೆ-ಆಟೋಟಗಳಲ್ಲಿ ಆಸಕ್ತಿ, ಸದಾಚರಣೆ ಮತ್ತು ಟಿ.ವಿ.ನೋಡುವ ಸಮಯವನ್ನು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳುವ ಪ್ರವೃತ್ತಿ ಮುಂತಾದವುಗಳನ್ನು ಬೆಳೆಸುವವರಾರು?

ಈ ಘಟ್ಟದಲ್ಲಿ ಮೊದಲೇ ಹೇಳಿದಂತೆ, ಮಾನವ ತನ್ನ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ನೆಮ್ಮದಿಯಾಗಿ ಇಡುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಪ್ರಾಜ್ಞರು ಹೇಳುವಂತೆ ಆ ಸಚ್ಚಿದಾನಂದದ ಅನುಭವದ ಗುರಿ ಮುಖ್ಯ. ದೇಹಕ್ಕೆ ವಯಸ್ಶಾದಂತೆ ಮನಸ್ಸೂ ಪರಿಪಕ್ವವಾಗುತ್ತಾ, ಮಾಗುತ್ತಾ ಸಾಗಬೇಕು. ಒಂದೊಂದು ಹಲ್ಲು ಬಿದ್ದಾಗಲೂ ಮನಸ್ಸಿನ ಒಂದೊಂದು ಕಲ್ಮಷವನ್ನೂ ತೊಳೆದು ಬಿಸಾಡಬೇಕು. ಆ ಹಂತದಲ್ಲಿ ಖಾಯಿಲೆಗಳು ಬಂದು ದೇವರ ದಯೆಯಿಂದ ಗುಣವಾದಾಗ ಪುನರ್ಜನ್ಮ ಸಿಕ್ಕದೆಯೆಂದೇ ಭಾವಿಸಬೇಕು. ವಯಸ್ಸಾದಾಗ ಬಿಳಿಯಾಗುವ ಕೂದಲು ಪರೋಕ್ಷವಾಗಿ ನಮ್ಮನ್ನು ಮನಸ್ಸಿನ ಶುಭ್ರತೆಯೆಡೆಗೆ ಸಾಗು ಎಂದು ಹೇಳುವ ಒಂದು ಅಲಾರಾಂ. ಮಾಗಿದ ಫಲದ ರುಚಿಯಂತೆ ಮೈಬಾಗಿದ ದೇಹದ ಮನಸ್ಸೂ ಪ್ರೀತಿ-ವಾತ್ಸಲ್ಯಗಳಿಂದ ತುಂಬಿ ಸಿಹಿಯಾಗಬೇಕು; ಆ ಸಿಹಿಯನ್ನು ಎಲ್ಲ ಆಪ್ತೇಷ್ಟರೊಡನೆ ತೆರೆಯ ಹೃದಯದಿಂದ ಹಂಚಿ ಸಂಭ್ರಮಿಸಬೇಕು. ಅಂತೆಯೇ ಈ ಸಮಯದಲ್ಲಿ ಹಿರಿಯರ ನಡೆ-ನುಡಿಗಳು ಕಿರಿಯರಿಗೆ ಮತ್ತು ಕುಟುಂಬಸ್ಥರಿಗೆ ಆಪ್ಯಾಯಮಾನವಾಗಿರಬೇಕು, ಆಹ್ಲಾದಕರವಾಗಿರಬೇಕು ಮತ್ತು ಪ್ರೀತಿ-ವಾತ್ಸಲ್ಯಗಳಿಂದ ತುಂಬಿರಬೇಕು. ಹಿರಿಯರು ತಮ್ಮ ದಿನನಿತ್ಯದ ಆತ್ಮ ಸಾಕ್ಷಾತ್ಕಾರದ ಕೈಂಕರ್ಯಗಳನ್ನು ನಿಷ್ಠೆಯಿಂದ ಮಾಡಿ ಹಿರಿತನದ ಸ್ಥಾನದ ಗೌರವವನ್ನು ಉಳಿಸಿಕೊಂಡಾಗ ನಿಜವಾದ ಅರ್ಥದಲ್ಲಿ ಹಿರೀಕರೆನಿಸಿಕೊಳ್ಳುತ್ತಾರೆ. ಅವರ ಕುಟುಂಬರ ಕಿರಿಯರು, ಅಷ್ಟೇಕೆ, ಇಡೀ ಸಮಾಜ ಅವರನ್ನು ಅತೀ ಗೌರವಾದರಗಳಿಂದ ನೋಡುತ್ತದೆ. ಆ ಮರ್ಯಾದೆ ಸಿಗಬೇಕಾದರೆ ಅದಕ್ಕೆ ತಕ್ಕಂತೆ ಹಿರಿಯರ ನಡೆ-ನುಡಿಗಳು ಇರುವದೂ ಅಷ್ಟೇ ಮುಖ್ಯ. ಕೇವಲ ವಯಸ್ಸು ಮತ್ತು ಮುದಿತನ ಒಂದೇ ಎಂದಿಗೂ ಗೌರವವನ್ನು ಗಳಿಸಲಾರವು. ಆದುದರಿಂದ, ವೃದ್ಧಾಪ್ಯದಲ್ಲೂ ಸಾಂಸಾರಿಕ ಜಂಜಾಟಕ್ಕೆ ತಾವೇ ಸಿಲುಕಿಕೊಳ್ಳುವ ಬದಲು ಆನಂದಭರಿತವಾದ ಮತ್ತು ತಮಗೂ ತಮ್ಮ ಕುಟುಂಬದವರೆಲ್ಲರಿಗೂ ಸಹನೀಯವಾಗುವಂತಹ ಸನ್ನಿವೇಶ ನಿರ್ಮಾಣವಾಗುವತ್ತ ಗಮನ ಕೇಂದ್ರೀಕರಿಸಿದರೆ ಮತ್ತು ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಕುಟುಂಬದ ಎಲ್ಲರ ಬಾಳೂ 'ಭಾಗ್ಯವಂತರು ನಾವು ಭಾಗ್ಯವಂತರು' ಎನ್ನುವಂತಾದೀತು. ಆದರೆ ಆ ಬದಲಾವಣೆ ಎಂದಿದ್ದರೂ ಮೇಲಿನಿಂದಲೇ ಪ್ರಾರಂಭವಾಗಬೇಕಲ್ಲವೇ?

ಈ ಭೂಮಿಯ ಮೇಲೆ ನಾವೆಲ್ಲರೂ ನಿಗದಿತ ಕಾಲದ ಅತಿಥಿಗಳು. ಅಲ್ಲಿದೆ ನಮ್ಮನೆ, ಇಲ್ಲಿರುವೆ ಸುಮ್ಮನೆ ಎಂಬಂತೆ, ಋಣಾನುಸಾರ, ಕರ್ಮಾನುಸಾರ ಮತ್ತು ಲಭ್ಯಾನುಸಾರ ಪ್ರಕೃತಿ ಇಲ್ಲಿ ನೀಡುವಷ್ಟನ್ನು ತೆಪ್ಪಗೆ ಮತ್ತು ಗೊಣಗುಟ್ಟದೇ ಅನುಭವಿಸಿ ಕಾಣದೂರಿಗೆ ಪ್ರಯಾಣ ಮುಂದುವರೆಸುವ ಒಂದು ತಾತ್ಕಾಲಿಕ ತಾಣ. ಇಲ್ಲಿಗೆ ನಾವು ತಂದದ್ದೂ ಶೂನ್ಯ; ತೆಗೆದುಕೊಂಡು ಹೋಗುವುದೂ ಶೂನ್ಯ. ಅದೇ ರೀತಿ, ವೃದ್ಧಾಪ್ಯಕ್ಕೆ ಕಾಲಿಡುತ್ತಿದ್ದಂತೆ ನಾವು ನಮ್ಮನ್ನು ಕುಟುಂಬದಲ್ಲಿ ಅತಿಥಿಗಳ ಸ್ಥಾನದಲ್ಲಿ ಪರಿಭಾವಿಸಿಕೊಂಡು ವರ್ತಿಸಬೇಕು. ಕುಟುಂಬದ ಒಳ ದೈನಂದಿನ ಆಗು-ಹೋಗುಗಳ ಬಗ್ಗೆ ಅತಿಥಿಗಳಂತೆ ನಿರ್ವಿಕಾರ ಭಾವದಿಂದಿದ್ದು ಇರುವ ಸವಲತ್ತುಗಳನ್ನು ಸಂತೃಪ್ತ ಭಾವದಿಂದ ಅನುಭವಿಸುವ ಮನೋಸಂಕಲ್ಪ ಮಾಡಬೇಕು. ತಾವರೆ ಎಲೆ ಮೇಲೆ ಅಂಟಿಕೊಳ್ಳದೇ ಮುತ್ತಿನಂತೆ ಹೊಳೆದು ಹೊಯ್ದಾಡುವ ನೀರಿನ ಹನಿಗಳ ಸೌಂದರ್ಯವೂ ಇರಬೇಕು; ದೈನಂದಿನ ಸಾಂಸಾರಿಕ ಆಗು-ಹೋಗುಗಳ ಬಗ್ಗೆ ಎಲೆಗೆ ಅಂಟಿಕೊಳ್ಳದ ನೀರಿನ ಹನಿಗಳ ಪರಿ ವಿರಕ್ತಿಯೂ ಇರಬೇಕು. ಆಗ ಮಾತ್ರ ಜೀವನದ ಸಂಜೆಗಳು ಅವರಿಗೂ ಮತ್ತು ಅವರ ಕುಟುಂಬಸ್ಥರಿಗೂ ಪ್ರೀತಿ, ವಾತ್ಸಲ್ಯಗಳ ಸೆಲೆಯಾದೀತು ಮತ್ತು ಹಿರೀಕರ ಬಗ್ಗೆ ಗೌರವಾದರಗಳು ಇನ್ನೂ ಉಳಿದೀತು. ಒಣ-ಮದ ಬಿಟ್ಟು ಮುದದಿಂದ ನಡೆದಾಗ ತಾನೆ ಬಾಳು ಸುಂದರ?

ನಿರ್ಮಲ ಪ್ರೀತಿ, ಆರೋಗ್ಯ-ವೈರಾಗ್ಯ, ಋಣರಾಹಿತ್ಯ, ಪಾಪವಿಮುಕ್ತಿ, ನಿಶ್ಚಿಂತೆ ಹಾಗೂ ಭಗವಂತನಲ್ಲಿ ನಂಬಿಕೆ ಇವಿಷ್ಟಿದ್ದರೆ ವೃಧ್ದಾಪ್ಯ ನಿಜವಾಗಿಯೂ ಶೋಭಿಸುತ್ತದೆ; ಆತ್ಮ ಸಂತೃಪ್ತಿಗೆ ಸೋಪಾನವಾಗುತ್ತದೆ. ವಯಸ್ಸಾಗುತ್ತಿರುವವರಿಗೆ ಮತ್ತು ವಯಸ್ಸಾದರವರೆಲ್ಲರಿಗೂ ಆ ಭಗವಂತ ಈ ಜ್ಞಾನವನ್ನು ಮೂಡಿಸಿದರೆಷ್ಟು ಚೆನ್ನ ಅಲ್ಲವೇ?


ಜೀವನ ಸಂಜೆಯ ಹೊಂಗಿರಣ
ಆಗಲಿ ಎಲ್ಲರ ಬಾಳಿನ ಸವಿ ಹೂರಣ |