|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Tuesday, October 12, 2010

ಗುರುವನ್ನು ಸ್ಮರಿಸುತ್ತಾ











ಮುಖದಲ್ಲಿ ಸದಾ ಸಚ್ಚಿದಾನಂದ ಭಾವ

ನಡೆ ನುಡಿಯಲ್ಲಿಲ್ಲ ಯಾವ ಅನುಚಿತ ಹಾವ-ಭಾವ
ವದನಾರವಿಂದ ಹರಿಸಿದೆ ದಿವ್ಯ ತೇಜಸ್ಸಿನಾ ಪ್ರಭೆ
ಅದುವೇ ಸದ್ಗುರುವಿನ ಶ್ರೀ ರಕ್ಷೆಯೆಮಗೆ

ಬೇಡ ಅರ್ಥ ಮದ ಮೋಹಗಳಾ ದಾಹ
ಬೇಡ ಪ್ರೀತಿ ಪಾತ್ರರಲಿ ಅತಿಯಾದಾ ಮೋಹ
ಬೇಡ ಕೀರ್ತಿ ಸನ್ಮಾನ ಪುರಸ್ಕಾರಗಳಾ ಪರಿಗ್ರಹ
ಸದ್ಗುರುವೇ ಕರುಣಿಸು ಎಮಗೆ ಎಲ್ಲದರಲಿ ನಿರ್ಮೋಹ

ನಾಮಸ್ಮರಣೆಗೆ ಎಣೆಯುಂಟೇ ಅನ್ಯಸ್ಮರಣೆ
ನಿತ್ಯವೂ ನಡೆಯಲಿ ಅದರ ಪುರಶ್ಚರಣೆ
ನಾಮಸ್ಮರಣೆಗೆ ತಿಳಿಯಾಗುವುದು ಮನ
ತಿಳಿಯಾದ ಕೊಳದಲ್ಲರಳುವುದು ಅರಿವಿನಾ ಕಮಲ

ಕಣ್ಣಿದ್ದೂ ಕುರುಡನಯ್ಯಾ ನಾನು
ಕಿವಿಯಿದ್ದೂ ಕಿವುಡನಯ್ಯಾ ನಾನು
ಬಾಯಿದ್ದೂ ಮೂಕನಯ್ಯಾ ನಾನು
ದಯೆತೋರಿ ದಾರಿ ತೋರಿಸೋ ಸದ್ಗುರುವೇ ನೀನು

ಅರಿಯದೇ ನುಡಿಯಬೇಡ
ಅರಿಯದೇ ಪರರ ಟೀಕಿಸಬೇಡ
ಅರಿಯದಾ ದಾರಿಯಲಿ ನೀ ನಡೆಯಬೇಡ
ಅರಿವೇ ಗುರುವು ಸಂಶಯ ಬೇಡ

ಕಾವಿ ಬಟ್ಟೆಯಿಲ್ಲ, ಮಡಿಮೈಲಿಗೆಯಿಲ್ಲ,
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿಭಾವವೇ ಈ ಮಹಾನುಭಾವರಾ ಗುರಿ
ಅದುವೇ ನಮ್ಮ ಬೆಲಗೂರಿನ ಸದ್ಗುರುಗಳ ನಿತ್ಯದಾ ಪರಿ

No comments:

Post a Comment