|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Wednesday, March 2, 2011

ಹೀಗೇಕೆ? .......................... (ಮುಂದುವರೆದುದು)

* ಕಾಲು ಮುಟ್ಟಿ ನಮಸ್ಕರಿಸುವ ಬಹು ಮಂದಿಯೇ ಹೆಚ್ಚು ಹೆಚ್ಚು ಕಾಲೆಳೆಯುತ್ತಾರೆ.

* ನಮ್ಮಲ್ಲಿ ಒಂದು ಅಂದಾಜಿನ ಪ್ರಕಾರ ಶೇ.90 ರಷ್ಟು ಮಂದಿ ಕುಡುಕರಿದ್ದಾರೆ. ಯಾವುದೇ ಕ್ಷೇತ್ರವನ್ನು ಸೂಕ್ಷ್ಮವಾಗಿ ಅವಲೋಕಿಸಿ, ನಿಮ್ಮದೇ ಲೆಕ್ಕಾಚಾರ ಮಾಡಿನೋಡಿ ಇದು ಸ್ಪಷ್ಟವಾಗುತ್ತದೆ. ಆದರೂ ಇಂದಿಗೂ ಇದು ಒಂದು ದೊಡ್ಡ ಸಮಸ್ಯೆಯೆಂದು ಯಾರಿಗೂ ಅನಿಸಿಲ್ಲ.

* ಸಂಪ್ರದಾಯ, ಆಚರಣೆಗಳು ಬೇರೆಯವರಿಗೆ ಹಾನಿ ಉಂಟು ಮಾಡದೇ, ಪಾಲಿಸಿದವರಿಗೆ ಮುದ ನೀಡುವಂತಿದ್ದರೆ, ವಿಚಾರವಂತರು ಏಕೆ ಬೊಬ್ಬೆ ಹೊಡೆಯಬೇಕು? 

*ಉಳಿದ ಅಲ್ಪ ಕಾಲದಲ್ಲಿ ನೆಮ್ಮದಿಗಾಗಿ ಸರಳಸೂತ್ರಗಳನ್ನು ಅಳವಡಿಸಿಕೊಂಡು ಬಾಳುವ ಬದಲು ಸತ್ಯಾಸತ್ಯತೆ, ಸತ್ಯದ ಅನ್ಷೇಷಣೆ, ಅಧ್ಯಯನ ಮುಂತಾದ ವಿಚಾರಗಳಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಕೇ? ಶಂಕರಾಚಾರ್ಯರು ಹೇಳಿದಂತೆ ಮುಪ್ಪಿನಲ್ಲಿ ವ್ಯಾಕರಣ ಕಲಿತೇನು ಪ್ರಯೋಜನ?

*ಆರೋಗ್ಯ, ನೆಮ್ಮದಿಗೆ ಹಾದಿಗಳು ಹಲವಾರು. ಒಬ್ಬೊಬ್ಬರಿಗೆ ಒಂದೊಂದು ಹಾದಿ. ಅದನ್ನೂ ಅನುಸರಿಸದೇ ಬೇರೆಯವರ ರೀತಿ-ನೀತಿಗಳನ್ನು ಟೀಕಿಸುವುದರಲ್ಲಿಯೇ ತಮ್ಮ ಆರೋಗ್ಯ-ನೆಮ್ಮದಿಗೆ ಕಲ್ಲು ಹಾಕಿಕೊಳ್ಳುವವರೇ ಇಂದು ಅನೇಕ ಮಂದಿ.

* ತಮ್ಮ ತಪ್ಪುಗಳಿಗಾಗಿ ಘೋರ ಶಿಕ್ಷೆಯನ್ನು ಈ ಜನ್ಮದಲ್ಲಿಯೇ ಅನುಭವಿಸುವ/ಅನುಭವಿಸುತ್ತಿರುವ ಅನೇಕ ಮಂದಿಯನ್ನು ನಾವು ನೋಡುತ್ತಿರುತ್ತೇವೆ. ಆದರೂ   ಅವರ ಅಹಂಕಾರದಲ್ಲಿ, ನಡೆ-ನುಡಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಕಾಣದು. ಪ್ರಾಯಶ್ಚಿತ್ತದ ಮಾತಂತೂ ಅತೀ ದೂರ.

* ಮೂರೂ ಬಿಟ್ಟವರು ಊರಿಗೆ ದೊಡ್ಡವರು - ತಿಳಿದೂ ಅವರ ಹಾದಿಯಲ್ಲಿಯೇ ಸಾಗುವವರು ಹಲವರು!

* ಪ್ರತಿಯೊಬ್ಬರಿಗೂ ಅವರವರ ಸಮಸ್ಯೆಗಳೇ ದೊಡ್ಡವು; ಆದ್ದರಿಂದ ಇತರರ ಸಮಸ್ಯೆಗಳಿಗಿಲ್ಲ ನಮ್ಮಲ್ಲಿ ಸಮಯವು!

[ಮುಂದುವರೆಯುವುದು...]

No comments:

Post a Comment