|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Monday, May 17, 2010


ನನ್ನನ್ನು ನಾನು ಅರ್ಥ ಮಾಡಿ ಕೊಳ್ಳುವ ಪ್ರಕ್ರಿಯೆಯೇ ಪ್ರಾರಂಭವಾಗಿಲ್ಲವೆಂದು ನನಗೀಗ ಅನಿಸತೊಡಗಿದೆ. ಏಕೆಂದರೆ ಅಂತಹ ಒಂದು ಪ್ರಯತ್ನ ನಡೆದೇ ಇಲ್ಲವೇನೋ ಎಂಬ ಅನುಮಾನ ಕೂಡ ಕಾಡತೊಡಗಿದೆ. ಬೇರೆಯವರ ತಪ್ಪು-ಒಪ್ಪುಗಳನ್ನು ಹೆಕ್ಕಿ, ಕೆದಕುವುದರಲ್ಲಿಯೇ ಸಾಕಷ್ಟು ಸಮಯ ಹೋಗಿದ್ದು ಈಗ ಅರಿವಾಗತೊಡಗಿದೆ. ನನ್ನ ತನು-ಮನವ ಮೊದಲರಿಯದೇ ಅನ್ಯರ ವಿಚಾರಕ್ಕೆ ತಲೆ ಹಾಕಿ ನಾನು ತಪ್ಪು ಮಾಡಿದೆನೇನೋ ಎಂಬ ಭಾವನೆ ಕೂಡ ಕಾಡುತ್ತಿದೆ. ನನಗೆ ನಾನೇ ಅರ್ಥವಾಗದಿರುವಾಗ, ಅಂತಹ ಒಂದು ಪ್ರಯತ್ನವನ್ನೂ ಮಾಡದಿರುವಾಗ, ಇತರರನ್ನರಿಯುವ, ಅವರ ಆಚಾರ-ವಿಚಾರಗಳ ಬಗ್ಗೆ ತಲೆಹರಟುವ ಪ್ರವೃತ್ತಿ ಕೂಡ ಎಷ್ಟು ಅನುಚಿತವೆಂದು ನನಗೀಗ ಭಾಸವಾಗುತ್ತಿದೆ. ತಪ್ಪಿನ ಅರಿವು ಈಗಲಾದರೂ ಆಯಿತಲ್ಲ ಎಂಬ ಕೊಂಚ ಸಮಾಧಾನವೇ ಮನಸ್ಸಿಗೆ ಸ್ವಲ್ಪ ಹಗುರ ಭಾವನೆ ನೀಡಿದೆ. ನನ್ನರಿಯುವ ಪ್ರಕ್ರಿಯೆ ಆರಂಭಿಸಿದ್ದೀನಿ. ಸದ್ಯದಲ್ಲಿಯೇ ನನ್ನ ಭಾವನೆಗಳನ್ನು ಪುನ: ಹಂಚಿಕೊಳ್ಳುವವನಿದ್ದೀನಿ.

1 comment: