|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Tuesday, September 14, 2010

ಗುರುದರ್ಶನ




ಹೆಬ್ಬೂರಿನ ಶ್ರೀ ಶ್ರೀ ದತ್ತಾವಧೂತರು




ಬೆಲಗೂರಿನ ಶ್ರೀ ಶ್ರೀ ಬಿಂದು ಮಾಧವ ಶರ್ಮಸ್ವಾಮೀಜಿಗಳು



ಅರಸಿದೆ ನೆಮ್ಮದಿಯ ಬಂಧು-ಬಾಂಧವರಲ್ಲಿ
ಅರಸಿದೆ ಸಾಂತ್ವನವ ಮಿತ್ರ ಬಾಂಧವರಲ್ಲಿ
ಅರಸಿ ಸುಸ್ತಾದೆ ಸಿಗಲಿಲ್ಲ ನೆಮ್ಮದಿ
ನೆಮ್ಮದಿಗೆ ಶ್ರೀ ಗುರುಪಾದವೇ ಗತಿ!



** **

ವ್ಯಕ್ತ ಒಂದಾದರೆ ಅವ್ಯಕ್ತ ನೂರಾರು
ನುದಿ ಒಂದಾದರೆ ಅರ್ಥ ಹಲವಾರು
ಅರ್ಥವಾದದ್ದು ಒಂದಾದರೆ ಉಳಿದದ್ದು ಸಾವಿರಾರು
ಸರಿದಾರಿ ತೋರಿಸಿ ಮುನ್ನಡೆಸೋ ಓ ಸದ್ಗುರು!


** **

ಕಾವಿ ಬಟ್ಟೆಯಿಲ್ಲ, ಮಡಿ ಮೈಲಿಗೆಯಿಲ್ಲ
ಜಾತಿ ಮತ ಭೇದವಿಲ್ಲ, ಅಂತಸ್ತು ಐಶ್ವರ್ಯದ ಗೊಡವೆಯಿಲ್ಲ
ಸಮಷ್ಟಿ ಭಾವವೇ ಮಹಾನುಭಾವರ ಗುರಿ
ಅದುವೇ ನಮ್ಮ ಸದ್ಗುರುಗಳ ನಿತ್ಯದಾ ಪರಿ!

1 comment: