|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Monday, February 7, 2011

ಹೀಗೇಕೆ...... (ಮುಂದುವರೆದುದು)

* ಪ್ರತಿ ದಿನ ಕಾರಿನಲ್ಲಿ ಓಡಾಡುವ ಮಂದಿ, ಪಕ್ಕದ ಮನೆಯ ದಿನಾ ಸೈಕಲ್ಲಿನಲ್ಲಿ ಹೋಗುವ ಆಸಾಮಿ ಮೊಪೆಡ್ ಕೊಂಡ ಕೂಡಲೇ, ಅವನನ್ನು ಕೆಂಗಣ್ಣಿನಿಂದ ನೋಡುತ್ತಾನೆ.

* ಬಹುತೇಕ ಸಂದರ್ಭಗಳಲ್ಲಿ ವ್ಯಕ್ತಿ/ವಿಷಯ/ವಿಚಾರದ ಒಂದು ಮಗ್ಗುಲನ್ನೇ ಆಧರಿಸಿ ನಾವು ನಮ್ಮ ಅಭಿಪ್ರಾಯವನ್ನು ರೂಪಿಸಿಕೊಂಡು ಬಿಡುತ್ತೇವೆ.
                                                                                                                                  
 * ಬಹುತೇಕ ಚರ್ಚಾಗೋಷ್ಠಿಗಳು ವಿಷಯಕ್ಕಿಂತ ವಿಷಯಾಂತರಕ್ಕೇ ಹೆಚ್ಚು ಸೀಮಿತವಾಗಿರುತ್ತವೆ.

* ತಗ್ಗಿ ಬಗ್ಗಿ ನಡೆದಾಗ ಬೆನ್ನೇರಿ ಸವಾರಿ ಮಾಡುವವರೇ ಹೆಚ್ಚು!

* ಸತ್ಯ ವಿಚಾರಗಳಿಗಿಂತ (ಅಥವಾ ಅದನ್ನರಿಯುವ ಪ್ರಯತ್ನಕ್ಕಿಂತ) ಚಾಡಿ ಮಾಡುಗಳೇ ಹೆಚ್ಚು ಆಪ್ಯಾಯಮಾನವಾಗಿ ಬಿಡುತ್ತವೆ.

* ಸಕ್ಕರೆ ಇದ್ದಲ್ಲಿ ಮಾತ್ರಾ ಇರುವೆಗಳು ಮುತ್ತುತ್ತವೆ.

* ದೇಹ ನಶ್ವರ. ಬದುಕು ಅಶಾಶ್ವತ. ದೇಹ-ಬದುಕಿನ ಶ್ರಮವೆಲ್ಲವೂ ಲೌಕಿಕ ವಸ್ತುಗಳ ಸಂಗ್ರಹಕ್ಕೇ ವ್ಯಯ!

   (ಮುಂದುವರೆಯುತ್ತದೆ...)

No comments:

Post a Comment