|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Tuesday, May 18, 2010

ಹರಿಹರಪುರ ಶ್ರೀಗಳೊಂದಿಗೆ


ನಾವು ಕೆಳದಿ ಕವಿ ಮನೆತನಕ್ಕೆ ಸೇರಿದವರೆಂದು ನಮಗೀಗ 4-5 ವರ್ಷಗಳ ಹಿಂದಷ್ಟೇ ತಿಳಿದದ್ದು. ವಂಶದ ಜಾಡನ್ನು ಹಿಡಿದು ಒಂದು ಸ್ವರೂಪಕ್ಕೆ ತಂದು, ಪುಸ್ತಕದ ಕರಡನ್ನು ಹರಿಹರಪುರ ಮಠದ ಶ್ರೀಗಳ ಸನ್ನಿಧಿಯಲ್ಲಿ ಸಲ್ಲಿಸಿದಾಗ, ಅವರು ಬಹಳ ಸಂತಸಪಟ್ಟರು ಮತ್ತು ಹಿರಿಯರನ್ನು ಸ್ಮರಿಸುವ ಇಂತಹ ಪ್ರಯತ್ನವನ್ನು ಶ್ಲಾಘಿಸಿದರು. ಪುಸ್ತಕಕ್ಕೆ ಆಶೀರ್ವಾದಪೂರ್ವಕವಾಗಿ ಬರೆದ ಅವರ ನುಡಿಗಳಂತೂ ಅನುಪಮ. ಅವರ ಅನುಗ್ರಹದಿಂದ ಪುಸ್ತಕ ಬಿಡುಗಡೆ ಆದದ್ದೇ ಅಲ್ಲದೇ ಪ್ರತಿ ವರ್ಷ ಕವಿ ಕುಟುಂಬದ ಎಲ್ಲರೂ ಒಂದೆಡೆ ಸೇರುತ್ತಿರುವುದೂ ಕೂಡ ಹೆಗ್ಗಳಿಕೆಯ ವಿಚಾರ. ಆ ಪುಸ್ತಕ ಮತ್ತು ಕೆಳದಿ ಕವಿ ವಂಶಾವಳಿಯನ್ನು ಅವರಿಗೆ ಸಲ್ಲಿಸಲು ಹೋದ ಕೂಡಲೇ ಅವರು ಮೊದಲು ಕೇಳಿದ ಪ್ರಶ್ನೆಯೇ: "ಕವಿ ವಂಶದ ಪುಸ್ತಕ ಬಿಡುಗಡೆ ಆಯಿತಾ?" ಎಂದು. ನಾವು ಭೇಟಿಯಾದದ್ದು ಪ್ರಥಮ ಭೇಟಿಯ 4-5 ತಿಂಗಳ ನಂತರ. ಆ ಸಂದರ್ಭದಲ್ಲಿ ಅವರು ನನಗೆ ಶಾಲು ಹೊದಿಸಿ ಆಶೀರ್ವದಿಸಿದ ಆ ಘಳಿಗೆಯನ್ನು ನಾನು ಎಂದೂ ಮರೆಯಲಾರೆ. ಚಿತ್ರದಲ್ಲಿ ನನ್ನ ದಿವಂಗತ ತಂದೆ ಕವಿ ವೆಂಕಟಸುಬ್ಬರಾವ್ ಮತ್ತು ನನ್ನ 'ಆಪ್ತ ಸ್ನೇಹಿತ' ರಮೇಶ್ ರವರನ್ನೂ ನೋಡಬಹುದು.

[ಪುಸ್ತಕದ ಹೆಸರು: ಹಳೆ ಬೇರು ಹೊಸ ಚಿಗುರು : ನಮ್ಮ ನಮ್ಮ ವಂಶದ ವಂಶಾವಳಿಯನ್ನು ಮುಂದಿನ ಪೀಳಿಗೆಗಾಗಿ ದಾಖಲಿಸುವುದು ಅತ್ಯವಶ್ಯ. ಅಂತಹ ಪ್ರಯತ್ನಕ್ಕೆ ಈ ಪುಸ್ತಕ ನೆರವಾಗಬಲ್ಲದು. ]

2 comments:

  1. ಚೆನ್ನಾಗಿದೆ. ಕವಿನುಡಿ ಬ್ಲಾಗ್ ಗೆ ಲಿಂಕ್ ಕೊಡು.

    ReplyDelete
  2. ಲಿಂಕ್ ಕೊಡುವುದು ಹೇಗೆ? ತಿಳಿಸು.

    ReplyDelete