ಹೆಬ್ಬೂರಿನ ಶ್ರೀ ಶ್ರೀ ದತ್ತಾವಧೂತರು
ಬೆಲಗೂರಿನ ಶ್ರೀ ಶ್ರೀ ಬಿಂದು ಮಾಧವ ಶರ್ಮಸ್ವಾಮೀಜಿಗಳು
ಅರಸಿದೆ ನೆಮ್ಮದಿಯ ಬಂಧು-ಬಾಂಧವರಲ್ಲಿ
ಅರಸಿದೆ ಸಾಂತ್ವನವ ಮಿತ್ರ ಬಾಂಧವರಲ್ಲಿ
ಅರಸಿ ಸುಸ್ತಾದೆ ಸಿಗಲಿಲ್ಲ ನೆಮ್ಮದಿ
ನೆಮ್ಮದಿಗೆ ಶ್ರೀ ಗುರುಪಾದವೇ ಗತಿ!
** **
ವ್ಯಕ್ತ ಒಂದಾದರೆ ಅವ್ಯಕ್ತ ನೂರಾರು
ನುದಿ ಒಂದಾದರೆ ಅರ್ಥ ಹಲವಾರು
ಅರ್ಥವಾದದ್ದು ಒಂದಾದರೆ ಉಳಿದದ್ದು ಸಾವಿರಾರು
ಸರಿದಾರಿ ತೋರಿಸಿ ಮುನ್ನಡೆಸೋ ಓ ಸದ್ಗುರು!
** **
ಕಾವಿ ಬಟ್ಟೆಯಿಲ್ಲ, ಮಡಿ ಮೈಲಿಗೆಯಿಲ್ಲ
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿ ಭಾವವೇ ಈ ಮಹಾನುಭಾವರ ಗುರಿ
ಅದುವೇ ನಮ್ಮ ಸದ್ಗುರುಗಳ ನಿತ್ಯದಾ ಪರಿ!
Thanks!
ReplyDelete